ಆ್ಯಪ್ನಗರ

ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ; ತಕ್ಕ ಪಾಠ ಕಲಿಸಲು ವಿಪಕ್ಷಗಳ ಒತ್ತಾಯ

ಪೂರ್ವ ಲಡಾಖ್‌ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಹತ್ಯೆಗೈದ ಚೀನಾದ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಶಾಂತಿ ಮಾತುಕತೆಯ ನಡುವೆ ಉದ್ಧಟತನ ತೋರಿದ ಚೀನಾಎ ತಕ್ಕ ಪಾಠ ಕಲಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ.

Agencies 16 Jun 2020, 9:58 pm
ಹೊಸದಿಲ್ಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಹತ್ಯೆಗೈದ ಚೀನಾದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಶಾಂತಿ ಮಾತುಕತೆ ಮಧ್ಯೆಯೂ ಉದ್ಧಟತನ ತೋರಿದ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಶಿವಸೇನೆ, ಜೆಡಿಯು, ಕಾಂಗ್ರೆಸ್‌ ಸೇರಿದಂತೆ ಅನೇಕ ಪಕ್ಷಗಳು ಕೇಂದ್ರವನ್ನು ಒತ್ತಾಯಿಸಿವೆ.
Vijaya Karnataka Web india china
ಸಂಗ್ರಹ ಚಿತ್ರ


ಲಡಾಖ್‌ನಲ್ಲಿವಾಸ್ತವ ಸ್ಥಿತಿಯನ್ನು ಕೇಂದ್ರ ಜನರ ಮುಂದಿಡಬೇಕು ಎಂದು ಆಗ್ರಹಿಸಿವೆ. ಈ ಮಧ್ಯೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಾಳಿಯನ್ನು ಖಂಡಿಸಿದ್ದು, ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುವುದಕ್ಕೆ ಯಾವ ನೆರೆ ರಾಷ್ಟ್ರಗಳಿಗೂ ಸರಕಾರ ಬಿಡುವುದಿಲ್ಲ. ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲಾಗುತ್ತಿದೆ. ಹಾಗಂತ ಚೀನಾದ ಒತ್ತಡದ ತಂತ್ರಗಳಿಗೆ ಭಾರತ ಬಗ್ಗದು ಎಂದು ಹೇಳಿಕೆ ನೀಡಿದೆ.

ನಮ್ಮ ದೌರ್ಬಲ್ಯ ಹೆಚ್ಚಾದಷ್ಟೂ ಚೀನಾ ಆಕ್ರಮಣಕಾರಿ ನೀತಿಯನ್ನು ಇನ್ನಷ್ಟು ಪ್ರದರ್ಶಿಸುತ್ತದೆ. ಅಧರ್ಮ ಯುದ್ಧ ಸಾರುತ್ತಿರುವ ಚೀನಾ ವಿರುದ್ಧ ಕಠಿಣ ಕೈಗೊಳ್ಳುತ್ತಿರುವ ಸಮಯ ಬಂದಿದೆ. ಈ ನಿಟ್ಟಿನಲ್ಲಿಕೇಂದ್ರ ಕಾರ್ಯಪ್ರವೃತ್ತವಾಗಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

1962 ರಿಂದ 2020: ಭಾರತ - ಚೀನಾ ಬಾರ್ಡರ್‌ ಫೈಟ್‌..!

ದೇಶದ ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಅನೇಕ ಕಡೆ ಮೊಂಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಗಿದೆ. ''ಇದ್ದ ನನ್ನೊಬ್ಬ ಮಗನನ್ನು ದೇಶಕ್ಕಾಗಿ ಕಳೆದುಕೊಂಡಿದ್ದೇನೆ. ಯೋಧರ ತ್ಯಾಗ-ಬಲಿದಾನ ವ್ಯರ್ಥವಾಗಬಾರದು,'' ಎಂದು ಕರ್ನಲ್‌ ಸಂತೋಷ್‌ ಅವರ ತಾಯಿ ಮಂಜುಳಾ ಹೇಳಿದ್ದಾರೆ.

ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ: ಮೂವರು ಭಾರತೀಯ ಸೈನಿಕರು ಹುತಾತ್ಮ!

ಯೋಧನಿಗೆ ತ.ನಾಡು ಸರಕಾರ 20 ಲಕ್ಷ ರೂ. ಪರಿಹಾರ
ಚೀನಾ ಸಂಘರ್ಷದಲ್ಲಿ ಹುತಾತ್ಮಗೊಂಡ ತಮಿಳುನಾಡು ಮೂಲದ ಯೋಧ ಕೆ. ಪಳನಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಕುಟುಂಬದ ಒರ್ವ ಸದಸ್ಯರಿಗೆ ಸರಕಾರಿ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಯೋಧ ಪಳನಿ ರಾಮನಾಥಪುರಂ ಜಿಲ್ಲೆಯ ಕಡಕಲೂರು ಗ್ರಾಮದವರು.

ಸೈನ್ಯ ಹಿಂಪಡೆಯುತ್ತಿರುವಾಗಲೇ ಘರ್ಷಣೆಗಿಳಿದ ಚೀನಿ ಸೈನಿಕರು: ಗಡಿಯಲ್ಲಿ ಏನಾಯ್ತು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ