ಆ್ಯಪ್ನಗರ

ಲಂಕೆಗೆ ಅನಗತ್ಯ ಪ್ರವಾಸ ಮಾಡಬೇಡಿ: ಭಾರತೀಯರಿಗೆ ಕೇಂದ್ರ ಸರಕಾರ ಸಲಹೆ

'ಅನಿವಾರ್ಯ/ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭದಲ್ಲಿ ಕೊಲಂಬೋದ ಭಾರತೀಯ ಹೈಕಮಿಷನ್ ಅಥವಾ ಕ್ಯಾಂಡಿಯ ಸಹಾಯಕ ಹೈಕಮಿಷನ್ ಅಥವಾ ಹಂಬಂಟೋಟಾ ಮತ್ತು ಜಾಫ್ನಾದ ಕಾನ್ಸುಲೇಟ್‌ಗಳನ್ನು ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದು. ಭಾಋತೀಯ ಹೈಕಮಿಷನ್ ದೂರವಾಣಿ ಸಂಖ್ಯೆಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ' ಎಂದು ಪ್ರಕಟಣೆ ತಿಳಿಸಿದೆ.

Vijaya Karnataka Web 27 Apr 2019, 10:08 pm
ಹೊಸದಿಲ್ಲಿ: ಶ್ರೀಲಂಕಾಗೆ ಅನಗತ್ಯ ಪ್ರವಾಸ ಕೈಗೊಳ್ಳದಂತೆ ಭಾರತ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಈಸ್ಟರ್ ಭಾನುವಾರದಂದು 250ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಭದ್ರತಾ ಬೆದರಿಕೆಗಳ ಕಾರಣಕ್ಕೆ ಕೇಂದ್ರ ಸರಕಾರ ಈ ಸಲಹೆ ಜಾರಿ ಮಾಡಿದೆ.

ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ 'ಪ್ರವಾಸ ಸಲಹೆ'ಯಲ್ಲಿ, ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭಗಳಲ್ಲಿ ಕೊಲಂಬೋ, ಕ್ಯಾಂಡಿ, ಹಂಬಂಟೋಟಾ ಮತ್ತು ಜಾಫ್ನಾದಲ್ಲಿರುವ ಭಾತೀಯ ಹೈಕಮಿಷನ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ.

'ಏಪ್ರಿಲ್ 21ರ ಸರಣಿ ಬಾಂಬ್ ಸ್ಫೋಟಗಳ ಬಳಿಕ ಶ್ರೀಲಂಕಾದಲ್ಲಿ ಪ್ರಸಕ್ತ ಉಂಟಾಗಿರುವ ಭದ್ರತಾ ಅಪಾಯದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಅನಗತ್ಯವಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳದಿರುವುದು ಒಳಿತು' ಎಂದು ಪ್ರಕಟಣೆ ಹೇಳಿದೆ.

'ಅನಿವಾರ್ಯ/ತುರ್ತು ಪ್ರವಾಸ ಕೈಗೊಳ್ಳಲೇಬೇಕಾದ ಸಂದರ್ಭದಲ್ಲಿ ಕೊಲಂಬೋದ ಭಾರತೀಯ ಹೈಕಮಿಷನ್ ಅಥವಾ ಕ್ಯಾಂಡಿಯ ಸಹಾಯಕ ಹೈಕಮಿಷನ್ ಅಥವಾ ಹಂಬಂಟೋಟಾ ಮತ್ತು ಜಾಫ್ನಾದ ಕಾನ್ಸುಲೇಟ್‌ಗಳನ್ನು ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದು. ಭಾಋತೀಯ ಹೈಕಮಿಷನ್ ದೂರವಾಣಿ ಸಂಖ್ಯೆಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ' ಎಂದು ಪ್ರಕಟಣೆ ತಿಳಿಸಿದೆ.

ಶ್ರೀಲಂಕಾ ಸರಕಾರ ತನ್ನ ದೇಶಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದರೂ, ಪ್ರವಾಸ ಸಂದರ್ಭದಲ್ಲಿ ತೊಂದರೆಗಳಾಗಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ