ಐಎಎಫ್ ವಿಂಗ್ ಕಮಾಂಡರ್ ಬಂಧನಕ್ಕೆ ಭಾರತ ತೀವ್ರ ಆಕ್ಷೇಪ: ಪಾಕ್ಗೆ ಎಚ್ಚರಿಕೆ
ಪಾಕ್ ಸೇನಾ ವಕ್ತಾರ ಆಸೀಫ್ ಗಫೂರ್ ನೀಡಿದ ಮಾಹಿತಿಯಂತೆ ಇಬ್ಬರು ಪೈಲಟ್ಗಳು ತಮ್ಮ ವಶದಲ್ಲಿದ್ದಾರೆ. ಈ ಪೈಕಿ ಒಬ್ಬ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮತ್ತೊಬ್ಬನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದಿದ್ದರು. ಆದರೆ, ನಂತರ ಒಬ್ಬ ಮಾತ್ರ ನಮ್ಮ ಬಳಿ ಇದ್ದಾನೆಂದು ಯೂ ಟರ್ನ್ ಹೊಡೆದಿದ್ದಾರೆ.
Vijaya Karnataka Web 28 Feb 2019, 5:39 pm
ಹೈಲೈಟ್ಸ್:
- ಐಎಎಫ್ ಸಿಬ್ಬಂದಿ ಅಭಿನಂದನ್ಗೆ ಹಿಂಸೆ ನೀಡಬೇಡಿ
- ಇದು ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ
- ಭಯೋತ್ಪಾದನೆ ವಿರುದ್ಧ ಹೋರಾಡಲು ನಮಗೆ ಹಕ್ಕಿದೆ
ಹೊಸದಿಲ್ಲಿ: ಭಾರತದ ವಾಯುಗಡಿ ಉಲ್ಲಂಘಿಸಲು ಮುನ್ನುಗ್ಗಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೇ ಭಾರತೀಯ ಯುದ್ಧ ವಿಮಾನದ ಪೈಲಟ್ವೊಬ್ಬರು ಪಾಕ್ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಗಾಯಗೊಂಡಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ರನ್ನು ಬಂಧಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ಫೋಟೋ, ವೀಡಿಯೋಗಳ ದಾಖಲೆಯನ್ನೂ ಸಹ ಬಿಡುಗಡೆ ಮಾಡಿದೆ. ಈ ಹಿನ್ನೆಲೆ, ಐಎಎಫ್ನ ಗಾಯಗೊಂಡ ಸಿಬ್ಬಂದಿಯನ್ನು ಪಾಕಿಸ್ತಾನ ಕೆಟ್ಟದಾಗಿ ಪ್ರದರ್ಶನ ಮಾಡುತ್ತಿದೆ ಎಂದು ಭಾರತ ಕಟುವಾಗಿ ಆಕ್ಷೇಪಿಸಿದೆ. ಅಲ್ಲದೆ, ಇದು ಅಂತಾರಾಷ್ಟ್ರೀಯ ಮಾನವ ಕಾನೂನಿನ ನಿಯಮಗಳು ಹಾಗೂ ಜಿನೀವಾ ಕನ್ವೆನ್ಶನ್ ಉಲ್ಲಂಘನೆಯಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಭಾರತದ ರಕ್ಷಣಾ ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇಟ್ಟುಕೊಂಡಿರುವ ಪಾಕಿಸ್ತಾನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಜತೆಗೆ, ಅವರು ಸುರಕ್ಷಿತವಾಗಿ ಶೀಘ್ರದಲ್ಲೇ ವಾಪಸ್ ಬರುತ್ತಾರೆಂದು ಭಾರತ ಬಯಸುತ್ತದೆ ಎಂದೂ ಹೇಳಿದ್ದಾರೆ.
ಈ ವಿಚಾರದ ಕುರಿತು ಚರ್ಚೆ ನಡೆಸಲು ಪಾಕ್ ಹೈ ಕಮೀಷನರ್ ಸೈಯದ್ ಹೈದರ್ ಶಾಗೆ ಸಮನ್ಸ್ ನೀಡಿತ್ತು. ಈ ವೇಳೆ ವಿದೇಶಾಂಗ ಸಚಿವಾಲಯ ಈ ಎಚ್ಚರಿಕೆ ನೀಡಿದೆ.
ಅಲ್ಲದೆ, ಭಾರತ ತನ್ನ ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಹಕ್ಕು ಹೊಂದಿದೆ. ಹೀಗಾಗಿ, ಆಕ್ರಮಣಶೀಲತೆ ಅಥವಾ ಗಡಿಯಾಚೆಗಿನ ಭಯೋತ್ಪಾದನೆಯ ಯಾವುದೇ ಕ್ರಿಯೆಯ ವಿರುದ್ಧ ಕಠಿಣ ಹಾಗೂ ತಕ್ಕ ಕ್ರಮ ಕೈಗೊಳ್ಳಲು ಭಾರತಕ್ಕೆ ಹಕ್ಕಿದೆ ಎಂದೂ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಅಲ್ಲದೆ, ಪುಲ್ವಾಮಾ ಉಗ್ರ ದಾಳಿಯ ಪ್ರಕರಣದಲ್ಲಿ ಜೈಷ್ ಎ ಮೊಹಮ್ಮದ್ ಸಂಕೀರ್ಣತೆ ಬಗ್ಗೆ ಪಾಕ್ಗೆ ದಾಖಲೆ ನೀಡಲಾಗಿತ್ತು. ಅಲ್ಲದೆ, ಜೆಇಎಂ ಉಗ್ರ ನೆಲೆಗಳು ಹಾಗೂ ಸಂಘಟನೆಯ ನಾಯಕತ್ವ ಪಾಕಿಸ್ತಾನದಲ್ಲಿ ಇರುವುದರ ಬಗ್ಗೆಯೂ ದಾಖಲೆ ನೀಡಲಾಗಿತ್ತು. ಈ ಹಿನ್ನೆಲೆ ಪಾಕಿಸ್ತಾನ ತಕ್ಷಣವೇ ತನ್ನ ದೇಶದೊಳಗಿರುವ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಿ ಎಂದು ತಿಳಿಸಲಾಗಿತ್ತು ಎಂದೂ ಭಾರತದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಅಲ್ಲದೆ, ಭಾರತದ ರಕ್ಷಣಾ ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇಟ್ಟುಕೊಂಡಿರುವ ಪಾಕಿಸ್ತಾನ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಜತೆಗೆ, ಅವರು ಸುರಕ್ಷಿತವಾಗಿ ಶೀಘ್ರದಲ್ಲೇ ವಾಪಸ್ ಬರುತ್ತಾರೆಂದು ಭಾರತ ಬಯಸುತ್ತದೆ ಎಂದೂ ಹೇಳಿದ್ದಾರೆ.
ಈ ವಿಚಾರದ ಕುರಿತು ಚರ್ಚೆ ನಡೆಸಲು ಪಾಕ್ ಹೈ ಕಮೀಷನರ್ ಸೈಯದ್ ಹೈದರ್ ಶಾಗೆ ಸಮನ್ಸ್ ನೀಡಿತ್ತು. ಈ ವೇಳೆ ವಿದೇಶಾಂಗ ಸಚಿವಾಲಯ ಈ ಎಚ್ಚರಿಕೆ ನೀಡಿದೆ.
ಅಲ್ಲದೆ, ಭಾರತ ತನ್ನ ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಹಕ್ಕು ಹೊಂದಿದೆ. ಹೀಗಾಗಿ, ಆಕ್ರಮಣಶೀಲತೆ ಅಥವಾ ಗಡಿಯಾಚೆಗಿನ ಭಯೋತ್ಪಾದನೆಯ ಯಾವುದೇ ಕ್ರಿಯೆಯ ವಿರುದ್ಧ ಕಠಿಣ ಹಾಗೂ ತಕ್ಕ ಕ್ರಮ ಕೈಗೊಳ್ಳಲು ಭಾರತಕ್ಕೆ ಹಕ್ಕಿದೆ ಎಂದೂ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಅಲ್ಲದೆ, ಪುಲ್ವಾಮಾ ಉಗ್ರ ದಾಳಿಯ ಪ್ರಕರಣದಲ್ಲಿ ಜೈಷ್ ಎ ಮೊಹಮ್ಮದ್ ಸಂಕೀರ್ಣತೆ ಬಗ್ಗೆ ಪಾಕ್ಗೆ ದಾಖಲೆ ನೀಡಲಾಗಿತ್ತು. ಅಲ್ಲದೆ, ಜೆಇಎಂ ಉಗ್ರ ನೆಲೆಗಳು ಹಾಗೂ ಸಂಘಟನೆಯ ನಾಯಕತ್ವ ಪಾಕಿಸ್ತಾನದಲ್ಲಿ ಇರುವುದರ ಬಗ್ಗೆಯೂ ದಾಖಲೆ ನೀಡಲಾಗಿತ್ತು. ಈ ಹಿನ್ನೆಲೆ ಪಾಕಿಸ್ತಾನ ತಕ್ಷಣವೇ ತನ್ನ ದೇಶದೊಳಗಿರುವ ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಿ ಎಂದು ತಿಳಿಸಲಾಗಿತ್ತು ಎಂದೂ ಭಾರತದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.