ಆ್ಯಪ್ನಗರ

ಪಾಕಿಸ್ತಾನ ನಾಲಿಗೆ ಹರಿಬಿಟ್ಟರೆ ವಿಶ್ವಸಂಸ್ಥೆಯಲ್ಲಿಭಾರತ ಘರ್ಜನೆ

370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರದಲ್ಲಿಅಭಿವೃದ್ಧಿಯ ಪರ್ವ ಎಂಬುದನ್ನು ಅರಗಿಸಿಕೊಳ್ಳಲು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಆಗುತ್ತಿಲ್ಲಕ ಪಾಕಿಸ್ತಾನ ನಾಲಿಗೆ ಹರಿಬಿಟ್ಟರೆ, ಭಾರತ ಇನ್ನೂ ಜೋರಾಗಿ ಗರ್ಜಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿಭಾರತದ ರಾಯಭಾರಿ ಸೈಯದ್‌ ಅಕ್ಬರುದ್ದೀನ್‌ ಛೇಡಿಸಿದರು.

PTI 21 Sep 2019, 5:00 am
ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿಭಾರತದ ಆಂತರಿಕ ವಿಚಾರವಾದ ಕಾಶ್ಮೀರವನ್ನು ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನ ನಾಲಿಗೆ ಹರಿಬಿಟ್ಟರೆ, ಭಾರತ ಇನ್ನೂ ಜೋರಾಗಿ ಗರ್ಜಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿಭಾರತದ ರಾಯಭಾರಿ ಸೈಯದ್‌ ಅಕ್ಬರುದ್ದೀನ್‌ ಎಚ್ಚರಿಸಿದ್ದಾರೆ.
Vijaya Karnataka Web akbar

ಮೋದಿ ಅವರ ಅಮೆರಿಕ ಭೇಟಿ ಹಿನ್ನೆಲೆಯಲ್ಲಿಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾಧಿವೇಶನದಲ್ಲಿಕಾಶ್ಮೀರ ವಿಚಾರ ಚರ್ಚೆಗೆ ಬರಲಿದೆಯೇ ಎಂಬ ತೀಕ್ಷ$್ಣ ಪ್ರತಿಕ್ರಿಯೆ ನೀಡಿದರು.''ಪಾಕಿಸ್ತಾನ ಈಗಾಗಲೇ 'ಭಯೋತ್ಪಾದನೆ'ಯನ್ನು ಸಾಮಾನ್ಯ ವಿಷಯವಾಗಿಸಿದೆ. ಈಗ ವಿಶ್ವಸಂಸ್ಥೆಯಲ್ಲಿ'ದ್ವೇಷ ಭಾಷಣ'ವನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸುತ್ತಿದೆ. ಆದರೆ, ಕಪೋಲಕಲ್ಪಿತ, ದ್ವೇಷಪೂರಿತ ಆರೋಪಗಳು ಬಹಳ ಕಾಲ ನಡೆಯುವುದಿಲ್ಲ,''ಎಂದು ಛೇಡಿಸಿದರು.
''ಪಾಕಿಸ್ತಾನ ಕಾಶ್ಮೀರ ವಿಚಾರ ಪ್ರಸ್ತಾಪಿಸಿದರೆ ಆ ದೇಶವು ಜಾಗತಿಕ ವೇದಿಕೆಯಲ್ಲಿಮತ್ತಷ್ಟು ಮಂಡಿಯೂರಿದಂತೆಯೇ. ಆದರೆ, ಪಾಕಿಸ್ತಾನದ ಇಂತಹ ಪ್ರಯತ್ನಗಳಿಂದ ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. 370ನೇ ವಿಧಿ ರದ್ದತಿ ಬಳಿಕ ಜಮ್ಮು-ಕಾಶ್ಮೀರದಲ್ಲಿಅಭಿವೃದ್ಧಿಯ ಪರ್ವ ಎಂಬುದನ್ನು ಅರಗಿಸಿಕೊಳ್ಳಲು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಆಗುತ್ತಿಲ್ಲ,'' ಎಂದರು.
ಕಾಶ್ಮೀರ ವಿಚಾರ ಎತ್ತಲಿರುವ ಗುಟೆರಸ್‌?
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರು ವಿಶ್ವಸಂಸ್ಥೆ ಮಹಾಧಿವೇಶನದ ವೇಳೆ ಕಾಶ್ಮೀರ ಮತ್ತು ಕಣಿವೆಯಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಕಾಶ್ಮೀರ ಸಮಸ್ಯೆಗೆ ಮಾತುಕತೆಯೊಂದೇ ಮಾರ್ಗವೆಂದು ಈಗಾಗಲೇ ಗುಟೆರೆಸ್‌ ಹೇಳಿದ್ದಾರೆ. ಈ ಬಾರಿಯ ಮಹಾಧಿವೇಶನದ ವೇದಿಕೆಯನ್ನೂ ಇದೇ ವಿಷಯವನ್ನು ಪ್ರತಿಪಾದಿಸಲು ಅವರು ಬಳಸಿಕೊಳ್ಳಬಹುದೆಂದು ಗುಟೆರೆಸ್‌ ಅವರ ವಕ್ತಾರ ತಿಳಿಸಿದ್ದಾರೆ.
23ರಂದು ಟ್ರಂಪ್‌-ಇಮ್ರಾನ್‌ ಭೇಟಿ
ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿಸೆ.23ರಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಸೆ.27ರಂದು ಮೋದಿ ಅವರ ಬಳಿಕ ಮಹಾಧಿವೇಶನ ಉದ್ದೇಶಿಸಿ ಖಾನ್‌ ಮಾತನಾಡಲಿದ್ದು, ಕಾಶ್ಮೀರ ವಿಚಾರವನ್ನು ಬಲವಂತವಾಗಿಯಾದರೂ ಪ್ರಸ್ತಾಪ ಮಾಡುವುದಾಗಿ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ