ಆ್ಯಪ್ನಗರ

ಒಂದೇ ದಿನ 55,079 ಮಂದಿಗೆ ದೇಶದಲ್ಲಿ ಕೊರೊನಾ, ದಕ್ಷಿಣ ಭಾರತದ ಕೊಡುಗೆ 25,000 ಕೇಸ್‌ !

ಒಂದೇ ದಿನ ದೇಶದಲ್ಲಿ 55,000ಕ್ಕು ಹೆಚ್ಚು ಕೊರೊನಾ ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16 ಲಕ್ಷದ ಗಡಿ ದಾಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ ಗುರುವಾರ 55,079 ಕೇಸ್‌ಗಳು ದೃಢಪಟ್ಟಿದೆ. ಈ ಮೂಲಕ 16,38,871 ಸೋಂಕಿತರು ದೃಢಪಟ್ಟಂತೆ ಆಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸದ್ಯ 5,45,318 ಸಕ್ರಿಯ ​ ಪ್ರಕರಣಗಳು ದೇಶದಲ್ಲಿ ಇದೆ, 10,57,806 ಮಂದಿ ಕೊರೊನಾ ರೋಗಿಗಳು ಈಗಾಗಲೇ ಗುಣಮುಖರಾಗಿ ತೆರಳಿದ್ದಾರೆ ಎಂದು ತಿಳಿಸಿದೆ.

ANI 31 Jul 2020, 11:15 am
ನವದೆಹಲಿ: ಸದ್ಯ ಭಾರತದಲ್ಲಿ ದಿನ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಐವತ್ತು ಸಾವಿರ ಗಡಿ ದಾಟುತ್ತಿದೆ. ಈ ಬಗ್ಗೆ ವೈದ್ಯಕೀಯ ಲೋಕ ಕಳವಳ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಗುರುವಾರ ಮತ್ತೆ ಪಾಸಿಟಿವ್‌ ಕೇಸ್‌ಗಳ ಪೈಕಿ ದೇಶ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನ ದೇಶದಲ್ಲಿ 55,000ಕ್ಕು ಹೆಚ್ಚು ಕೊರೊನಾ ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16 ಲಕ್ಷದ ಗಡಿ ದಾಟಿದೆ.
Vijaya Karnataka Web jpg (6)


ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ ಗುರುವಾರ 55,079 ಕೇಸ್‌ಗಳು ದೃಢಪಟ್ಟಿದೆ. ಈ ಮೂಲಕ 16,38,871 ಸೋಂಕಿತರು ದೃಢಪಟ್ಟಂತೆ ಆಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಸದ್ಯ 5,45,318 ಸಕ್ರಿಯ ಪ್ರಕರಣ ದೇಶದಲ್ಲಿ ಇದೆ, 10,57,806 ಮಂದಿ ಕೊರೊನಾ ರೋಗಿಗಳು ಈಗಾಗಲೇ ಗುಣಮುಖರಾಗಿ ತೆರಳಿದ್ದಾರೆ ಎಂದು ತಿಳಿಸಿದೆ. ಇನ್ನು 779 ಕೊರೊನಾ ಸಾವು ಪ್ರಕರಣಗಳು ದೃಢಪಡುವ ಮೂಲಕ ಈವರೆಗೆ ದೇಶದಲ್ಲಿ 35,747 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ದೇಶದಲ್ಲಿ ದಿನ ನಿತ್ಯ ಭಾರೀ ಸಂಖ್ಯೆಯಲ್ಲಿ ಕೊರೊನಾ ದೃಢಪಡುತ್ತಿರುವುದು ಸರಿಯಾದ ಸೂಚನೆ ಎಂದು ವೈದ್ಯಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಪರೀಕ್ಷೆ ಹೆಚ್ಚು ನಡೆಸುವುದರಿಂದ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಹೆಚ್ಚು ಸೋಂಕು ಹರಡುವುದನ್ನ ತಡೆಗಟ್ಟಬೇಕು. ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಮಾಡಬೇಕು ಎಂದು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ದಾಖಲಾಗಿರುವ 55,000 ಕೊರೊನಾ ಸೋಂಕಿತರ ಪೈಕಿ ದಕ್ಷಿಣ ಭಾರತದ ಕೊಡುಗೆಯು ಜಾಸ್ತಿ ಇದೆ. ಗುರುವಾರ ಒಂದೇ ದಿನ ದಕ್ಷಿಣ ಭಾರತದಲ್ಲಿ ಒಟ್ಟು 25,000ಕ್ಕೂ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಆಂಧ್ರಪ್ರದೇಶದಲ್ಲಿ 10,000 ಹೊಸ ಕೊರೊನಾ ಪ್ರಕರಣ ದೃಢಪಟ್ಟರೆ, ತಮಿಳುನಾಡು 5,864 ಹಾಗೂ ಕರ್ನಾಟಕ 6,128 ಕೊರೊನಾ ಪತ್ತೆಯಾಗಿದೆ. ಕೇರಳದಲ್ಲಿ 506 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಗೇ ಆಂಧ್ರಪ್ರದೇಶ, ಪುದುಚೇರಿಯಲ್ಲೂ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ