ಆ್ಯಪ್ನಗರ

ಪುಲ್ವಾಮಾ ದಾಳಿಯಲ್ಲಿ ಜೈಷೆ ಕೈವಾಡ: ಸಾಕ್ಷ್ಯ ನೀಡಿದ ಭಾರತ

ಈ ದಾಳಿಯಲ್ಲಿ ಪಾಕ್‌ ಮೂಲದ ಜೈಷೆ ಉಗ್ರ ಸಂಘಟನೆ ಸಂಚಿನ ಕುರಿತಾಗಿ ಭಾರತ ಖಚಿತ ಸಾಕ್ಷ್ಯಾಧಾರಗಳನ್ನು ಒದಗಿಸಿದೆ.

Vijaya Karnataka 28 Feb 2019, 8:09 am
ಹೊಸದಿಲ್ಲಿ: ಫೆ.14ರಂದು ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ತನ್ನ ಕೈವಾಡದ ಬಗ್ಗೆ ಸಾಕ್ಷ್ಯಾಧಾರ ಕೇಳುತ್ತಿದ್ದ ಪಾಕಿಸ್ತಾನ ಈಗ ಇಕ್ಕಟ್ಟಿಗೆ ಸಿಲುಕಿದೆ.
Vijaya Karnataka Web pulwama


ಈ ದಾಳಿಯಲ್ಲಿ ಪಾಕ್‌ ಮೂಲದ ಜೈಷೆ ಉಗ್ರ ಸಂಘಟನೆ ಸಂಚಿನ ಕುರಿತಾಗಿ ಭಾರತ ಖಚಿತ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ದಿಲ್ಲಿಯಲ್ಲಿರುವ ಪಾಕ್‌ ರಾಯಭಾರಿಯನ್ನು ಕರೆಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಸಾಕ್ಷ್ಯಾಧಾರಗಳನ್ನು ಹಸ್ತಾಂತರಿಸಿದೆ.

ಜತೆಗೆ ''ದಾಳಿಯಲ್ಲಿ ಜೈಷೆ ಕೈವಾಡ, ಜೈಷೆ ಉಗ್ರರ ಕ್ಯಾಂಪ್‌ಗಳ ಅಸ್ತಿತ್ವದ ಬಗ್ಗೆ ಬಲವಾದ ಆಧಾರಗಳನ್ನು ಒದಗಿಸಿದ್ದೇವೆ. ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಜರುಗಿಸಲಿದೆ ಎಂದು ಅಪೇಕ್ಷಿಸುತ್ತಿದ್ದೇವೆ,'' ಎಂದು ಸಚಿವಾಲಯ ಪಾಕ್‌ ಅಧಿಕಾರಿಗೆ ಖಡಕ್ಕಾಗಿ ಹೇಳಿದೆ.

ಪುಲ್ವಾಮಾ ದಾಳಿಯಲ್ಲಿ ಪಾಕ್‌ ಕೈವಾಡಕ್ಕೆ ಆಧಾರ ಒದಗಿಸಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ