ಆ್ಯಪ್ನಗರ

ಕೊನೆ ಕ್ಷಣದಲ್ಲಿ ತಪ್ಪಿದ ಭಾರತ-ಪಾಕ್‌ ಕ್ಷಿಪಣಿ ವಾರ್‌

ಅಭಿನಂದನ್‌ ಅವರನ್ನು ಪಾಕಿಸ್ತಾನ ಬಂಧಿಸಿದ ವಿಷಯ ತಿಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪಣಿ ದಾಳಿಗೆ ನಿರ್ಧಾರ ಮಾಡಿದ್ದರು.

Vijaya Karnataka 24 Mar 2019, 5:00 am
ಹೊಸದಿಲ್ಲಿ: ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕ್‌ ದಿಗ್ಬಂಧನಕ್ಕೆ ಸಿಲುಕಿದ ಫೆಬ್ರವರಿ 27ರಂದು ಭಾರತ-ಪಾಕಿಸ್ತಾನ ನಡುವೆ ಕ್ಷಿಪಣಿ ವಾರ್‌ ನಡೆಯುವ ವಾತಾವರಣ ನಿರ್ಮಾಣವಾಗಿತ್ತು ಎಂದರೆ ನಂಬುತ್ತೀರಾ?
Vijaya Karnataka Web abhinandan 2


ಸಂಪುಟದ ಭದ್ರತಾ ಸಮಿತಿಯ ಪ್ರಮುಖ ಸದಸ್ಯರು, ಭಾರತ ಮತ್ತು ಪಾಕಿಸ್ತಾನದ ರಾಯಭಾರಿ ಮೂಲಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಯೊಂದರಲ್ಲಿ ಈ ಅಂಶ ಬಯಲಾಗಿದೆ.

ಅಭಿನಂದನ್‌ ಅವರನ್ನು ಪಾಕಿಸ್ತಾನ ಬಂಧಿಸಿದ ವಿಷಯ ತಿಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪಣಿ ದಾಳಿಗೆ ನಿರ್ಧಾರ ಮಾಡಿದ್ದರು. ಒಂದೊಮ್ಮೆ ಅಭಿನಂದನ್‌ ಅವರಿಗೆ ಏನಾದರೂ ತೊಂದರೆಯಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಸಂದೇಶವನ್ನು 'ರಾ' ಕಾರ್ಯದರ್ಶಿ ಅನಿಲ್‌ ಧಸ್ಮಾನಾ ಅವರು ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಆಸಿಮ್‌ ಮುನೀರ್‌ಗೆ ಸ್ಪಷ್ಟವಾಗಿ ತಿಳಿಸಿದ್ದರು ಎನ್ನಲಾಗಿದೆ. ಮಾತ್ರವಲ್ಲ, ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್‌ ದೋವಲ್‌ ಅವರು ಅಮೆರಿಕದ ರಕ್ಷಣಾ ಸಲಹೆಗಾರರಾಗಿರುವ ಜಾನ್‌ ಬೋಲ್ಟನ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರ ಮೂಲಕವೂ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆ ಬಳಿಕವೇ ಪಾಕಿಸ್ತಾನವು ಅಭಿನಂದನ್‌ರನ್ನು ತಮ್ಮ ಸೇನೆ ಬಂಧಿಸಿರುವುದಾಗಿ ಒಪ್ಪಿಕೊಂಡಿತಲ್ಲದೇ, ಸುರಕ್ಷಿತ ಬಿಡುಗಡೆಗೂ ಸಮ್ಮತಿಸಿತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ