ಆ್ಯಪ್ನಗರ

ದೇಶವನ್ನು ಸಂಪೂರ್ಣ ಆವರಿಸಿದ ಮುಂಗಾರು; ನಿಗದಿಗೂ ಮುಂಚೆ ಮಳೆ

ಪ್ರಸಕ್ತ ವರ್ಷ ಮುಂಗಾರು ನಿಗದಿತ ಅವಧಿಗಿಂತ 17 ದಿನ ಮೊದಲೇ ಸಂಪೂರ್ಣ ದೇಶವನ್ನು ತಲುಪಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

Vijaya Karnataka Web 29 Jun 2018, 7:36 pm
ಹೊಸದಿಲ್ಲಿ: ಪ್ರಸಕ್ತ ವರ್ಷ ಮುಂಗಾರು ನಿಗದಿತ ಅವಧಿಗಿಂತ 17 ದಿನ ಮೊದಲೇ ಸಂಪೂರ್ಣ ದೇಶವನ್ನು ತಲುಪಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
Vijaya Karnataka Web monsoon 4


ರಾಜಸ್ಥಾನದ ಶ್ರೀಗಂಗಾನಗರ್‌ ಪ್ರದೇಶಕ್ಕೂ ಮಳೆ ತಲುಪಿದ್ದು, ನಿಗದಿಯಂತೆ ಅಲ್ಲಿ ಜುಲೈ 15ಕ್ಕೆ ಸಾಮಾನ್ಯವಾಗಿ ಮುಂಗಾರು ಪ್ರವೇಶವಾಗುತ್ತಿತ್ತು. ಆದರೆ ಈ ಬಾರಿ ಅದಕ್ಕೂ ಮುಂಚಿತವಾಗಿ ತಲುಪಿದೆ.

ಹವಾಮಾನ ಇಲಾಖೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೋಹಪತ್ರ ಮುಂಗಾರು ದೇಶವನ್ನು ಆವರಿಸಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಜುಲೈ 1ಕ್ಕೆ ಮಳೆ ಎಲ್ಲ ಪ್ರದೇಶಗಳನ್ನು ತಲುಪುತ್ತದೆ.

ಆದರೆ ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿದ್ದು, ಎಲ್ಲ ಕಡೆಯೂ ತಲುಪಿದೆ. ಜೂನ್‌ 1ರಿಂದ ಮಳೆಗಾಲ ಆರಂಭವಾದರೆ ಸೆ. 30ರವರೆಗೆ ಮಳೆ ಇರುತ್ತದೆ ಎಂದು ಮೋಹಪತ್ರ ತಿಳಿಸಿದ್ದಾರೆ. ಪ್ರಸಕ್ತ ವರ್ಷ ಮುಂಗಾರು ದೇಶವನ್ನು ಮೇ 29ರಂದು ಪ್ರವೇಶಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ