ಆ್ಯಪ್ನಗರ

ವಂದೇ ಭಾರತ್ ಮಿಶನ್ ಎರಡನೇ ಹಂತವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ!

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ 'ವಂದೇ ಭಾರತ್ ಮಿಶನ್‌' ಯೋಜನೆಯ ಎರಡನೇ ಹಂತವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಮುಂಬರುವ ಜೂನ್ 13ರವರೆಗೂ ವಂದೇ ಭಾರತ್ ಮಿಶನ್‌ನ ಎರಡನೇ ಹಂತ ಮುಂದುವರೆಯಲಿದೆ.

Vijaya Karnataka Web 21 May 2020, 11:31 pm
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ 'ವಂದೇ ಭಾರತ್ ಮಿಶನ್‌' ಯೋಜನೆಯ ಎರಡನೇ ಹಂತವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
Vijaya Karnataka Web air india
ಸಂಗ್ರಹ ಚಿತ್ರ


ಮುಂಬರುವ ಜೂನ್ 13ರವರೆಗೂ ವಂದೇ ಭಾರತ್ ಮಿಶನ್‌ನ ಎರಡನೇ ಹಂತ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.ವಿಸ್ತೃತ ಭಾಗದಲ್ಲಿ ಮತ್ತೆ 47 ದೇಶಗಳನ್ನು ಸೇರಿಸಿರುವುದಾಗಿಯೂ ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಇದೇ ಮೇ.22ರಂದು ಮುಕ್ತಾಯವಾಗಬೇಕಿದ್ದ ವಂದೇ ಭಾರತ್ ಮಿಶನ್‌ನನ್ನು ಮುಂಬರುವ ಜೂನ್ 113ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

31 ದೇಶ, 149 ವಿಮಾನ..! ಮೇ 16 ರಿಂದ ವಂದೇ ಭಾರತ್‌ ಮಿಷನ್ 2.0

ಮೇ 7 ರಂದು ಆರಂಭವಾದ ವಂದೇ ಭಾರತ್ ಮಿಶನ್ ಯೋಜನೆಯಡಿಯಲ್ಲಿ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಒಟ್ಟು 23, 475 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಅನುರಾಗ್ ಶ್ರೀವಾತ್ಸವ್ ಮಾಹಿತಿ ನೀಡಿದರು.

ಇದೀಗ ವಂದೇ ಭಾರತ್ ಮಿಶನ್ ಎರಡನೇ ಹಂತವನ್ನು ವಿಸ್ತರಿಸಲಾಗಿದ್ದು, 47 ದೇಶಗಳಲ್ಲಿರುವ ಮತ್ತಷ್ಟು ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಾಗುವುದು ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ