ಕೋಲ್ಕೊತಾ: ಜಲಾಂತರ್ಗಾಮಿ ನೌಕೆಯ ಮೂಲಕ ಸಿಬ್ಬಂದಿಯನ್ನು ಅಧ್ಯಯನಕ್ಕಾಗಿ ಆಳದ ಸಮುದ್ರಕ್ಕೆ ಕಳಿಸಿಕೊಡುವ ಭಾರತದ ಕನಸು 2021-22ರ ವೇಳೆಗೆ ನನಸಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಒಂದೆರಡು ವರ್ಷಗಳಲ್ಲಿ ಮಹತ್ವಾಕಾಂಕ್ಷಿ 'ಸಮುದ್ರಯಾನ' ಯೋಜನೆ ಮೂಲಕ ಆಳ ಸಾಗರದ ಅಧ್ಯಯನ ನಡೆಸುವ ಕನಸು ಕೈಗೂಡಲಿದೆ. ಸಬ್ಮರಿನ್ ಮೂಲಕ 6000 ಮೀಟರ್ ಸಮುದ್ರ ತಳಭಾಗಕ್ಕೆ ಮೂವರು ತಜ್ಞರನ್ನು ಕಳಿಸಿಕೊಡುವ ಪ್ರಸ್ತಾಪ ಬಹುದಿನಗಳಿಂದ ಬಾಕಿ ಉಳಿದಿದೆ ಎಂದು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಎಂ.ಎ. ಆತ್ಮಾನಂದ ಹೇಳಿದ್ದಾರೆ. ದೇಶಿ ತಂತ್ರಜ್ಞಾನದ ಮೂಲಕ ಆರು ಕಿ.ಮೀ ಆಳದ ಸಮುದ್ರ ತಳಭಾಗಕ್ಕೆ 72 ಗಂಟೆಯಲ್ಲಿ ಚಲಿಸಬಲ್ಲ ಸಾಮರ್ಥ್ಯದ ಜಲಾಂತರ್ಗಾಮಿ ವಾಹನವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
2021ಕ್ಕೆ ಸಮುದ್ರಯಾನ ಕನಸು ನನಸು
ದೇಶಿ ತಂತ್ರಜ್ಞಾನದ ಮೂಲಕ ಆರು ಕಿ.ಮೀ ಆಳದ ಸಮುದ್ರ ತಳಭಾಗಕ್ಕೆ 72 ಗಂಟೆಯಲ್ಲಿ ಚಲಿಸಬಲ್ಲ ಸಾಮರ್ಥ್ಯದ ಜಲಾಂತರ್ಗಾಮಿ ವಾಹನವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.
Agencies 2 Sep 2019, 5:00 am