ಆ್ಯಪ್ನಗರ

ಇಕ್ಕಟ್ಟು ತಂದಿಡುವ ಹುನ್ನಾರ: ಬರಿಗೈಯ್ಯಲ್ಲಿ ಮರಳಿದ ಸಂಸದ

ಸಮರ್ಪಕ ವೀಸಾ ಹೊಂದಿಲ್ಲದ ಕಾರಣ ಬ್ರಿಟನ್‌ ಸಂಸದ ಲಾರ್ಡ್‌ ಅಲೆಕ್ಸಾಂಡರ್‌ ಕಾರ್ಲಿಲೆ ಅವರನ್ನು ದಿಲ್ಲಿ ವಿಮಾನ ನಿಲ್ದಾಣದಿಂದಲೇ ವಾಪಸ್‌ ಕಳಹಿಸಿದ ಘಟನೆ ಬುಧವಾರ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

Vijaya Karnataka 13 Jul 2018, 10:43 am
ಹೊಸದಿಲ್ಲಿ: ಸಮರ್ಪಕ ವೀಸಾ ಹೊಂದಿಲ್ಲದ ಕಾರಣ ಬ್ರಿಟನ್‌ ಸಂಸದ ಲಾರ್ಡ್‌ ಅಲೆಕ್ಸಾಂಡರ್‌ ಕಾರ್ಲಿಲೆ ಅವರನ್ನು ದಿಲ್ಲಿ ವಿಮಾನ ನಿಲ್ದಾಣದಿಂದಲೇ ವಾಪಸ್‌ ಕಳಹಿಸಿದ ಘಟನೆ ಬುಧವಾರ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
Vijaya Karnataka Web ಇಂಗ್ಲೆಂಡ್ ಸಂಸದ


ಅಕ್ರಮ ವಿದೇಶಿ ದೇಣಿಗೆ ಸ್ವೀಕಾರ ಸೇರಿದಂತೆ ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಜೈಲು ಸೇರಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಕಾನೂನು ಸಲಹೆಗಾರರಾಗಿರುವ ಕಾರ್ಲಿಲೆ ಅವರು ಭಾರತದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಉದ್ದೇಶ ಹೊಂದಿದ್ದರು. ಆದರೆ ಅಸಮರ್ಪಕ ವೀಸಾದಿಂದ ಅದು ಸಾಧ್ಯವಾಗಿಲ್ಲ. ''ವೀಸಾ ಅರ್ಜಿಯಲ್ಲಿ ದಾಖಲಿಸಿದ್ದ ವಿವರಗಳಿಗೂ ಕಾರ್ಲಿಲೆ ಅವರ ಪ್ರವಾಸದ ಉದ್ದೇಶಕ್ಕೂ ತಾಳೆಯಾಗಿರಲಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅದು ಅಸಮರ್ಪಕವಾಗಿತ್ತು. ಹೀಗಾಗಿ ಸ್ವದೇಶಕ್ಕೆ ವಾಪಸ್‌ ಕಳುಹಿಸಿದೆವು,'' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಬಾಂಗ್ಲಾ ದೇಶ ಜತೆಗಿನ ಭಾರತದ ಸಂಬಂಧಕ್ಕೆ ಹುಳಿ ಹಿಂಡುವ ಉದ್ದೇಶವನ್ನು ಕಾರ್ಲಿಲೆ ಹೊಂದಿದ್ದಾರೆ ಎಂಬ ಸುಳಿವು ಪಡೆದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಢಾಕಾ ಪ್ರವೇಶಕ್ಕೆ ಬಾಂಗ್ಲಾದೇಶ ಅನುಮತಿ ನಿರಾಕರಿಸಿದ್ದರಿಂದಲೇ ಭಾರತದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಉದ್ದೇಶವನ್ನು ಕಾರ್ಲಿಲೆ ಹೊಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ