ಆ್ಯಪ್ನಗರ

ವಾಯುಪಡೆ ಕೊಟ್ಟಿದೆ ಬಾಲಾಕೋಟ್‌ ಪಾರ್ಟ್‌-2 ಮುನ್ಸೂಚನೆ!: ಪಾಕ್ ಉಗ್ರರಿಗೆ ನಡುಕ ಶುರು!

ಬಾಲಾಕೋಟ್‌ ಮೇಲೆ ನಡೆಸಿದ ದಾಳಿಯನ್ನ ಪ್ರೋಮೋ ಮೂಲಕ ನೆನಪಿಸಿರುವ ಭಾರತೀಯ ವಾಯುಪಡೆ, ಮತ್ತೊಮ್ಮೆ ಪಾಕ್ ನೆಲದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಉತ್ಸಾಹದಲ್ಲಿದೆ! ಬಾಲಾಕೋಟ್‌ನಲ್ಲಿ ಉಗ್ರ ನೆಲೆಗಳು ಮತ್ತೆ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ, ವಾಯುಪಡೆಯ ಪ್ರೋಮೋ ಭಾರೀ ಕುತೂಹಲ ಕೆರಳಿಸಿದೆ!

Vijaya Karnataka Web 4 Oct 2019, 11:24 pm
ಹೊಸ ದಿಲ್ಲಿ: ಮತ್ತೆ ಉಗ್ರ ಶಿಬಿರಗಳು ಸಕ್ರಿಯಗೊಂಡಿರುವ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಮತ್ತೊಂದು ದಾಳಿಯ ಮುನ್ಸೂಚನೆ ನೀಡಿರುವ ವಾಯುಪಡೆ, ಸರಕಾರ ಸೂಚಿಸುವ ಯಾವುದೇ ಗುರಿಯನ್ನು ಕರಾರುವಕ್ಕಾದ ದಾಳಿ ಮೂಲಕ ನಾಶಪಡಿಸುವ ತಾಕತ್ತು ತನಗಿದೆ ಎಂದು ಹೇಳಿದೆ.
Vijaya Karnataka Web balakot


ಈ ವರ್ಷದ ಫೆಬ್ರವರಿ 26ರಂದು ಬಾಲಾಕೋಟ್‌ ಮೇಲೆ ವಾಯುಪಡೆ ನಡೆಸಿದ ವಾಯುದಾಳಿಯ 1.23 ನಿಮಿಷದ ಪ್ರಮೋಷನಲ್‌ ವಿಡಿಯೊ ಬಿಡುಗಡೆ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್‌ ಚೀಫ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ, ಪಾಕ್‌ ಬೆಂಬಲಿತ ಉಗ್ರರ ಸಂಹಾರಕ್ಕೆ ಯಾವುದೇ ದಿಟ್ಟ ಕಾರ್ಯಾಚರಣೆ ನಡೆಸಲು ನಮ್ಮ ಪಡೆ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.

'ಪಾಕ್‌ ಆಕ್ರಮಿತ ಕಾಶ್ಮೀರ ಕುರಿತು ಪ್ರತ್ಯೇಕ ಕಾರ್ಯತಂತ್ರಗಳು ನಮ್ಮ ಮುಂದಿಲ್ಲ. ಆದರೆ ಪಾಕ್‌ನ ಸಂಭಾವ್ಯ ದಾಳಿ ತಡೆಯಲು ನಮ್ಮ ಬಳಿ ಎಲ್ಲ ರೀತಿಯಿಂದಲೂ ವ್ಯೂಹಾತ್ಮಕ ಯೋಜನೆಗಳಿವೆ. ಒಂದಂತೂ ನಿಜ, ನಾವಾಗಿಯೇ ದಾಳಿಗೆ ಮುಂದಾಗುವುದಿಲ್ಲ. ಆದರೆ ನಮ್ಮ ತಂಟೆಗೆ ಬಂದರೆ ನಾವು ಪಾಕಿಸ್ತಾನವನ್ನು ಸುಮ್ಮನೆ ಬಿಡುವುದಿಲ್ಲ. ಸರಕಾರ ನಿರ್ದೇಶಿಸುವ ಟಾರ್ಗೆಟ್‌ಗಳನ್ನು ನಾಶಪಡಿಸಿಯೇ ಸಿದ್ಧ. ಅಂತಹ ತಾಕತ್ತು ವಾಯುಪಡೆಗೆ ಇದೆ' ಎಂದು ಹೇಳಿದರು. ಈ ವರ್ಷದ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಯೋಧರನ್ನು ಬಲಿಪಡೆದ ಜೈಷ್ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕೃತ್ಯಕ್ಕೆ ಭಾರತ ಬಾಲಾಕೋಟ್‌ ವಾಯುದಾಳಿ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು.

ಕೇಂದ್ರದಿಂದ ದಸರಾ ಬಂಪರ್ ಆಫರ್! ಕಾರ್, ಬೈಕ್, ಫ್ಲಾಟ್ ಖರೀದಿಸಬೇಕಾ? ಗೃಹ, ವಾಹನ ಸಾಲ ಅಗ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ