ಆ್ಯಪ್ನಗರ

ದೇಶೀಯ ಅಸ್ತ್ರಗಳಿಂದಲೇ ವೈರಿಗಳ ಬಗ್ಗುಬಡಿವೆವು:ಜನರಲ್‌ ಬಿಪಿನ್‌ ರಾವತ್‌ ಕೆಚ್ಚಿನ ನುಡಿಗಳು

ಮುಂದೇನಾದರೂ ಯುದ್ಧ ಸಂಭವಿಸಿದೆ, ದೇಶೀಯ ನಿರ್ಮಿತ ಯುದ್ಧಾಸ್ತ್ರಗಳಿಂದಲೇ ವೈರಿ ರಾಷ್ಟ್ರವನ್ನು ಸದೆಬಡಿಯಲಾಗುವುದು ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಕೆಚ್ಚಿನ ನುಡಿಗಳಾಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ 41ನೇ ನಿರ್ದೇಶಕರ ಸಮ್ಮೇಳನದಲ್ಲಿ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

TIMESOFINDIA.COM 15 Oct 2019, 4:15 pm
ಹೊಸದಿಲ್ಲಿ: ಭಾರತವು ಮುಂದಿನ ಯುದ್ಧವನ್ನು ದೇಶೀಯ ತಂತ್ರಜ್ಞಾನದಿಂದಲೇ ತಯಾರಿಸಲಾದ ಶಸ್ತ್ರಾಸ್ತ್ರಗಳಿಂದಲೇ ಗೆಲ್ಲಲಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) 41ನೇ ನಿರ್ದೇಶಕರ ಸಮ್ಮೇಳನದಲ್ಲಿ ಮಾತನಾಡಿ, ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರ್ಪಡೆಯಾಗಿರುವ ಕುರಿತು ಹೆಮ್ಮಯ ಮಾತುಗಳನ್ನಾಡಿದರು.
Vijaya Karnataka Web bipin rawath


87ನೇ ವಾಯುಸೇನಾ ದಿನ: ಮಿಗ್ 21 ಯುದ್ಧ ವಿಮಾನದಲ್ಲಿ ಅಭಿನಂದನ್ ಸಾಹಸ ಪ್ರದರ್ಶನ

ಭಾರತಕ್ಕಿರುವ ಭವಿಷ್ಯದ ಯುದ್ಧದ ಅಪಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಯುದ್ಧಾಸ್ತ್ರಗಳು ಮತ್ತು ಇತರೆ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಭಾರತವು ಮುಖಾಮುಖಿ ಯುದ್ಧ ಮಾಡುವುದಿಲ್ಲ. ಬದಲಿಗೆ ಅತ್ಯಾಧುನಿಕ ಯುದ್ಧತಂತ್ರಗಳನ್ನು ಪ್ರಯೋಗ ಮಾಡಲಿದೆ. ಇದಕ್ಕಾಗಿ ಸೈಬರ್‌ಸ್ಪೇಸ್‌, ಬಾಹ್ಯಾಕಾಶ, ಲೇಸರ್‌, ವಿದ್ಯುನ್ಮಾನ ತಂತ್ರಗಳು, ರಾಬಾಟಿಕ್ಸ್‌ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಕುರಿತು ಪ್ರಸ್ತುತದಲ್ಲಿ ಯೋಚಿಸದಿದ್ದರೆ ಮುಂದು ತಡವಾಗಿಬಿಡುತ್ತದೆ
ಎಂದು ಹೇಳಿದರು.

ಉಗ್ರರ ಕಣ್ಣಾಮುಚ್ಚಾಲೆ ಆಟ ಇನ್ನು ಬಂದ್‌ : ಬಗ್ಗುಬಡಿಯುವುದೊಂದೇ ಬಾಕಿ- ಬಿಪಿನ್‌ ರಾವತ್

ದೇಶದ ರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವ ಡಿಆರ್‌ಡಿಒ ಶ್ರಮವನ್ನು ಬಿಪಿನ್‌ ರಾವತ್‌ ಪ್ರಶಂಸಿಸಿದ್ದಾರೆ. ಕಳೆದ ಕೆಲ ದಶಕಗಳಲ್ಲಿ ಈ ಸಂಸ್ಥೆ ಹಲವು ಸಾಹಸಗಳನ್ನು ಮಾಡಿದೆ. ಭಾರತೀಯ ಸೇನೆಗೆ ಡಿಆರ್‌ಡಿಒ ಸಂಸ್ಥೆಯಿಂದ ಭವಿಷ್ಯದಲ್ಲಿಯೂ ಹೆಚ್ಚಿನ ಅನುಕೂಲಗಳಾಗಲಿವೆ ಎಂದು ಹೇಳಿದರು.

ಡಿಆರ್‌ಡಿಒ ನಿರ್ದೇಶಕರ 41ನೇ ಸಮ್ಮೇಳನದಲ್ಲಿರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ , ವಾಯುದಳ ಮುಖ್ಯಸ್ಥ ಏರ್‌ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ, ನೌಕಾದಳ ಮುಖ್ಯಸ್ಥ ಅಡ್ಮಿರಲ್‌ ಕರಂಬಿರ್‌ ಸಿಂಗ್‌ ಹಾಗೂ ಡಿಆರ್‌ಡಿಒ ಮುಖ್ಯಸ್ಥ ಜಿ.ಸತೀಶ್‌ ರೆಡ್ಡಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ