ಆ್ಯಪ್ನಗರ

IAF Strike: ಪಾಕ್ ಉಗ್ರರ ಮೇಲಿನ ದಾಳಿಗೆ ವ್ಯಾಪಕ ಶ್ಲಾಘನೆ

ವಾಯುಪಡೆ ಮತ್ತು ಸೇನೆಯ ಕಾರ್ಯಾಚರಣೆ ಜತೆಗೆ ಉಗ್ರದಮನಕ್ಕೆ ಕೈಗೊಂಡ ಪ್ಲ್ಯಾನ್, ಪುಲ್ವಾಮದಲ್ಲಿ ನಡೆದಿದ್ದ ಉಗ್ರದಾಳಿಗೆ ಪ್ರತೀಕಾರ ಕೈಗೊಂಡ ಸೇನೆಯ ಜೋಶ್‌ಗೆ ಜನರು ಸಂಭ್ರಮ ಆಚರಿಸಿದ್ದು, ಸೈನ್ಯಕ್ಕೆ ಶಹಬ್ಬಾಸ್ ಹೇಳಿದ್ದಾರೆ.

Vijaya Karnataka Web 26 Feb 2019, 12:36 pm
ಹೊಸದಿಲ್ಲಿ: ದೇಶವೇ ಅಚ್ಚರಿಗೊಳ್ಳುವಂತೆ ನಸುಕಿನಲ್ಲಿ ಪಾಪಿಸ್ತಾನದ ಉಗ್ರರ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಾಯುಪಡೆ ಮತ್ತು ಸೇನೆಯ ಕಾರ್ಯಾಚರಣೆ ಜತೆಗೆ ಉಗ್ರದಮನಕ್ಕೆ ಕೈಗೊಂಡ ಪ್ಲ್ಯಾನ್, ಪುಲ್ವಾಮದಲ್ಲಿ ನಡೆದಿದ್ದ ಉಗ್ರದಾಳಿಗೆ ಸೂಕ್ತ ಪ್ರತೀಕಾರ ನೀಡಿರುವುದಕ್ಕೆ ಜನರು ಸಂಭ್ರಮ ಆಚರಿಸಿದ್ದು, ಸೈನ್ಯಕ್ಕೆ ಶಹಬ್ಬಾಸ್ ಹೇಳಿದ್ದಾರೆ.

ರಾಜಕೀಯ ನಾಯಕರ ಜತೆಗೆ, ವಿವಿಧ ಪಕ್ಷ ಸಂಘಟನೆಗಳ ಪ್ರಮುಖರು ಸೇನೆ ಮತ್ತು ಭಾರತ ಸರಕಾರವನ್ನು ಅಭಿನಂದಿಸಿದ್ದು, ಉಗ್ರದಾಳಿಗೆ ಉಗ್ರವಾಗಿಯೇ ಪ್ರತೀಕಾರ ಕೈಗೊಂಡ ಸೈನ್ಯಕ್ಕೆ ಶುಭಹಾರೈಸಿದ್ದಾರೆ.

ಕಳೆದ ಬಾರಿ ಉರಿಯಲ್ಲಿ ನಡೆದಿದ್ದ ಉಗ್ರದಾಳಿಯ ಸಂದರ್ಭ ಪ್ರತೀಕಾರ ತೆಗೆದುಕೊಳ್ಳಲು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಆದರೆ ಈ ಬಾರಿ ಉಗ್ರನೆಲೆಗಳ ಮೇಲೆ ನೇರವಾಗಿ ಬಾಂಬ್ ದಾಳಿ ನಡೆಸುವ ಮೂಲಕ ಕ್ಷಣಾರ್ಧದಲ್ಲೇ ಉಗ್ರನೆಲೆ ಧ್ವಂಸಮಾಡಿದೆ.

ಉಗ್ರನೆಲೆಗಳ ಮೇಲಿನ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ನೇರವಾಗಿ ಕ್ಯಾಬಿನೆಟ್ ಸಭೆ ನಡೆಸಿ ದಾಳಿಯನ್ನು ಖಂಡಿಸಿದೆ.

ಅತ್ತ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿಯಾಗಿರುವುದು ಮತ್ತು ಉಗ್ರನೆಲೆ ಧ್ವಂಸವಾಗಿರುವುದು ಧೃಡವಾಗುತ್ತಲೇ ಇತ್ತ ಭಾರತದಲ್ಲಿ ಸಂಭ್ರಮಾಚರಣೆ ನಡೆದಿದೆ. ಸಾಮಾಜಿಕ ತಾಣ, ಟ್ವಿಟರ್, ಫೇಸ್‌ಬುಕ್‌ನಲ್ಲೂ ಸರ್ಜಿಕಲ್ ಸ್ಟ್ರೈಕ್ ಟ್ರೆಂಡಿಂಗ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ