ಗಡಿಯಲ್ಲಿ ಉನ್ನತ ಸೇನಾ ಕಮಾಂಡರ್ಗಳ ಸಭೆ!
ಅದರಂತೆ ಗಡಿ ಸಮಸ್ಯೆಗೆ ಗಡಿಯಿಂದಲೇ ಪರಿಹಾರ ಕಂಡುಹಿಡಿಲು ಮುಂದಾಗಿರುವ ಭಾರತ-ಚೀನಾ ಸೇನೆ, ಇಂದು ಉನ್ನತ ಸೇನಾ ಕಮಾಂಡರ್ಗಳ ಸಭೆ ನಡೆಸಲಿದೆ. ಸಭೆಯಲ್ಲಿ ಗಡಿ ಸಮಸ್ಯೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯದಿರುವ ಕುರಿತು ಉಭಯ ಸೇನಾ ಪ್ರಮುಖರು ಮಾತುಕತೆ ನಡೆಸಲಿದ್ದಾರೆ.
ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ: ಕುತೂಹಲ ಮೂಡಿಸಿದ ರಾಜನಾಥ್ ಹೇಳಿಕೆ!
ಎರಡೂ ಸೇನೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು, ಗಡಿ ತಂಟೆಗೆ ಮಿಲಿಟರಿ ಪರಿಹಾರಗಳತ್ತ ಗಮನಹರಿಸಲಾಗುವುದು ಎನ್ನಲಾಗಿದೆ. ಒಂದು ಕಡೆ ರಾಜತಂತ್ರಿಕ ಶಾಂತಿ ಮಾತುಕತೆಗಳು ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮಿಲಿಟರಿ ಪರಿಹಾರಕ್ಕೂ ಒತ್ತು ನೀಡಿರುವುದು ವಿಶೇಷವಾಗಿದೆ.
ಏನಿದು HCLM ಸಭೆ?
ಸಾಮಾನ್ಯವಾಗಿ ಗಡಿಯಲ್ಲಿ ಭಾರತ-ಚೀನಾ ಉನ್ನತ ಸೇನಾಧಿಕಾರಿಗಳ ನಡುವೆ ಆಗಾಗ ಸಭೆಗಳು ನಡೆಯುತ್ತಿರುತ್ತವೆ. ವಿವಿಧ ಸ್ತರದ ಅಧಿಕಾರಿಗಳ ಮಟ್ಟದ ಮಾತುಕತೆ ಸಾಮಾನ್ಯ ಸಂಗತಿಯಾಗಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲಿ ಮಾತ್ರ Higher Commander Level Meeting(HCLM) ಸಭೆ ನಡೆಯುತ್ತದೆ.ಉಭಯ ಸೇನೆಗಳ ಮೇಜರ್ ಜನರಲ್ ಸ್ತರದ ಅಧಿಕಾರಿಗಳು ಈ ಸಭೆಯ ನೇತೃತ್ವವಹಿಸುತ್ತಾರೆ.
'ಗಡಿ'ಬಿಡಿ ಚೀನಾಗೆ ಬೇಡುವ ಪರಿಸ್ಥಿತಿ ಬರಲಿದೆ: ಮೋದಿ ಸಭೆಯಲ್ಲಿ ಫೈನಲ್ ಸ್ಟ್ಯಾಟರ್ಜಿ!
ಎರಡೂ ದೇಶಗಳ ಗಡಿಗಳ ನಿರ್ದಿಷ್ಟ ಪ್ರದೇಶದಲ್ಲಿ ಉನ್ನತ ಸೇನಾ ಕಮಾಂಡರ್ಗಳು ಸಭೆ ಸೇರಿ ಶಾಂತಿಯುತವಾಗಿ ಗಡಿ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ. ಅದರಂತೆ ಇಂದು ಎರಡೂ ದೇಶಗಳ ಸೇನಾಧಿಕಾರಿಗಳ ನಡುವೆ HCLM ಸಭೆ ನಡೆಯಲಿರುವುದು ಅತ್ಯಂತ ಮಹತ್ವ ಪಡೆದುಕೊಂಡಿದೆ.
ಶಾಂತಿ ಮಾತುಕತೆ ಮಧ್ಯೆಯೂ ಚೀನಾದಿಂದ ಹೆಚ್ಚುವರಿ ಸೇನೆ ಜಮಾವಣೆ!
ಒಂದು ಕಡೆ ಭಾರತ-ಚೀನಾ ನಡುವೆ ಮಿಲಟರಿ ಹಾಗೂ ರಾಜತಾಂತ್ರಿಕ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ, ಚೀನಾ ಮಾತ್ರ ಗಡಿಯಲ್ಲಿ ಸೈನ್ಯ ಜಮಾವಣೆ ಮಾಡುವ ತನ್ನ ಪ್ರಕ್ರಿಯೆಯನ್ನು ಮುಂದುವರೆಸಿದೆ. ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಚೀನಿ ಪಡೆಗಳು ಭಾರತ ಗಡಿಯಲ್ಲಿ ಮತ್ತಷ್ಟು ಉತ್ತರಕ್ಕೆ ಸರಿದಿದ್ದು, ವಾಸ್ತವಿಕ ಗಡಿ ರೇಖೆ(LAC) ಬಳಿ ಮತ್ತಷ್ಟು ಸೈನ್ಯವನ್ನು ಜಮಾವಣೆಗೊಳಿಸಿದೆ ಎಂದು ಹೇಳಿದ್ದಾರೆ.
ಭಾರತದ ಗಡಿ ಬಳಿ ಉತ್ತರ ದಿಕ್ಕಿಗೆ ಚೀನಾ ಮತ್ತಷ್ಟು ಪಡೆಗಳನ್ನು ನುಗ್ಗಿಸಿದೆ: ಅಮೆರಿಕ!
ಅಂದರೆ ಭಾರತದೊಂದಿಗೆ ಶಾಂತಿ ಮಾತುಕತೆಯ ನಡುವೆಯೂ ತನ್ನ ಮಿಲಟರಿಯನ್ನು ಚೀನಾ ಸನ್ನದ್ದುಗೊಳಿಸುತ್ತಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಗಡಿಯಲ್ಲಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ.
ಸಮಸ್ಯೆ ಬಗೆಹರಿಯಲು ಇನ್ನೆಷ್ಟು ದಿನ ಬೇಕು?
ಭಾರತದೊಂದಿಗೆ ಗಡಿ ತಕರಾರು ತೆಗೆದಿರುವ ಚೀನಾಗೆ, ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿಗೆ ತಾನು ಕಾರಣ ಎಂಬುದನ್ನು ಮರೆಮಾಚುವ ಉದ್ದೇಶವಿದೆ. ಇದೇ ಕಾರಣಕ್ಕೆ ಹಾಂಕಾಂಗ್ ವಿವಾದಾತ್ಮಕ ಕಾನೂನನ್ನೂ ಜಾರಿಗೊಳಿಸಿ ವಿಶ್ವದ ಗಮನ ಬೇರೆಡೆ ಸೆಳೆಯುವ ಹುನ್ನಾರ ನಡೆಸಿದೆ.
ಇದೇ ಕಾರಣಕ್ಕೆ ಭಾರತದೊಂದಿಗಿನ ಗಡಿ ಸಮಸ್ಯೆಗೆ ಬೇಗ ಪರಿಹಾರ ಹುಡುಕುವುದು ಚೀನಾಗೆ ಬೇಕಿಲ್ಲ ಎಂಬಂತೆ ತೋರುತ್ತಿದೆ. ಸಮಸ್ಯೆಯನ್ನು ಆದಷ್ಟು ಮುಂದೂಡಿ ಆ ಮೂಲಕ ಕೊರೊನಾ ಆಪಾದನೆಯನ್ನು ಮರೆಮಾಚುವುದು ಚೀನಾದ ಉದ್ದೇಶ ಎಂಬುದರಲ್ಲಿ ಅನುಮಾನವಿಲ್ಲ.
ಗಡಿಯಲ್ಲಿ ಚೀನಾ ಉಪಟಳಕ್ಕೆ ಕಾರಣ ಹೇಳಿದ ನಿವೃತ್ತ ಸೇನಾ ಜನರಲ್ ವಿಕೆ ಸಿಂಗ್!
ಭಾರತದ ಮಾಜಿ ಹಿರಿಯ ಮಿಲಟರಿ ಅಧಿಕಾರಿಗಳು ಹಾಗೂ ಅಮೆರಿಕದ ರಕ್ಷಣಾ ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಗಡಿಯಲ್ಲಿ ಹೆಚ್ಚಿನ ಹಾನಿ ಬಯಸದ ಚೀನಾ ಸುಮ್ಮನೇ ಸಮಸ್ಯೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ.
ಅದೆನೆ ಇದ್ದರೂ ಭಾರತದ ಮಿಲಿಟರಿ ಹಾಗೂ ರಾಜತಾಂತ್ರಿಕ ಶಾಂತಿ ಮಾತುಕತೆಗಳು ಫಲ ನೀಡುವುದರಲ್ಲಿ ಸಂಶಯವಿಲ್ಲ.