ಆ್ಯಪ್ನಗರ

ಡೋಕ್ಲಾಂ ಬಿಕ್ಕಟ್ಟು: ಬುಲೆಟ್ ಹಾರಿಸದೇ ಹೋದರೂ ಗೆಲ್ಲೋದು ಭಾರತ

ಸಿಕ್ಕಿಂ ರಾಜ್ಯದ ಡೋಕ್ಲಾಂನಲ್ಲಿ ಉಂಟಾಗಿರುವ ಗಡಿ ಬಿಕ್ಕಟ್ಟು ಅಂದುಕೊಂಡಷ್ಟು ಸುಲಭವಾಗಿ ಬಗೆ ಹರಿಯುವಂತೆ ಕಾಣುತ್ತಿಲ್ಲ. ಚೀನಾ-ಭಾರತ ಗಡಿ ಸಂಘರ್ಷ ಹೊಸದಲ್ಲದೇ ಹೋದರೂ, ಇಷ್ಟು ದಿನಗಳ ಕಾಲ ಉಭಯ ದೇಶಗಳ ಬಿಕ್ಕಟ್ಟು ಮುಂದುವರಿಯುತ್ತಿರುವುದು ಇದೇ ಮೊದಲು.

ಎಕನಾಮಿಕ್ ಟೈಮ್ಸ್ 11 Aug 2017, 2:36 pm
ಹೊಸದಿಲ್ಲಿ: ಸಿಕ್ಕಿಂ ರಾಜ್ಯದ ಡೋಕ್ಲಾಂನಲ್ಲಿ ಉಂಟಾಗಿರುವ ಗಡಿ ಬಿಕ್ಕಟ್ಟು ಅಂದುಕೊಂಡಷ್ಟು ಸುಲಭವಾಗಿ ಬಗೆ ಹರಿಯುವಂತೆ ಕಾಣುತ್ತಿಲ್ಲ. ಚೀನಾ-ಭಾರತ ಗಡಿ ಸಂಘರ್ಷ ಹೊಸದಲ್ಲದೇ ಹೋದರೂ, ಇಷ್ಟು ದಿನಗಳ ಕಾಲ ಉಭಯ ದೇಶಗಳ ಬಿಕ್ಕಟ್ಟು ಮುಂದುವರಿಯುತ್ತಿರುವುದು ಇದೇ ಮೊದಲು.
Vijaya Karnataka Web india is winning doklam war without firing a single bullet a policy expert explains how
ಡೋಕ್ಲಾಂ ಬಿಕ್ಕಟ್ಟು: ಬುಲೆಟ್ ಹಾರಿಸದೇ ಹೋದರೂ ಗೆಲ್ಲೋದು ಭಾರತ


ಒಂದೆಡೆ ಚೀನಾ ಗಡಿ ಭಾಗದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸಿದರೆ, ಮತ್ತೊಂದೆಡೆ ಗಡಿ ಭಾಗದಲ್ಲಿರುವ ನಿವಾಸಿಗಳನ್ನುಭಾರತ ತೆರವುಗೊಳಿಸಿದೆ. ಡೋಕ್ಲಾಂ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದ್ದು, ಯಾವುದೇ ಕಾರಣಕ್ಕೆ ಅದರ ಮೇಲಿನ ನಿಯಂತ್ರಣವನ್ನು ಬಿಟ್ಟು ಕೊಡುವುದಿಲ್ಲ, ಭಾರತ ತನ್ನ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳದೆ ಹೋದರೆ, ತಾನೂ ಹಿಡಿತ ಸಡಿಲಿಸುವುದಿಲ್ಲ ಎಂದು ಹೇಳಿದೆ. ಅಲ್ಲದೇ ಚೀನಾದ ಪತ್ರಿಕೆಯೊಂದು, 'ಚೀನಾಕ್ಕಾಗಿ ಅಂತಿಮ ಸಿದ್ಧತೆಗಳು ಆರಂಭಗೊಂಡಿವೆ,' ಎಂದೂ ಹೇಳಿದೆ.

ವಿವಾದಕ್ಕೆ ಸಂಬಂಧಿಸಿದಂತೆ, 'ಭಾರತವೊಂದು ನಾಯಿ. ಅವರು ಮೊದಲ ಮೊದಲ ಬೊಗಳುತ್ತಾರೆ, ಬುಸುಗುಟ್ಟುತ್ತಾರೆ. ಆದರೆ, ನಂತರ ಹೇಳಿದ್ದನ್ನು ಕೇಳಿಕೊಂಡು, ಬಾಲ ಅಲ್ಲಾಡಿಸಿಕೊಂಡು ಮರಳುತ್ತಾರೆ. ಚೀನಾ ಏನೇ ಮಾಡಿದರೂ, ಮಾಡುವುದು ಕಡಿಮೆಯೇ, ' ಎಂಬುವುದು ಬಹುತೇಕ ಚೀನಿಯರ ಅಭಿಪ್ರಾಯವೂ ಹೌದು. ಆದರೆ, ಇಂತ ಚಿಂತನೆಗಳು ಭಾರತದ ಆತ್ಮ ವಿಶ್ವಾಸ ಕುಂದಿಸಲಿದ್ದು, ಗಡಿಯಲ್ಲಿ ಭಾರತ ತನ್ನ ಹಿಡಿತ ಕಳೆದು ಕೊಳ್ಳಲಿದೆ ಎಂದೇ ಭಾವಿಸುವಂತಾಗುತ್ತದೆ. ಆಗ ಚೀನಾಕ್ಕೆ ಭಾರತ ಶರಣಾಗಲಿದೆ ಎನ್ನುವ ಅಭಿಪ್ರಾಯವೂ ಒಂದೆಡೆ ಕೇಳಿ ಬರುತ್ತಿದೆ. ಅಕಸ್ಮಾತ್, ಭಾರತವೇ ಯುದ್ಧಕ್ಕೆ ಮುಂದಾದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಅಣು ಪೂರೈಕಾ ಗುಂಪಿನಲ್ಲಿ ಶಾಶ್ವತ ಸದಸ್ಯತ್ವ ಸಿಗುವುದು ಕನಸಿನ ಮಾತಾಗಲಿದೆ. ಹಾಗಾಗಿ ಭಾರತವೂ ತಾನಾಗೇ ಖುದ್ದು ಯುದ್ಧಕ್ಕೆ ಮುಂದಾಗುವುದೂ ಸುಳ್ಳು.

ಆದರೆ, ಸತ್ಯ ಅದಲ್ಲ. ಈ ಗಡಿ ಭಾಗಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಲ್ಲಿ, ಭಾರತವೇ ರಾಜತಾಂತ್ರಿಕವಾಗಿ ಗೆಲ್ಲಲ್ಲಿದೆ. ಚೀನಾಕ್ಕೆ ಭಾರತದ ಬಳಿಯೂ ಅಣ್ವಸ್ತ್ರವಿದೆ ಎಂಬ ಅರಿವಿದೆ. ಹಾಗಾಗಿ ಬಾಯಲ್ಲಿ ಹೇಳಿದಷ್ಟು ಸುಲಭವಾಗಿ ಯುದ್ಧವನ್ನು ಕಾರ್ಯಗತಗೊಳಿಸಲು ಮುಂದಾಗುವುದಿಲ್ಲ. ಅಕಸ್ಮಾತ್ ಯುದ್ಧಕ್ಕೆ ಮುಂದಾಗಿದ್ದೇ ಆದಲ್ಲಿ, ಚೀನಾ ಉತ್ಪನ್ನಗಳಿಗೆ ಭಾರತ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ವಿದ್ಯುನ್ಮಾನ ಉತ್ಪನ್ನಗಳು, ಮೊಬೈಲ್ ಪೋನ್ ಸೇರಿದಂತೆ ಮಕ್ಕಳ ಆಟಿಕೆ ಮುಂತಾದ ಸಣ್ಣ ಪುಟ್ಟ ವಸ್ತುಗಳಿಗೆ ಭಾರತದಷ್ಟು ದೊಡ್ಡ ಮಾರುಕಟ್ಟೆ ಬೇರೆಡೆ ಸಿಗುವುದು ಚೀನಾಕ್ಕೂ ಸುಲಭವಲ್ಲವೆಂಬ ಸ್ಪಷ್ಟ ಅರಿವಿದೆ. ಹಾಗಾಗಿ ಯುದ್ಧಕ್ಕೆ ಚೀನಾ ಮುಂದಾಗುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಇಂಥ ಪರಿಸ್ಥಿತಿಯಲ್ಲಿ ಡೋಕ್ಲಾಂ ಬಿಕ್ಕಟ್ಟಿನಲ್ಲಿ ಭಾರತವೇ ಗೆದ್ದಂತಾಗುತ್ತದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ