ಆ್ಯಪ್ನಗರ

ಉಗ್ರ ನಿಗ್ರಹಕ್ಕೆ ಪಾಕ್ ಏನು ಕ್ರಮ ಕೈಗೊಂಡಿದೆ? ಭಾರತ ಪ್ರಶ್ನೆ

ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ಆರೋಪ ಹೊರಿಸಿದ್ದು, ಮಾತುಕತೆಗೆ ಸಿದ್ಧವಿದ್ದರೂ, ಭಾರತ ಸ್ಪಂದಿಸುತ್ತಿಲ್ಲ ಎಂದಿದ್ದರು.

Vijaya Karnataka Web 11 Jan 2019, 12:02 pm
ಹೊಸದಿಲ್ಲಿ: ಉಗ್ರವಾದ ನಿಗ್ರಹಕ್ಕೆ ನಾವು ಹಲವು ಕ್ರಮ ಕೈಗೊಂಡಿದ್ದೇವೆ. ಭಾರತದ ಜತೆಗೆ ಮಾತುಕತೆಗೂ ಮುಂದಾಗಿದ್ದೇವೆ. ಆದರೆ ಭಾರತ ಮಾತ್ರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂಬ ಪಾಕ್ ಆರೋಪಕ್ಕೆ ಉತ್ತರಿಸಿರುವ ಭಾರತ, ಉಗ್ರವಾದ ಮಟ್ಟಹಾಕಲು ಪಾಕಿಸ್ತಾನ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿದೆ.
Vijaya Karnataka Web imran khan


ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ಆರೋಪ ಹೊರಿಸಿದ್ದು, ಮಾತುಕತೆಗೆ ಸಿದ್ಧವಿದ್ದರೂ, ಭಾರತ ಸ್ಪಂದಿಸುತ್ತಿಲ್ಲ ಎಂದಿದ್ದರು.

ಆದರೆ ಪಾಕಿಸ್ತಾನ ಮಿಲಿಟರಿಯ ಬೆಂಬಲದೊಂದಿಗೆ ಸರಕಾರ ರಚಿಸಿರುವ ಇಮ್ರಾನ್ ಖಾನ್ ಅವಧಿಯಲ್ಲಿ ಉಗ್ರವಾದಕ್ಕೆ ಪಾಕ್ ಬೆಂಬಲ ಅಧಿಕವಾಗಿದೆ. ಜತೆಗೆ ಇಮ್ರಾನ್ ಹೇಳಿಕೊಳ್ಳುವಂತೆ ಭಯೋತ್ಪಾದಕರನ್ನು ಮಟ್ಟಹಾಕಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ.

ತೋರ್ಪಡಿಕೆಗೆ ಮಾತ್ರ ಅಮೆರಿಕ ಸರಕಾರದ ಎದುರು ಪಾಕಿಸ್ತಾನ ಹೇಳಿಕೆ ನೀಡುತ್ತಿದೆ ಎಂದು ಭಾರತ ಆರೋಪಿಸಿದೆ.

ಜತೆಗೆ ಭಾರತವು ಆರೋಪಕ್ಕೆ ಆಧಾರವಾಗಿ ಜೈಶ್ ಮಹಮ್ಮದ್, ಜೈಶ್ ಉದ್ ದಾವಾ, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಸರಕಾರ ಎನ್‌ಜಿಒ ಹೆಸರಿನಲ್ಲಿ ಪರೋಕ್ಷವಾಗಿ ಸಹಾಯ ಮಾಡುತ್ತಿದೆ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ