ಕೊರೊನಾ ಲಸಿಕೆ ಅಭಿಯಾನ ಇಂದಿನಿಂದ ಆರಂಭ: ರಾಜ್ಯದಲ್ಲಿ ಫಸ್ಟ್ ಡೇ 24,300 ಮಂದಿಗೆ ಲಸಿಕೆ
ಲಸಿಕೆ ಪಡೆದವರು ಅರ್ಧ ತಾಸು ಲಸಿಕೆ ಕೇಂದ್ರದಲ್ಲೇ ಕುಳಿತುಕೊಳ್ಳಬೇಕು. ಈ ವೇಳೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಐದೇ ನಿಮಿಷದಲ್ಲಿ ಕರೆದೊಯ್ಯಲು ಅನುಕೂಲವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.
Vijaya Karnataka Web 16 Jan 2021, 6:36 am
ಬೆಂಗಳೂರು: ಎಲ್ಲರ ಬದುಕನ್ನೂ ಸಂಕಷ್ಟಕ್ಕೆ ತಳ್ಳಿದ್ದ ಮಹಾಮಾರಿ ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಒಟ್ಟು 3 ಲಕ್ಷ ಮಂದಿ ಮೊದಲ ದಿನ ಲಸಿಕೆ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ 24,300 ಜನರಿಗೆ ವ್ಯಾಕ್ಸಿನ್ ದೊರೆಯಲಿದೆ.
ಸೋಂಕಿನ ಮೊದಲ ಪ್ರಕರಣ ಕಾಣಿಸಿಕೊಂಡ ಬರೋಬ್ಬರಿ 10 ತಿಂಗಳು 8 ದಿನಗಳ ಬಳಿಕ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ರಾಜ್ಯದಲ್ಲಿ 243 ಕೇಂದ್ರಗಳು ಲಸಿಕೆ ವಿತರಣೆಗೆ ಸರ್ವ ರೀತಿಯಲ್ಲಿಸಜ್ಜಾಗಿವೆ. ಮೂರು ಹಂತಗಳಲ್ಲಿನಡೆಯುವ ಲಸಿಕೆ ವಿತರಣೆಯ ಮೊದಲ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ರಾಜ್ಯದ ಮೊದಲ ಲಸಿಕೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಗ್ರೂಪ್ ಡಿ ದರ್ಜೆ ನೌಕರ/ಪೌರ ಕಾರ್ಮಿಕ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ 243 ಕಡೆ
18 ಜಿಲ್ಲಾಸ್ಪತ್ರೆ, 13 ಸರಕಾರಿ ಆಸ್ಪತ್ರೆ, 7 ಖಾಸಗಿ ಮೆಡಿಕಲ್ ಕಾಲೇಜು, 145 ತಾಲೂಕು ಆಸ್ಪತ್ರೆ, 25 ಪ್ರಾಥಮಿಕ ಮತ್ತು 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ.
8,14,500 ಡೋಸ್ ಲಭ್ಯ
ರಾಜ್ಯದಲ್ಲಿಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದೆ. 7,17,439 ಆರೋಗ್ಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ವಾರದೊಳಗೆ ಮೊದಲ ಹಂತದ ಪ್ರಕ್ರಿಯೆ ಮುಗಿಯಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ. ಲಭ್ಯವಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಮಾತ್ರ ನೀಡಲಾಗುತ್ತದೆ. 28 ದಿನಗಳ ಬಳಿಕ 2ನೇ ಡೋಸ್ ನೀಡಬೇಕಿರುವ ಕಾರಣ ಅವುಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಹೊಸದಾಗಿ ಲಸಿಕೆ ಬಂದರೆ ಅದಕ್ಕೆ ತಕ್ಕಂತೆ ಲೆಕ್ಕಾಚಾರ ಮಾಡಿಕೊಂಡು ಮತ್ತಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಧೈರ್ಯ ತುಂಬಲಿರುವ ವೈದ್ಯರು
ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ, ಖ್ಯಾತ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಮೊದಲ ದಿನವೇ ಲಸಿಕೆ ಪಡೆಯಲಿದ್ದಾರೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಸಂಶೋಧಕರು, ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟು ಲಸಿಕೆ ಪಡೆಯಬಹುದು. ಯಾವುದೇ ಅಪಾಯ ಇಲ್ಲ ಎಂದು ಡಾ. ಬಲ್ಲಾಳ್ ಹೇಳಿದ್ದಾರೆ.
ಅರ್ಧ ಗಂಟೆ ಕೇಂದ್ರದಲ್ಲೇ ಇರಬೇಕು
ಲಸಿಕೆ ಪಡೆದವರು ಅರ್ಧ ತಾಸು ಲಸಿಕೆ ಕೇಂದ್ರದಲ್ಲೇ ಕುಳಿತುಕೊಳ್ಳಬೇಕು. ಈ ವೇಳೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಐದೇ ನಿಮಿಷದಲ್ಲಿ ಕರೆದೊಯ್ಯಲು ಅನುಕೂಲವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದಕ್ಕೆಲ್ಲಆತಂಕ ಪಡಬೇಡಿಚುಚ್ಚುಮದ್ದು ಪಡೆದ ಜಾಗದಲ್ಲಿ ನೋವು, ತಲೆನೋವು, ಜ್ವರ, ಶೀತ, ವಾಕರಿಕೆ, ಆಯಾಸ, ವಾಂತಿ, ತಲೆ ಸುತ್ತುವಿಕೆ ಕಂಡುಬರಬಹುದು. ಆದರೆ ಆತಂಕಪಡುವ ಅಗತ್ಯವಿಲ್ಲಎಂದಿದ್ದಾರೆ ತಜ್ಞರು.
ಸೋಂಕಿನ ಮೊದಲ ಪ್ರಕರಣ ಕಾಣಿಸಿಕೊಂಡ ಬರೋಬ್ಬರಿ 10 ತಿಂಗಳು 8 ದಿನಗಳ ಬಳಿಕ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ರಾಜ್ಯದಲ್ಲಿ 243 ಕೇಂದ್ರಗಳು ಲಸಿಕೆ ವಿತರಣೆಗೆ ಸರ್ವ ರೀತಿಯಲ್ಲಿಸಜ್ಜಾಗಿವೆ. ಮೂರು ಹಂತಗಳಲ್ಲಿನಡೆಯುವ ಲಸಿಕೆ ವಿತರಣೆಯ ಮೊದಲ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ರಾಜ್ಯದ ಮೊದಲ ಲಸಿಕೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಗ್ರೂಪ್ ಡಿ ದರ್ಜೆ ನೌಕರ/ಪೌರ ಕಾರ್ಮಿಕ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ 243 ಕಡೆ
18 ಜಿಲ್ಲಾಸ್ಪತ್ರೆ, 13 ಸರಕಾರಿ ಆಸ್ಪತ್ರೆ, 7 ಖಾಸಗಿ ಮೆಡಿಕಲ್ ಕಾಲೇಜು, 145 ತಾಲೂಕು ಆಸ್ಪತ್ರೆ, 25 ಪ್ರಾಥಮಿಕ ಮತ್ತು 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ.
8,14,500 ಡೋಸ್ ಲಭ್ಯ
ರಾಜ್ಯದಲ್ಲಿಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದೆ. 7,17,439 ಆರೋಗ್ಯ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ವಾರದೊಳಗೆ ಮೊದಲ ಹಂತದ ಪ್ರಕ್ರಿಯೆ ಮುಗಿಯಲಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ. ಲಭ್ಯವಿರುವ ಲಸಿಕೆಗಳ ಪೈಕಿ ಶೇ.50ರಷ್ಟು ಮಾತ್ರ ನೀಡಲಾಗುತ್ತದೆ. 28 ದಿನಗಳ ಬಳಿಕ 2ನೇ ಡೋಸ್ ನೀಡಬೇಕಿರುವ ಕಾರಣ ಅವುಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಹೊಸದಾಗಿ ಲಸಿಕೆ ಬಂದರೆ ಅದಕ್ಕೆ ತಕ್ಕಂತೆ ಲೆಕ್ಕಾಚಾರ ಮಾಡಿಕೊಂಡು ಮತ್ತಷ್ಟು ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಧೈರ್ಯ ತುಂಬಲಿರುವ ವೈದ್ಯರು
ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ, ಖ್ಯಾತ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ಮೊದಲ ದಿನವೇ ಲಸಿಕೆ ಪಡೆಯಲಿದ್ದಾರೆ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಸಂಶೋಧಕರು, ವಿಜ್ಞಾನಿಗಳ ಮೇಲೆ ವಿಶ್ವಾಸವಿಟ್ಟು ಲಸಿಕೆ ಪಡೆಯಬಹುದು. ಯಾವುದೇ ಅಪಾಯ ಇಲ್ಲ ಎಂದು ಡಾ. ಬಲ್ಲಾಳ್ ಹೇಳಿದ್ದಾರೆ.
ಅರ್ಧ ಗಂಟೆ ಕೇಂದ್ರದಲ್ಲೇ ಇರಬೇಕು
ಲಸಿಕೆ ಪಡೆದವರು ಅರ್ಧ ತಾಸು ಲಸಿಕೆ ಕೇಂದ್ರದಲ್ಲೇ ಕುಳಿತುಕೊಳ್ಳಬೇಕು. ಈ ವೇಳೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಐದೇ ನಿಮಿಷದಲ್ಲಿ ಕರೆದೊಯ್ಯಲು ಅನುಕೂಲವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದಕ್ಕೆಲ್ಲಆತಂಕ ಪಡಬೇಡಿಚುಚ್ಚುಮದ್ದು ಪಡೆದ ಜಾಗದಲ್ಲಿ ನೋವು, ತಲೆನೋವು, ಜ್ವರ, ಶೀತ, ವಾಕರಿಕೆ, ಆಯಾಸ, ವಾಂತಿ, ತಲೆ ಸುತ್ತುವಿಕೆ ಕಂಡುಬರಬಹುದು. ಆದರೆ ಆತಂಕಪಡುವ ಅಗತ್ಯವಿಲ್ಲಎಂದಿದ್ದಾರೆ ತಜ್ಞರು.