ದ್ರಾಸ್ (ಕಾರ್ಗಿಲ್ ವಲಯ): ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ಇಡೀ ಜಮ್ಮು-ಕಾಶ್ಮೀರದ ಮೇಲೆ ಭಾರತ ಸಂಪೂರ್ಣ ಹಕ್ಕು ಹೊಂದಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
''ಪಾಕ್ ಆಕ್ರಮಿತ ಪಾಕಿಸ್ತಾನವನ್ನು ಹಿಂಪಡೆಯುವುದು ಹೇಗೆಂಬುದನ್ನು ಸರಕಾರ ನಿರ್ಧರಿಸಲಿದೆ. ಅದನ್ನು ರಾಜತಾಂತ್ರಿಕವಾಗಿ ಹಿಂಪಡೆಯಬೇಕೇ ಅಥವಾ ಬೇರೆ ವಿಧಾನದಲ್ಲೋ ಎಂಬುದು ರಾಜಕೀಯ ತೀರ್ಮಾನ. ಯಾವುದೇ ಆದೇಶ ಬಂದರೂ ಸೇನೆ ಪಾಲಿಸಲಿದೆ,'' ಎಂದೂ ಅವರು ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧದ 20ನೇ ವರ್ಷದ ವಿಜಯೋತ್ಸವದ ಅಂಗವಾಗಿ ಶುಕ್ರವಾರ ಕಾರ್ಗಿಲ್ ವಲಯದ ದ್ರಾಸ್ನಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರದ ಇತಿಹಾಸ ವಿವರಿಸುತ್ತಲೇ ಮತ್ತೊಮ್ಮೆ ನೆರೆ ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದರು.
''1947ರ ಅಕ್ಟೋಬರ್ನಲ್ಲಿ ಆಗಿನ ರಾಜ ಹರಿಸಿಂಗ್ ಅವರ ಆಡಳಿತದಲ್ಲಿದ್ದ ಕಾಶ್ಮೀರ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡಿತು. ಆಗ ಕಾಶ್ಮೀರದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೇನೆಯು ಪಾಕಿಸ್ತಾನಿ ಅಕ್ರಮ ನುಸುಳುಕೋರರನ್ನು ಹೊರಹಾಕಿತು. ಆದರೆ ಸರಿಯಾಗಿ ಅದೇ ಸಮಯಕ್ಕೆ ಕದನ ವಿರಾಮ ಘೋಷಿಸಲಾಯಿತು. ಆಗಿನಿಂದಲೂ ಪಾಕಿಸ್ತಾನದ ಅಧೀನದಲ್ಲಿರುವ ಕಾಶ್ಮೀರವನ್ನು 'ಪಿಒಕೆ' ಎಂದು ಕರೆಯಲಾಗುತ್ತಿದೆ,'' ಎಂದು ರಾವತ್ ವಿವರಿಸಿದರು.
ದುಸ್ಸಾಹಸಕ್ಕೆ ಮುಂದಾದರೆ ಹುಷಾರ್: ''ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಸಮರ್ಥ ಯೋಧರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. 20 ವರ್ಷಗಳ ಹಿಂದೆ ಕಾರ್ಗಿಲ್, ದ್ರಾಸ್, ಟೈಗರ್ಹಿಲ್ಸ್ ಸೇರಿದಂತೆ ವಿವಿಧೆಡೆ ನಡೆದ ಯುದ್ಧದ ವೇಳೆ ಭಾರತೀಯ ಸೇನೆಯ ಅಗಾಧ ಶಕ್ತಿ-ಸಾಮರ್ಥ್ಯ ಏನೆಂಬುದು ಪಾಕಿಸ್ತಾನಕ್ಕೆ ಚೆನ್ನಾಗಿ ಅರಿವಾಗಿದೆ. ನಮ್ಮ ವೀರಾಗ್ರಣಿಗಳು ಉಗ್ರರಿಗೆ ಮತ್ತು ಅವರಿಗೆ ಕುಮ್ಮಕ್ಕು ನೀಡಿದ ಪಾಕ್ ಯೋಧರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಪಾಕಿಸ್ತಾನ ಮತ್ತೊಮ್ಮೆ ಇಂತಹ ದುಸ್ಸಾಹಸಕ್ಕೆ ಮುಂದಾದರೆ, ಆ ದೇಶಕ್ಕೆ ತಕ್ಕ ಶಾಸ್ತಿಯಾಗಲಿದೆ,'' ಎಂದು ರಾವತ್ ಗುಡುಗಿದರು.
ಭಾರತೀಯ ಭೂ ಸೇನೆಯನ್ನು ಮತ್ತಷ್ಟು ಆಧುನೀಕರಣಗೊಳಿಸಿ ಅತ್ಯಂತ ಶಕ್ತಿಯುತ ಶಸ್ತ್ರಾಸ್ತ್ರಗಳನ್ನು ಹೊಂದುವ ಪ್ರಕ್ರಿಯೆ ಮುಂದುವರೆದಿದೆ. 2020ರ ವೇಳೆಗೆ ಹೋವಿಡ್ಜರ್ ಫಿರಂಗಿಗಳು, ಕೆ-9 ವಜ್ರ ದೇಶೀಯ ಯುದ್ಧ ಟ್ಯಾಂಕ್ಗಳು ಸೇನಾ ಬತ್ತಳಿಕೆಗೆ ಸೇರಲಿವೆ,'' ಎಂದರು.
ಅಪರೂಪದ ಚಿತ್ರ ಹಂಚಿಕೊಂಡ ಮೋದಿ
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 1999ರಲ್ಲಿ ತಾವು ಕಾರ್ಗಿಲ್ಗೆ ಭೇಟಿ ನೀಡಿದ ಅಪರೂಪದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ''1999ರ ಕಾರ್ಗಿಲ್ ಯುದ್ಧದ ವೇಳೆ ಕಾರ್ಗಿಲ್ಗೆ ಭೇಟಿ ನೀಡಿ, ಧೀರ ಯೋಧರಿಗೆ ಬೆಂಬಲ ಸೂಚಿಸುವ ಅವಕಾಶ ನನಗೆ ಸಿಕ್ಕಿತ್ತು. ಆಗ ನಾನು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಯೋಧರ ಜತೆ ಆಗ ನಡೆಸಿದ ಸಮಾಲೋಚನೆ ನಡೆಸಿದ್ದು ಅವಿಸ್ಮರಣೀಯ,'' ಎಂದು ಮೋದಿ ನೆನಪನ್ನು ಮೆಲುಕು ಹಾಕಿದ್ದಾರೆ.
ಗೇಮ್ ಚೇಂಜರ್ 'ಮಿರಾಜ್ 2000'
ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿಗೆ ಆಗ ನಿಯೋಜಿಸಿದ್ದ 'ಮಿರಾಜ್ 2000' ಯುದ್ಧ ವಿಮಾನಗಳ ಕೊಡುಗೆಯೂ ಸಾಕಷ್ಟಿದೆ. ಸುಮಾರು 75 ದಿನ ನಡೆದ ಯುದ್ಧದ ವೇಳೆ ಮುಗಿಲೆತ್ತರದ, ಹಿಮಚ್ಛಾದಿತ ಪರ್ವತಗಳ ಮೇಲೆ ಹಾರಾಟ ನಡೆಸಿ, ಶತ್ರುದೇಶದಲ್ಲಿನ ಗುರಿಗಳನ್ನು ಧ್ವಂಸ ಮಾಡುವಲ್ಲಿ 'ಮಿರಾಜ್ 2000' ವಿಮಾನಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಇವುಗಳ ನಿಯೋಜನೆಯು ಭಾರತಕ್ಕೆ ವರದಾನವಾಯಿತು ಎಂದು ಹಿರಿಯ ಐಎಎಫ್ ಅಧಿಕಾರಿಗಳು ಸ್ಮರಿಸಿದ್ದಾರೆ. ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಕಳೆದ ಫೆಬ್ರವರಿಯಲ್ಲಿ ಭಾರತ ನಡೆಸಿದ ವಾಯುದಾಳಿಗೂ 'ಮಿರಾಜ್ 2000' ಯುದ್ಧ ವಿಮಾನಗಳನ್ನು ಬಳಸಲಾಗಿತ್ತು.
ಭಾರತದ ವಿರುದ್ಧ ಪಾಕ್ ಯುದ್ಧ ಅಸಾಧ್ಯ: ರಾಜನಾಥ್
ಭಾರತದ ವಿರುದ್ಧ ಪೂರ್ಣ ಪ್ರಮಾಣದಲ್ಲಾಗಲೀ ಅಥವಾ ಸೀಮಿತ ಪ್ರಮಾಣದಲ್ಲಾಗಲಿ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಶಕ್ತಿಯಿಲ್ಲ. ಹೀಗಾಗಿಯೇ ನೆರೆ ದೇಶವು ಉಗ್ರರ ಮುಖಾಂತರ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 20ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರ ಯೋಧರಿಗೆ ಲೋಕಸಭೆಯಲ್ಲಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ''ನಮ್ಮ ಯೋಧರ ಶೌರ್ಯ ಮತ್ತು ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ,'' ಎಂದರು.
ಯೋಧರಿಗೆ ಗೌರವ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೂ ಲೋಕಸಭೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಅವರು ಕಾರ್ಗಿಲ್ ಯುದ್ಧದ ಬಗ್ಗೆ ಚರ್ಚೆ ನಡೆಯಬೇಕೆಂದು ಆಗ್ರಹಿಸಿದರು. ಇತ್ತ ರಾಜ್ಯಸಭೆಯಲ್ಲಿ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಭಾರತೀಯ ಯೋಧರ ಶೌರ್ಯ-ಸಾಹಸಗಳನ್ನು ಶ್ಲಾಘಿಸಿದರು.
ಶ್ರೀನಗರದಲ್ಲಿ ರಾಷ್ಟ್ರಪತಿಗಳಿಂದ ಗೌರವ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ 20ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರ ಯೋಧರು ಹಾಗೂ ಹುತಾತ್ಮರಿಗೆ ನಮನ ಸಲ್ಲಿಸಿದರು. ಶ್ರೀನಗರದ ಬಾದಾಮಿ ಬಾಗ್ನಲ್ಲಿರುವ 15 ಸೇನಾ ಕಾರ್ಫ್ಸ್ ಮುಖ್ಯಕಚೇರಿಯಲ್ಲಿ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸುವ ಮೂಲಕ ಅವರು ಯುದ್ಧದಲ್ಲಿ ಹೋರಾಡಿದ ಯೋಧರನ್ನು ಸ್ಮರಿಸಿದರು. ದ್ರಾಸ್ನಲ್ಲಿರುವ ವಿಶೇಷ ಯುದ್ಧ ಸ್ಮಾರಕಕ್ಕೆ ಕೋವಿಂದ್ ಭೇಟಿನೀಡುವ ಯೋಜನೆ ಇತ್ತಾದರೂ, ಪ್ರತಿಕೂಲ ಹವಾಮಾನದಿಂದ ಕೊನೆಯ ಕ್ಷಣದಲ್ಲಿ ದ್ರಾಸ್ ಭೇಟಿ ಕೈಬಿಡಲಾಯಿತು.
''ಪಾಕ್ ಆಕ್ರಮಿತ ಪಾಕಿಸ್ತಾನವನ್ನು ಹಿಂಪಡೆಯುವುದು ಹೇಗೆಂಬುದನ್ನು ಸರಕಾರ ನಿರ್ಧರಿಸಲಿದೆ. ಅದನ್ನು ರಾಜತಾಂತ್ರಿಕವಾಗಿ ಹಿಂಪಡೆಯಬೇಕೇ ಅಥವಾ ಬೇರೆ ವಿಧಾನದಲ್ಲೋ ಎಂಬುದು ರಾಜಕೀಯ ತೀರ್ಮಾನ. ಯಾವುದೇ ಆದೇಶ ಬಂದರೂ ಸೇನೆ ಪಾಲಿಸಲಿದೆ,'' ಎಂದೂ ಅವರು ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧದ 20ನೇ ವರ್ಷದ ವಿಜಯೋತ್ಸವದ ಅಂಗವಾಗಿ ಶುಕ್ರವಾರ ಕಾರ್ಗಿಲ್ ವಲಯದ ದ್ರಾಸ್ನಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರದ ಇತಿಹಾಸ ವಿವರಿಸುತ್ತಲೇ ಮತ್ತೊಮ್ಮೆ ನೆರೆ ರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದರು.
''1947ರ ಅಕ್ಟೋಬರ್ನಲ್ಲಿ ಆಗಿನ ರಾಜ ಹರಿಸಿಂಗ್ ಅವರ ಆಡಳಿತದಲ್ಲಿದ್ದ ಕಾಶ್ಮೀರ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡಿತು. ಆಗ ಕಾಶ್ಮೀರದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೇನೆಯು ಪಾಕಿಸ್ತಾನಿ ಅಕ್ರಮ ನುಸುಳುಕೋರರನ್ನು ಹೊರಹಾಕಿತು. ಆದರೆ ಸರಿಯಾಗಿ ಅದೇ ಸಮಯಕ್ಕೆ ಕದನ ವಿರಾಮ ಘೋಷಿಸಲಾಯಿತು. ಆಗಿನಿಂದಲೂ ಪಾಕಿಸ್ತಾನದ ಅಧೀನದಲ್ಲಿರುವ ಕಾಶ್ಮೀರವನ್ನು 'ಪಿಒಕೆ' ಎಂದು ಕರೆಯಲಾಗುತ್ತಿದೆ,'' ಎಂದು ರಾವತ್ ವಿವರಿಸಿದರು.
ದುಸ್ಸಾಹಸಕ್ಕೆ ಮುಂದಾದರೆ ಹುಷಾರ್: ''ಕಾರ್ಗಿಲ್ ಸಮರದಲ್ಲಿ ಪಾಕಿಸ್ತಾನಕ್ಕೆ ನಮ್ಮ ಸಮರ್ಥ ಯೋಧರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. 20 ವರ್ಷಗಳ ಹಿಂದೆ ಕಾರ್ಗಿಲ್, ದ್ರಾಸ್, ಟೈಗರ್ಹಿಲ್ಸ್ ಸೇರಿದಂತೆ ವಿವಿಧೆಡೆ ನಡೆದ ಯುದ್ಧದ ವೇಳೆ ಭಾರತೀಯ ಸೇನೆಯ ಅಗಾಧ ಶಕ್ತಿ-ಸಾಮರ್ಥ್ಯ ಏನೆಂಬುದು ಪಾಕಿಸ್ತಾನಕ್ಕೆ ಚೆನ್ನಾಗಿ ಅರಿವಾಗಿದೆ. ನಮ್ಮ ವೀರಾಗ್ರಣಿಗಳು ಉಗ್ರರಿಗೆ ಮತ್ತು ಅವರಿಗೆ ಕುಮ್ಮಕ್ಕು ನೀಡಿದ ಪಾಕ್ ಯೋಧರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಪಾಕಿಸ್ತಾನ ಮತ್ತೊಮ್ಮೆ ಇಂತಹ ದುಸ್ಸಾಹಸಕ್ಕೆ ಮುಂದಾದರೆ, ಆ ದೇಶಕ್ಕೆ ತಕ್ಕ ಶಾಸ್ತಿಯಾಗಲಿದೆ,'' ಎಂದು ರಾವತ್ ಗುಡುಗಿದರು.
ಭಾರತೀಯ ಭೂ ಸೇನೆಯನ್ನು ಮತ್ತಷ್ಟು ಆಧುನೀಕರಣಗೊಳಿಸಿ ಅತ್ಯಂತ ಶಕ್ತಿಯುತ ಶಸ್ತ್ರಾಸ್ತ್ರಗಳನ್ನು ಹೊಂದುವ ಪ್ರಕ್ರಿಯೆ ಮುಂದುವರೆದಿದೆ. 2020ರ ವೇಳೆಗೆ ಹೋವಿಡ್ಜರ್ ಫಿರಂಗಿಗಳು, ಕೆ-9 ವಜ್ರ ದೇಶೀಯ ಯುದ್ಧ ಟ್ಯಾಂಕ್ಗಳು ಸೇನಾ ಬತ್ತಳಿಕೆಗೆ ಸೇರಲಿವೆ,'' ಎಂದರು.
ಅಪರೂಪದ ಚಿತ್ರ ಹಂಚಿಕೊಂಡ ಮೋದಿ
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 1999ರಲ್ಲಿ ತಾವು ಕಾರ್ಗಿಲ್ಗೆ ಭೇಟಿ ನೀಡಿದ ಅಪರೂಪದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ''1999ರ ಕಾರ್ಗಿಲ್ ಯುದ್ಧದ ವೇಳೆ ಕಾರ್ಗಿಲ್ಗೆ ಭೇಟಿ ನೀಡಿ, ಧೀರ ಯೋಧರಿಗೆ ಬೆಂಬಲ ಸೂಚಿಸುವ ಅವಕಾಶ ನನಗೆ ಸಿಕ್ಕಿತ್ತು. ಆಗ ನಾನು ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಯೋಧರ ಜತೆ ಆಗ ನಡೆಸಿದ ಸಮಾಲೋಚನೆ ನಡೆಸಿದ್ದು ಅವಿಸ್ಮರಣೀಯ,'' ಎಂದು ಮೋದಿ ನೆನಪನ್ನು ಮೆಲುಕು ಹಾಕಿದ್ದಾರೆ.
ಗೇಮ್ ಚೇಂಜರ್ 'ಮಿರಾಜ್ 2000'
ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿಗೆ ಆಗ ನಿಯೋಜಿಸಿದ್ದ 'ಮಿರಾಜ್ 2000' ಯುದ್ಧ ವಿಮಾನಗಳ ಕೊಡುಗೆಯೂ ಸಾಕಷ್ಟಿದೆ. ಸುಮಾರು 75 ದಿನ ನಡೆದ ಯುದ್ಧದ ವೇಳೆ ಮುಗಿಲೆತ್ತರದ, ಹಿಮಚ್ಛಾದಿತ ಪರ್ವತಗಳ ಮೇಲೆ ಹಾರಾಟ ನಡೆಸಿ, ಶತ್ರುದೇಶದಲ್ಲಿನ ಗುರಿಗಳನ್ನು ಧ್ವಂಸ ಮಾಡುವಲ್ಲಿ 'ಮಿರಾಜ್ 2000' ವಿಮಾನಗಳು ನಿರ್ಣಾಯಕ ಪಾತ್ರ ವಹಿಸಿದ್ದವು. ಇವುಗಳ ನಿಯೋಜನೆಯು ಭಾರತಕ್ಕೆ ವರದಾನವಾಯಿತು ಎಂದು ಹಿರಿಯ ಐಎಎಫ್ ಅಧಿಕಾರಿಗಳು ಸ್ಮರಿಸಿದ್ದಾರೆ. ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಕಳೆದ ಫೆಬ್ರವರಿಯಲ್ಲಿ ಭಾರತ ನಡೆಸಿದ ವಾಯುದಾಳಿಗೂ 'ಮಿರಾಜ್ 2000' ಯುದ್ಧ ವಿಮಾನಗಳನ್ನು ಬಳಸಲಾಗಿತ್ತು.
ಭಾರತದ ವಿರುದ್ಧ ಪಾಕ್ ಯುದ್ಧ ಅಸಾಧ್ಯ: ರಾಜನಾಥ್
ಭಾರತದ ವಿರುದ್ಧ ಪೂರ್ಣ ಪ್ರಮಾಣದಲ್ಲಾಗಲೀ ಅಥವಾ ಸೀಮಿತ ಪ್ರಮಾಣದಲ್ಲಾಗಲಿ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಶಕ್ತಿಯಿಲ್ಲ. ಹೀಗಾಗಿಯೇ ನೆರೆ ದೇಶವು ಉಗ್ರರ ಮುಖಾಂತರ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 20ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರ ಯೋಧರಿಗೆ ಲೋಕಸಭೆಯಲ್ಲಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ''ನಮ್ಮ ಯೋಧರ ಶೌರ್ಯ ಮತ್ತು ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ,'' ಎಂದರು.
ಯೋಧರಿಗೆ ಗೌರವ ಸಲ್ಲಿಸುವ ವೇಳೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೂ ಲೋಕಸಭೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಅವರು ಕಾರ್ಗಿಲ್ ಯುದ್ಧದ ಬಗ್ಗೆ ಚರ್ಚೆ ನಡೆಯಬೇಕೆಂದು ಆಗ್ರಹಿಸಿದರು. ಇತ್ತ ರಾಜ್ಯಸಭೆಯಲ್ಲಿ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಭಾರತೀಯ ಯೋಧರ ಶೌರ್ಯ-ಸಾಹಸಗಳನ್ನು ಶ್ಲಾಘಿಸಿದರು.
ಶ್ರೀನಗರದಲ್ಲಿ ರಾಷ್ಟ್ರಪತಿಗಳಿಂದ ಗೌರವ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ 20ನೇ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವೀರ ಯೋಧರು ಹಾಗೂ ಹುತಾತ್ಮರಿಗೆ ನಮನ ಸಲ್ಲಿಸಿದರು. ಶ್ರೀನಗರದ ಬಾದಾಮಿ ಬಾಗ್ನಲ್ಲಿರುವ 15 ಸೇನಾ ಕಾರ್ಫ್ಸ್ ಮುಖ್ಯಕಚೇರಿಯಲ್ಲಿ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸುವ ಮೂಲಕ ಅವರು ಯುದ್ಧದಲ್ಲಿ ಹೋರಾಡಿದ ಯೋಧರನ್ನು ಸ್ಮರಿಸಿದರು. ದ್ರಾಸ್ನಲ್ಲಿರುವ ವಿಶೇಷ ಯುದ್ಧ ಸ್ಮಾರಕಕ್ಕೆ ಕೋವಿಂದ್ ಭೇಟಿನೀಡುವ ಯೋಜನೆ ಇತ್ತಾದರೂ, ಪ್ರತಿಕೂಲ ಹವಾಮಾನದಿಂದ ಕೊನೆಯ ಕ್ಷಣದಲ್ಲಿ ದ್ರಾಸ್ ಭೇಟಿ ಕೈಬಿಡಲಾಯಿತು.