ಆ್ಯಪ್ನಗರ

ಸ್ವಯಂ ರಕ್ಷಣೆಗೆ ಭಾರತ ಯಾವ ಕ್ರಮಕ್ಕೂ ಹಿಂಜರಿಯದು: ಅಮಿತ್ ಶಾ

ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾಋತೀಯ ವಾಯುಪಡೆ ನಡೆಸಿದ ಸರ್ಜಿಕಲ್ ದಾಳಿಗೆ ಎಲ್ಲ ಪಕ್ಷಗಳು, ರಾಜಕೀಯ ಮುಖಂಡರಿಂದ ವ್ಯಾಪಕ ಸ್ವಾಗತ, ಬೆಂಬಲ ವ್ಯಕ್ತವಾಗಿದೆ. ವಿದೇಶಗಳಿಂದಲೂ ರಾಜತಾಂತ್ರಿಕ ಬೆಂಬಲ ದೊರೆತಿದ್ದು, ಪಾಕಿಸ್ತಾನದ ಆಪ್ತ ಮಿತ್ರ ಚೀನಾ ಕೂಡ ಪಾಕ್ ಗೆ ಮುಕ್ತ ಬೆಂಬಲ ನೀಡಲು ಹಿಂಜರಿದಿದೆ.

Vijaya Karnataka Web 26 Feb 2019, 10:21 pm
ಹೊಸದಿಲ್ಲಿ: ಉರಿ ಉಗ್ರ ದಾಳಿ ಬಳಿಕ ನಡೆಸಿದ ಸರ್ಜಿಕಲ್ ದಾಳಿ ಮತ್ತು ಈಗ ನಡೆಸಿದ ವೈಮಾನಿಕ ದಾಳಿ- ಎರಡೂ ಸ್ವಯಂ ರಕ್ಷಣೆಗಾಗಿ ಭಾರತ ಕೈಗೊಂಡ ಕ್ರಮವಾಗಿದೆ. ದೇಶದ ಭದ್ರತೆಗಾಗಿ ಭಾರತೀಯ ಯೋಧರು ಮತ್ತು ಸರಕಾರ ಯಾವ ಹಂತಕ್ಕೂ ಹೋಗಬಲ್ಲದು ಎಂಬುದನ್ನು ಇವೆರಡೂ ಕಾರ್ಯಾಚರಣೆಗಳು ಜಗತ್ತಿಗೆ ತೋರಿಸಿಕೊಟ್ಟಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
Vijaya Karnataka Web Amit Shah


ಪಾಕಿಸ್ತಾನದ ಬಾಲಾಕೋಟ್‌ನ ಜೈಷೆ ಮೊಹಮ್ಮದ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯನ್ನು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಶ್ಲಾಘಿಸಿದ್ದಾರೆ. 'ಪುಲ್ವಾಮಾ ದಾಳಿ ನಡೆದು 2-3 ದಿನದೊಳಗೇ ಇದು ನಡೆಯುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಇದು ಸ್ವಾಗತಾರ್ಹ ಕ್ರಮ. ಈ ವಿಷಯದಲ್ಲಿ ನಾವು ಸರಕಾರದ ಬೆಂಬಲಕ್ಕೆ ನಿಲ್ಲುತ್ತೇವೆ' ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ.


ಜೈಷೆ ಮೊಹಮ್ಮದ್‌ ಸೇರಿದಂತೆ ಪಾಕಿಸ್ತಾನ ತನ್ನ ವ್ಯಾಪ್ತಿಯೊಳಗಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ತುರ್ತು ಹಾಗೂ ಅರ್ಥಪೂರ್ಣ ಕ್ರಮ ಕೈಗೊಳ್ಳಬೇಕು ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮೆರೈಸ್ ಪಾಯ್ನೆ ಆಗ್ರಹಿಸಿದ್ದಾರೆ.

ವಾಯುಪಡೆ ಸರ್ಜಿಕಲ್ ದಾಳಿ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.


ಪಾಕ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ, ಭಾರತ, ಪಾಕಿಸ್ತಾನಗಳೆರಡೂ ಗರಿಷ್ಠ ಸಂಯಮ ವಹಿಸುವಂತೆ ಐರೋಪ್ಯ ಕೂಟ ಒತ್ತಾಯಿಸಿದೆ.

ರಕ್ಷಣಾ ಪಡೆಗಳ ಕ್ರಮವನ್ನು ನಾವು ಶ್ಲಾಘಿಸುತ್ತೇವೆ. ಭಯೋತ್ಪಾದನೆಯನ್ನು ನಾಶಪಡಿಸುವ ಕಾರ್ಯಾಚರಣೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸರ್ವಪಕ್ಷ ಸಭೆ ಬಳಿಕ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ