ಆ್ಯಪ್ನಗರ

ಸಂಘಟಿತ ಹೋರಾಟವೇ ಭಾರತದ ಶಕ್ತಿ, ಇದರಲ್ಲಿ ಜಯ ಸಾಧಿಸುವುದು ಶತಃಸಿದ್ಧ: ಪ್ರಧಾನಿ ಮೋದಿ

ಭಾರತೀಯ ಸೇನೆಯ ಮೇಲೆ ಸಂಪೂರ್ಣ ನಂಬಿಕೆ ಇದ್ದು, ಸೈನಿಕರ ಶೌರ್ಯದ ಕೆಲಸ ಹೆಮ್ಮೆ ತರುವಂತದ್ದು ಎಂದು ಪ್ರಧಾನಿ ಅವರು ಹೇಳಿದರು.

Vijaya Karnataka Web 28 Feb 2019, 5:41 pm
ಹೊಸದಿಲ್ಲಿ: ಸಂಘಟಿತ ಹೋರಾಟವೇ ಭಾರತದ ಶಕ್ತಿಯಾಗಿದ್ದು, ಇದರಲ್ಲಿ ಜಯ ಸಾಧಿಸುವುದು ಶತಃಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಮೋ ಆಪ್ ಮೂಲಕ ಸಂವಾದ ನಡೆಸಿದ ಅವರು, ಭಾರತೀಯ ಸೇನೆಯ ಮೇಲೆ ಸಂಪೂರ್ಣ ನಂಬಿಕೆ ಇದ್ದು, ಸೈನಿಕರ ಶೌರ್ಯದ ಕೆಲಸ ಹೆಮ್ಮೆ ತರುವಂತದ್ದು ಎಂದವರು ಪ್ರಸಂಶೆ ವ್ಯಕ್ತಪಡಿಸಿದರು.


ಇಂದು ಭಾರತ ದೇಶ ಆತ್ಮವಿಶ್ವಾಸದಿಂದ ಬೆಳೆಯುತ್ತಿದೆ. ಆದರೆ, ದೇಶವನ್ನು ಅಸ್ಥಿರಗೊಳಿಸಲು ಶತ್ರುಗಳು ಪ್ರಯತ್ನಿಸುತ್ತಿದ್ದಾರೆ. ದೇಶದ ಅಭಿವೃದ್ಧಿ ತಡೆಯುವುದೇ ಶತ್ರುಗಳ ದುರುದ್ದೇಶವಾಗಿದೆ ಎಂದು ಕಿಡಿಕಾರಿದರು.

ನಾವೆಲ್ಲರೂ ಪರಾಕ್ರಮ ದೇಶದ ನಾಗರಿಕರಾಗಿದ್ದು, ಗಡಿ ಕಾಯುವ ಯೋಧರಂತೆ ಕೆಲಸ ಮಾಡಬೇಕಿದೆ. ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡುವುದು ಅವಶ್ಯಕವಾಗಿದೆ ಎಂದು ಪ್ರಧಾನಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ