ಆ್ಯಪ್ನಗರ

ಜಲಾಂತರ್ಗಾಮಿ ಪ್ರತಿರೋಧಕ ‘ಸ್ಮಾರ್ಟ್‌’ ಕ್ಷಿಪಣಿ ಯಶಸ್ವಿ ಪರೀಕ್ಷೆ

ದೇಶದಲ್ಲಿ ಸ್ಥಳೀಯವಾಗಿ ಇತ್ತೀಚಿಗೆ ಅಭಿವೃದ್ದಿಪಡಿಸಿರುವ ಕ್ಷಿಪಣಿ ತಂತ್ರಜ್ಞಾನಗಳಲ್ಲಿ ಇದೊಂದು ಪ್ರಮುಖವಾದದ್ದು. ‘ಸ್ಮಾರ್ಟ್‌’ ರಕ್ಷಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಎನಿಸಿದೆ ಎಂದು ಡಿಆರ್‌ಡಿಒ ಹೇಳಿದೆ.

Agencies 5 Oct 2020, 8:00 pm
ಭುವನೇಶ್ವರ: ಭಾರತದ ಚೊಚ್ಚಲ ‘ಟಾರ್ಪಿಡೊ ಬಿಡುಗಡೆಗೆ ನೆರವಾಗುವ ಸೂಪರ್‌ ಸಾನಿಕ್‌ ಕ್ಷಿಪಣಿ’ (ಸ್ಮಾರ್ಟ್‌) ಪರೀಕ್ಷೆ ಸೋಮವಾರ ಯಶಸ್ವಿಯಾಗಿ ನೆರವೇರಿದೆ.
Vijaya Karnataka Web SMART Missile


ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ‘ಸ್ಮಾರ್ಟ್‌’ನಿಂದ ಭಾರತದ ಜಲಾಂತರ್ಗಾಮಿ ಪ್ರತಿರೋಧಕ ಸಾಮರ್ಥ್ಯ‌ ಹೆಚ್ಚಿದೆ. ಟಾರ್ಪಿಡೊ ನೀರಿನ ಆಳದಲ್ಲಿ ಅಥವಾ ನೀರಿನ ಮೇಲ್ಮೈನಿಂದಲೂ ಉಡಾವಣೆ ಮಾಡಬಹುದಾದ ಜಲಾಂತರ್ಗಾಮಿ ಶಸ್ತ್ರವಾಗಿದೆ.

ಬಾಲಾಸೋರ್‌ನ ಅಬ್ದುಲ್‌ ಕಲಾಂ ದ್ವೀಪ ಪ್ರದೇಶದಿಂದ ಬೆಳಗ್ಗೆ 11.45ಕ್ಕೆ ಈ ಪರೀಕ್ಷೆಯನ್ನು ನಡೆಸಲಾಯಿತು. ಎತ್ತರದವರೆಗಿನ ಕ್ಷಿಪಣಿ ಹಾರಾಟ, ಉಡಾವಣಾ ವಾಹಕದಿಂದ ಬೇರ್ಪಡಿಸುವಿಕೆ, ಟಾರ್ಪಿಡೊ ಬಿಡುಗಡೆ ಮತ್ತು ವೇಗ ಕಡಿತ ಕಾರ್ಯವಿಧಾನ ನಿಯೋಜನೆ ಸೇರಿದಂತೆ ಎಲ್ಲಾ ಸರಿಯಾಗಿ ನಡೆದಿದೆ ಎಂದು ರಕ್ಷ ಣಾ ಮೂಲಗಳು ತಿಳಿಸಿವೆ. ಪ್ರಪಂಚದಲ್ಲಿ ಲಭ್ಯವಿರುವ ದೀರ್ಘ ಶ್ರೇಣಿಯ ಟಾರ್ಪಿಡೊ ಸುಮಾರು 50 ಕಿ.ಮೀ ಮತ್ತು ರಾಕೆಟ್‌ ನೆರವಿನ ಟಾರ್ಪಿಡೊಗಳು 150 ಕಿ.ಮೀ ವ್ಯಾಪ್ತಿಯಲ್ಲಿ ಚಲಿಸಬಹುದಾದರೂ, ಹೈಬ್ರಿಡ್‌ ಕ್ಷಿಪಣಿ ‘ಸ್ಮಾರ್ಟ್‌’ 600 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.

"ದೇಶದಲ್ಲಿ ಸ್ಥಳೀಯವಾಗಿ ಇತ್ತೀಚಿಗೆ ಅಭಿವೃದ್ದಿಪಡಿಸಿರುವ ಕ್ಷಿಪಣಿ ತಂತ್ರಜ್ಞಾನಗಳಲ್ಲಿ ಇದೊಂದು ಪ್ರಮುಖವಾಗಿದೆ. ‘ಸ್ಮಾರ್ಟ್‌’ ರಕ್ಷಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಎನಿಸಿದೆ,’’ ಎಂದು ಡಿಆರ್‌ಡಿಒ ಮುಖ್ಯಸ್ಥ ಡಾ. ಜಿ. ಸತೀಶ್‌ ರೆಡ್ಡಿ ತಿಳಿಸಿದ್ದಾರೆ. ಮಹತ್ವದ ಸಾಧನೆಗಾಗಿ ಡಿಆರ್‌ಡಿಒ ವಿಜ್ಞಾನಿಗಳನ್ನು ಅಭಿನಂದಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, "ಜಲಾಂತರ್ಗಾಮಿ ಪ್ರತಿರೋಧಕ ಸಾಮರ್ಥ್ಯ‌ ಬಲಪಡಿಸುವಲ್ಲಿ ಇದು ಪ್ರಮುಖ ಮೈಲುಗಲ್ಲು," ಎಂದು ಬಣ್ಣಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ