ಆ್ಯಪ್ನಗರ

ಕಾಶ್ಮೀರ ಪೊಲೀಸರ ಹತ್ಯೆ: ಭಾರತ-ಪಾಕ್ ಮಾತುಕತೆ ಸ್ಥಗಿತ

ಜಮ್ಮು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಪಾಕ್‌ ಉಗ್ರರು ಅಪಹರಿಸಿ ಹತ್ಯೆಗೈದ ಬೆನ್ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಮಾತುಕತೆ ಸ್ಥಗಿತಗೊಂಡಿದೆ.

Vijaya Karnataka Web 21 Sep 2018, 7:14 pm
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಪಾಕ್‌ ಉಗ್ರರು ಅಪಹರಿಸಿ ಹತ್ಯೆಗೈದ ಬೆನ್ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಮಾತುಕತೆ ಸ್ಥಗಿತಗೊಂಡಿದೆ.
Vijaya Karnataka Web Police killed


ಶುಕ್ರವಾರ ಮೂವರು ಪೊಲೀಸರ ಶವ ಕಣಿವೆ ರಾಜ್ಯದಲ್ಲಿ ಪತ್ತೆಯಾಗಿತ್ತು. ಜತೆಗೆ ಪಾಕಿಸ್ತಾನವು ಸುಮಾರು 20 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಉಗ್ರ ಬುರ್ಹಾನ್ ವನಿ ಸಹಿತ ಹಲವು ಉಗ್ರರನ್ನು ನಾಯಕರು ಮತ್ತು ಹುತಾತ್ಮರಂತೆ ಬಿಂಬಿಸಲಾಗಿತ್ತು.
ಇದರ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ ನೈಜ ದರ್ಶನವಾಗಿದ್ದು, ಪಾಕ್‌ನ ಇಬ್ಬಗೆ ನೀತಿ ಬಯಲಾಗಿದೆ. ಹೀಗಾಗಿ ಪಾಕ್ ಜತೆ ಮಾತುಕತೆ ನಡೆಸುವುದು ವ್ಯರ್ಥ ಪ್ರಯತ್ನ ಎಂದು ಭಾರತ ಹೇಳಿದೆ.

ಮೂವರು ಪೊಲೀಸರನ್ನು ಅಪಹರಿಸಿ ಕೊಂದ ಉಗ್ರರು

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ಮೋದಿಗೆ ಮಾಡಿಕೊಂಡ ಮನವಿಯಂತೆ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತವು ವಿದೇಶಾಂಗ ಸಚಿವಾಲಯಗಳ ಮಧ್ಯೆ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತುಕತೆಗೆ ಮುಂದಾಗಿತ್ತು. ಆದರೆ ಪಾಕಿಸ್ತಾನ ಮಾತ್ರ ತನ್ನ ನರಿಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ.

ಕಾಶ್ಮೀರ ಪೊಲೀಸರ ರಾಜೀನಾಮೆ ವದಂತಿ ನಿರಾಕರಿಸಿದ ಕೇಂದ್ರ ಸರಕಾರ

ಜತೆಗೆ ಉಗ್ರರಿಗೆ ಬೆಂಬಲ ಮುಂದುವರಿಸುವ ಜತೆಗೆ ಮಾತುಕತೆಗೆ ಮುಂದಾಗುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಪಾಕಿಸ್ತಾನದ ನೈಜ ಮುಖ ಜಗತ್ತಿಗೆ ಇಂದಿನ ಕೃತ್ಯದೊಂದಿಗೆ ಅನಾವರಣಗೊಂಡಿದೆ. ಹೀಗಾಗಿ ಪಾಕ್‌ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ