ಆ್ಯಪ್ನಗರ

'ಸಿಎಎ ಭಾರತದ ಆಂತರಿಕ ವಿಷಯ', ಮಾನವ ಹಕ್ಕುಗಳ ಆಯೋಗಕ್ಕೆ ಇಂಡಿಯಾ ಖಡಕ್‌ ಉತ್ತರ

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಹಸ್ತಕ್ಷೇಪದ ಅರ್ಜಿ ಕುರಿತು ಭಾರತ ಸರಕಾರ ಖಡಕ್‌ ಉತ್ತರ ನೀಡಿದ್ದು, ಇದು ಭಾರತದ ಆಂತರಿಕ ವಿಷಯ, ಸಿಎಎ ಸಾಂವಿಧಾನಿಕ ಅಂಶಗಳನ್ನು ಹೊಂದಿದೆ ಎಂದಿದೆ.

Vijaya Karnataka Web 3 Mar 2020, 2:33 pm
ಹೊಸದಿಲ್ಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಹಸ್ತಕ್ಷೇಪ ಅರ್ಜಿ ಸಲ್ಲಿಸಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತ, ಸಿಎಎ ದೇಶದ ಆಂತರಿಕ ವಿಷಯ ಎಂದು ಖಡಕ್‌ ತಿರುಗೇಟು ನೀಡಿದ್ದು, ಭಾರತದ ಸಾರ್ವಭೌಮತ್ವದಲ್ಲಿ ಯಾರು ತಲೆಹಾಕದಂತೆ ಹೇಳಿದೆ.
Vijaya Karnataka Web SUPREME COURT


ಈ ಕುರಿತಂತೆ ಜಿನಿವಾದಲ್ಲಿರುವ ಶಾಶ್ವತ ಮಿಷನ್‌ಗೆ ಯುಎನ್‌ ಮಾನವ ಹಕ್ಕುಗಳ ಆಯೋಗ ಮಾಹಿತಿ ನೀಡಿತ್ತು ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಸಿಎಎ ಭಾರತದ ಆಂತರಿಕ ವಿಷಯ, ಭಾರತದ ಸಂಸತ್‌ಗೆ ಕಾನೂನು ಮಾಡುವ ಸಾರ್ವಭೌಮ ಅಧಿಕಾರ ಇದೆ ಎಂದು ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಚೇರಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಸ್ತಕ್ಷೇಪ ಅರ್ಜಿ ಸಲ್ಲಿಸಿದೆ ಎಂದು ಜಿನೀವಾದಲ್ಲಿನ ನಮ್ಮ ಶಾಶ್ವತ ಮಿಷನ್ ನಿನ್ನೆ ಸಂಜೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರಿಗೆ ತಿಳಿಸಿದೆ ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ತಿಳಿಸಿದರು.

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬರುವಂತಹ ವಿಷಯಗಳಲ್ಲಿ ಯಾವುದೇ ವಿದೇಶಿ ಸಂಸ್ಥೆ ಅಥವಾ ವಿದೇಶ ಅಡ್ಡಬರುವುದಿಲ್ಲ ಎಂದು ನಾವು ನಂಬಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದರು.

ದೆಹಲಿ ದಂಗೆಯಲ್ಲಿ ಪೊಲೀಸರತ್ತ ಬಂದೂಕು ಗುರಿಯಿಟ್ಟ ಶಾರೂಖ್ ಬಂಧನ!

ಸಿಎಎ ವಿಷಯದಲ್ಲಿ ಭಾರತ ಸ್ಪಷ್ಟವಾಗಿದ್ದು, ಅದು ಸಾಂವಿಧಾನಿಕವಾದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು, ಸಾಂವಿಧಾನಿಕ ಮೌಲ್ಯ ಹೊಂದಿದೆ ಎಂದು ಕುಮಾರ್‌ ಹೇಳಿದ್ದಾರೆ. ಇದು ಭಾರತದ ವಿಭಜನೆಯ ದುರಂತದಿಂದ ಉಂಟಾಗಿರುವ ಮಾನವ ಹಕ್ಕುಗಳ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ದೀರ್ಘಕಾಲದ ರಾಷ್ಟ್ರೀಯ ಬದ್ಧತೆಯ ಪ್ರತಿಫಲನವಾಗಿದೆ ಎಂದು ಅವರು ಹೇಳಿದರು.

ದೆಹಲಿ ದಂಗೆ ಪ್ರಸ್ತಾಪಿಸಿದ ಇರಾನ್ ಸಚಿವ: ರಾಯಭಾರಿಗೆ ಭಾರತದ ನೋಟಿಸ್!

ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಕಾನೂನಿನ ಮೂಲಕ ನಡೆಯುತ್ತಿದೆ. ನಾವು ನಮ್ಮ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವ ಹಾಗೂ ಸಂಪೂರ್ಣ ನಂಬಿಕೆಯಿಟ್ಟಿದ್ದೇವೆ. ನಮ್ಮ ಧ್ವನಿ ಕಾನೂನುಬದ್ಧವಾಗಿದ್ದು, ಅದನ್ನು ಸುಪ್ರೀಂ ಕೋರ್ಟ್ ಸಮರ್ಥಿಸುತ್ತದೆ ಎಂದು ನಾವು ನಂಬಿದ್ದೇವೆ ಎಂದರು.

ದೆಹಲಿ ಹಿಂಸಾಚಾರದ ಬೆನ್ನಲ್ಲೇ ಪ್ರಧಾನಿ ಮೋದಿಯನ್ನು ಭೇಟಿಯಾಗಲಿರುವ ಕೇಜ್ರಿವಾಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ