ಆ್ಯಪ್ನಗರ

ದಾವೋಸ್‌ನಲ್ಲಿ ಕಾಶ್ಮೀರ ವಿಚಾರ ಕೆದಕಿದ ಪಾಕ್‌ಗೆ ಭಾರತ ಚಾಟಿ: ಟ್ರಂಪ್ 'ನೆರವಿನ' ಭರವಸೆಗೂ ಆಕ್ರೋಶ

'ಎಲ್ಲ ವಿಷಯಗಳಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ, ಇಲ್ಲದ ಸಮಸ್ಯೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರ ವಿಚಾರದಲ್ಲಿಯೂ ಅದರದ್ದು ವ್ಯರ್ಥ ನಿಲುವು. ಜಾಗತಿಕ ಸಮುದಾಯಕ್ಕೂ ಪಾಕಿಸ್ತಾನದ ದ್ವಂದ್ವ ಧೋರಣೆ ಅರ್ಥವಾಗಿದೆ' - ವಿದೇಶಾಂಗ ಇಲಾಖೆ

Vijaya Karnataka 23 Jan 2020, 7:01 pm

ಹೊಸ ದಿಲ್ಲಿ: ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ನೆರವು ನೀಡಲು ಸಿದ್ಧ ಎನ್ನುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಇದು ಭಾರತದ ಆಂತರಿಕ ವಿಚಾರ. ಮೂರನೆಯವರ ನೆರವಿನ ಅಗತ್ಯ ಇಲ್ಲ ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ.
Vijaya Karnataka Web imran trump and modi
ದಾವೋಸ್‌ನಲ್ಲಿ ಕಾಶ್ಮೀರ ವಿಚಾರ ಕೆದಕಿದ ಪಾಕ್‌ಗೆ ಭಾರತ ಚಾಟಿ: ಟ್ರಂಪ್ 'ನೆರವಿನ' ಭರವಸೆಗೂ ಆಕ್ರೋಶ


ದಾವೋಸ್‌ ಭೇಟಿ ವೇಳೆ ಟ್ರಂಪ್‌ ಉದ್ದೇಶಪೂರ್ವಕವಾಗಿಯೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಜತೆ ಕಾಶ್ಮೀರ ವಿಚಾರ ಕೆದಕಿ ನೆರವಿನ ಪ್ರಸ್ತಾಪ ಮಾಡಿದ ವರದಿಯಾಗಿದೆ. ಈ ಕುರಿತು ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೇಂದ್ರ ವಿದೇಶಾಂಗ ವಕ್ತಾರ ರವೀಶ್‌ ಕುಮಾರ್‌, ‘ಕಾಶ್ಮೀರ ಅಂತಾರಾಷ್ಟ್ರೀಯ ವಿಷಯವೇ ಅಲ್ಲ. ಅದು ಭಾರತದ ಆಂತರಿಕ ವಿಚಾರ. ಇದರಲ್ಲಿ ಮೂರನೆಯವರ ಮಧ್ಯಸ್ಥಿಕೆ ಅಗತ್ಯವೇ ಬರುವುದಿಲ್ಲ. ನಮ್ಮ ನಿಲುವು ಏನು ಎನ್ನುವುದನ್ನು ಹಲವು ಬಾರಿ ಸ್ಪಷ್ಟ ಪಡಿಸಿದ್ದೇವೆ. ಯಾರು ಏನೇ ಹೇಳಿದರೂ ಮುಂದೆಯೂ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.

‘ಒಂದು ವೇಳೆ ಪಾಕಿಸ್ತಾನದ ಪಾಲಿಗೆ ಕಾಶ್ಮೀರ ಸಮಸ್ಯೆ ಅನ್ನಿಸಿದ್ದರೂ ಅದನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಬೇಕು. ಅದಕ್ಕೂ ಮೊದಲು ಅಂತಹ ಚರ್ಚೆಗಳಿಗೆ ಅನುಕೂಲವಾಗುವ ಭಯೋತ್ಪಾದನೆ ಮುಕ್ತ ಹಾಗೂ ಹಿಂಸಾಚಾರ ಮುಕ್ತ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ’ ಎಂದು ಅವರು ಹೇಳಿದರು.

ಇಮ್ರಾನ್‌ ಖಾನ್‌ ಭೇಟಿ ವೇಳೆ ಮತ್ತೆ ಕಾಶ್ಮೀರ ವಿಚಾರದ ಬಗ್ಗೆ ಮೂಗು ತೂರಿಸಿದ ಟ್ರಂಪ್‌!

ಎಲ್ಲ ವಿಷಯಗಳಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ, ಇಲ್ಲದ ಸಮಸ್ಯೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರ ವಿಚಾರದಲ್ಲಿಯೂ ಅದರದ್ದು ವ್ಯರ್ಥ ನಿಲುವು. ಜಾಗತಿಕ ಸಮುದಾಯಕ್ಕೂ ಪಾಕಿಸ್ತಾನದ ದ್ವಂದ್ವ ಧೋರಣೆ ಅರ್ಥವಾಗಿದೆ ಎಂದು ರವೀಶ್‌ ಕುಮಾರ್‌ ಹರಿಹಾಯ್ದರು.

ದಾವೋಸ್‌ನಲ್ಲಿ ಟ್ರಂಪ್‌ ಜತೆಗಿನ ಮಾತುಕತೆ ವೇಳೆ ಇಮ್ರಾನ್‌ ಖಾನ್‌ ಕಾಶ್ಮೀರ ವಿಷಯ ಪ್ರಸ್ತಾಪಿಸಿ ನೆರವಿಗೆ ಯಾಚಿಸಿದ್ದರು. ಅದಕ್ಕೆ ತಕ್ಕಂತೆ ‘ಕಾಶ್ಮೀರ ಸಮಸ್ಯೆಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಅಗತ್ಯ ಬಿದ್ದರೆ ನೆರವು ನೀಡಲಾಗುವುದು’ ಎಂದು ಟ್ರಂಪ್‌ ಭರವಸೆ ನೀಡಿದ್ದರು.

ಕಾಶ್ಮೀರ ಸಮಸ್ಯೆ ಬಗೆ ಹರಿಸಲು ವಿಶ್ವಸಂಸ್ಥೆ ಬೇಕಿರಲಿಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ