ಆ್ಯಪ್ನಗರ

ಪರೀಕ್ಷೆಗೆ ಸಿದ್ಧವಾದ ಕೆ-4 ಕ್ಷಿಪಣಿ : ಸಮುದ್ರದ ಆಳದಿಂದಲೇ ವೈರಿಪಡೆ ಸೀಳಬಲ್ಲ ಮಿಸೈಲ್‌

ಜಲಾಂತರ್ಗಾಮಿಗಳ ಮೂಲಕ ನೀರಿನಾಳದಿಂದಲೇ ವೈರಿಗಳನ್ನು ಗುರಿ ಇಟ್ಟು ಹೊಡೆಯಬಹುದಾದ ಕೆ- 4 ಕ್ಷಿಪಣಿ ಪ್ರಯೋಗಿಕ ಉಡಾವಣೆಗೆ ಸಿದ್ದಗೊಂಡಿದೆ. ವಿಶಾಖಪಟ್ಟಣ ಕಡಲತೀರದಿಂದ ಶುಕ್ರವಾರ ನೀರಿ ಆಳದಿಂದಲೇ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ.

Vijaya Karnataka Web 6 Nov 2019, 4:01 pm
ಭುವನೇಶ್ವರ: ಸಾವಿರಾರು ಕಿಮೀ ದೂರದಿಂದಲೇವೈರಿಗಳ ಮೇಲೆರಗಿ ಸದೆಬಡಿಯಬಹುದಾದ ಕ್ಷಿಪಣಿ ತಂತ್ರಜ್ಞಾನ ಮತ್ತಷ್ಟು ಬಲಗೊಳ್ಳುತ್ತಿದೆ. ಜಲಾಂತರ್ಗಾಮಿಗಳ ಮೂಲಕ ನೀರಿನಾಳದಿಂದಲೇ ವೈರಿಗಳನ್ನು ಗುರಿ ಇಟ್ಟು ಹೊಡೆಯಬಹುದಾದ ಕೆ- 4 ಕ್ಷಿಪಣಿ ಪ್ರಯೋಗಿಕ ಉಡಾವಣೆಗೆ ಸಿದ್ದಗೊಂಡಿದೆ.
Vijaya Karnataka Web k 4 missile
ಸಾಂದರ್ಭಿಕ ಚಿತ್ರ


ಆಂಧ್ರಪ್ರದೇಶದ ಕಡಲ ತೀರದಲ್ಲಿ ಜಲಾಂತರ್ಗಾಮಿ ಮೂಲಕ ಮುಂದಿನ ಶುಕ್ರವಾರ ಪ್ರಾಯೋಗಿಕವಾಗಿ ಉಡಾವಣೆಯಾಗಲಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನು 'ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ' (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಈ ಕ್ಷಿಪಣಿಗಳನ್ನು ಅರಿಹಂತ್‌ ದರ್ಜೆಯ ಜಲಾಂತರ್ಗಾಮಿಗಳ ನೀರಿನ ಆಳದಿಂದಲೇ ಉಡಾವಣೆ ಮಾಡಲು ಸಾದ್ಯವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಇದು ಅಣುಶಕ್ತಿ ಆಧಾರಿತ ಕ್ಷಿಪಣಿಯಾಗಿದೆ. ಡಿಆರ್‌ಡಿಒ ಯೋಜಿಸಿರುವಂತೆ ವಿಶಾಖಪಟ್ಟಣ ಕಡಲತೀರದಿಂದ ಶುಕ್ರವಾರ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ.

ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಅರಿಹಂತ್‌ ಜಲಾಂತರ್ಗಾಮಿಗಾಗಿಯೇ ಅಭಿವೃದ್ಧಿಪಡಿಸಲಾಗಿದೆ. ‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್‌ ಗುರಿ ಸಾಮರ್ಥ್ಯ ಹೊಂದಿದ್ದರೆ,‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್‌ ಗುರಿಸಾಮರ್ಥ್ಯ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ