ಆ್ಯಪ್ನಗರ

‘ಮೇಕ್‌ ಇನ್‌ ಇಂಡಿಯಾ’ದಿಂದ ‘ರೇಪ್‌ ಇನ್‌ ಇಂಡಿಯಾ’ದತ್ತ: ಅಧೀರ್‌ ರಂಜನ್‌ ಚೌಧರಿ ವಿವಾದಾತ್ಮಕ ಹೇಳಿಕೆ

“ಎಲ್ಲದರ ಬಗ್ಗೆಯೂ ಪ್ರತಿಕ್ರಿಯೆ ನೀಡುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ (ಮಹಿಳೆಯರ ಮೇಲಿನ ದೌರ್ಜನ್ಯ) ಬಗ್ಗೆ ಮೌನವಾಗಿರುವುದು ದುರದೃಷ್ಟಕರ. 'ಮೇಕ್‌ ಇನ್‌ ಇಂಡಿಯಾ'ದಿಂದ ಭಾರತ ನಿಧಾನಕ್ಕೆ 'ರೇಪ್‌ ಇನ್‌ ಇಂಡಿಯಾ'ದತ್ತ ತೆರಳುತ್ತಿದೆ,” ಎಂದು ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

Times Now 10 Dec 2019, 3:17 pm

ಹೊಸದಿಲ್ಲಿ: 'ಮೇಕ್‌ ಇನ್‌ ಇಂಡಿಯಾ'ದಿಂದ ಭಾರತ ನಿಧಾನಕ್ಕೆ 'ರೇಪ್‌ ಇನ್‌ ಇಂಡಿಯಾ'ದತ್ತ ಮುಖ ಮಾಡಿದೆ ಎಂಬುದಾಗಿ ಕಾಂಗ್ರೆಸ್‌ ಲೋಕಸಭಾ ಸದಸ್ಯ ಅಧೀರ್‌ ರಂಜನ್‌ ಚೌಧರಿ ಮಂಗಳವಾರ ಲೋಕಸಭೆಯಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Vijaya Karnataka Web Adhir Ranjan Choudhary


“ಎಲ್ಲದರ ಬಗ್ಗೆಯೂ ಪ್ರತಿಕ್ರಿಯೆ ನೀಡುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ (ಮಹಿಳೆಯರ ಮೇಲಿನ ದೌರ್ಜನ್ಯ) ಬಗ್ಗೆ ಮೌನವಾಗಿರುವುದು ದುರದೃಷ್ಟಕರ. 'ಮೇಕ್‌ ಇನ್‌ ಇಂಡಿಯಾ'ದಿಂದ ಭಾರತ ನಿಧಾನಕ್ಕೆ 'ರೇಪ್‌ ಇನ್‌ ಇಂಡಿಯಾ'ದತ್ತ ತೆರಳುತ್ತಿದೆ,” ಎಂದು ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಮತ್ತು ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯ ಹತ್ಯೆಗೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

'ನಿರ್ಮಲ' ಎನ್ನುವ ಬದಲು 'ನಿರ್ಬಲ' ಎನ್ನಲೇ? : ಮತ್ತೆ ಅವಾಂತರ ಸೃಷ್ಟಿಸಿದ ಅಧೀರ್ ರಂಜನ್ ಚೌಧರಿ!

ಈ ಹಿಂದೆ ಡಿಸೆಂಬರ್‌ 4ರಂದು ಇದೇ ಅಧೀರ್‌ ರಂಜನ್‌ ಚೌಧರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ನಿರ್ಬಲ (ದುರ್ಬಲ) ಎಂದು ಕರೆದು ಲೋಕಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದರು. ನಂತರ ಅವರು ನಿರ್ಮಲಾ ಸೀತಾರಾಮನ್‌ ಅವರ ಕ್ಷಮೆ ಕೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ