ಆ್ಯಪ್ನಗರ

ಹನಿಟ್ರ್ಯಾಪ್‌ ಖೆಡ್ಡಾಗೆ ಸಿಲುಕಿದ ಯೋಧರು! ಇಬ್ಬರನ್ನು ವಶಕ್ಕೆ ಪಡೆದ ಸೇನೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೆಣೆದ ಹನಿಟ್ರ್ಯಾಪ್‌ಗೆ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿಇಬ್ಬರು ಯೋಧರನ್ನು ಸೇನೆಯ ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ನಡೆಸುತ್ತಿದ್ದಾರೆ.

Vijaya Karnataka 5 Nov 2019, 10:32 pm
ಜೋಧಪುರ: ಭಾರತ ಸೇನೆಯ ಮಾಹಿತಿ ಕಲೆಹಾಕಲು ಪಾಕಿಸ್ತಾನ ಹನಿಟ್ರ್ಯಾಪ್ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದು ಯೋಧರನ್ನೇ ಇದಕ್ಕಾಗಿ ಟಾರ್ಗೆಟ್ ಮಾಡುತ್ತಿದೆ. ಇಂತಹದೊಂದು ಹನಿಟ್ರ್ಯಾಪ್ ಖೆಡ್ಡಾಗೆ ಭಾರತೀಯ ಸೇನೆಯ ಇಬ್ಬರು ಯೋಧರು ಸಿಲುಕಿರುವ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
Vijaya Karnataka Web indian army arrest two army mans for honey trap case
ಹನಿಟ್ರ್ಯಾಪ್‌ ಖೆಡ್ಡಾಗೆ ಸಿಲುಕಿದ ಯೋಧರು! ಇಬ್ಬರನ್ನು ವಶಕ್ಕೆ ಪಡೆದ ಸೇನೆ


ಪಾಕ್ ಉಗ್ರರ ಉಪಟಳ; ಗಡಿಯಲ್ಲಿ ಹೆಚ್ಚುವರಿ ಯೋಧರ ನಿಯೋಜನೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೆಣೆದ ಹನಿಟ್ರ್ಯಾಪ್‌ಗೆ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಇಬ್ಬರು ಯೋಧರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಗುಪ್ತಚರ ದಳ (ಐಬಿ) ನೀಡಿದ ಮಾಹಿತಿ ಮೇರೆಗೆ ಸೇನಾಧಿಕಾರಿಗಳು ಕೂಡಲೇ ಜಾಗೃತರಾಗಿ ಯೋಧರನ್ನು ವಶಕ್ಕೆ ಪಡೆದಿದ್ದಾರೆ.

ರಜೆ ಮೇಲೆ ರಾಜಸ್ಥಾನದ ಜೋಧಪುರಕ್ಕೆ ಇಬ್ಬರೂ ಯೋಧರು ಪೊಖ್ರಾನ್‌ನಿಂದ ತೆರಳುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಯೋಧ ಒಡಿಶಾ ಮೂಲದವರಾದರೆ, ಮತ್ತೊಬ್ಬ ಮಧ್ಯಪ್ರದೇಶದ ಮೂಲದವರಾಗಿದ್ದಾರೆ. ಪೊಖ್ರಾನ್‌ ಫೈರಿಂಗ್‌ ರೇಂಜ್‌ ಕುರಿತಾದ ಗೌಪ್ಯ ಮಾಹಿತಿಗಳನ್ನು ಇಬ್ಬರೂ ಯೋಧರು ಪಾಕಿಸ್ತಾನದ ಗೂಢಚಾರರಿಗೆ ನೀಡಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

ಯೋಧರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಮಾಡಿ ಹನಿಟ್ರ್ಯಾಪ್ ಬಲೆಗೆ ಕೆಡವಿ ಬಳಿಕ ಮಾಹಿತಿಯನ್ನು ಕಲೆಹಾಕುವ ತಂತ್ರವನ್ನು ಪಾಕ್ ಐಎಸ್‌ಐ ಮಾಡುತ್ತಿದೆ. ಈ ಹಿಂದೆ ಇಂತಹ ಪ್ರಯತ್ನ ಬಹಿರಂಗಗೊಂಡಿತ್ತು. ಬಳಿಕ ಯೋಧರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸೇನೆ ಸೂಚನೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ