ಆ್ಯಪ್ನಗರ

ಚಿನಾರ್ ಕಾರ್ಪ್ಸ್‌ಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ: ಕಾರ್ಯಾಚರಣೆ ಸಿದ್ಧತೆ ಪರಿಶೀಲನೆ!

ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಎಂಎಂ ನರವಣೆ, ಇಂದು(ಗುರುವಾರ) ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಹೊಣೆ ಹೊತ್ತಿರುವ ಚಿನಾರ್ ಕಾರ್ಪ್ಸ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಚಿನಾರ್ ಕಾರ್ಪ್ಸ್ ಮುಖ್ಯಸ್ಥ ಲೆ.ಜ. ಬಿಎಸ್ ರಾಜು ಹಾಗೂ ಇತರ ಉನ್ನತ ಸೇನಾಧಿಕಾರಿಗಳು ನರವಣೆ ಅವರಿಗೆ ಸಾಥ್ ನೀಡಿದರು.

Vijaya Karnataka Web 17 Sep 2020, 7:44 pm
ನವದೆಹಲಿ: ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಎಂಎಂ ನರವಣೆ, ಇಂದು(ಗುರುವಾರ) ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಹೊಣೆ ಹೊತ್ತಿರುವ ಚಿನಾರ್ ಕಾರ್ಪ್ಸ್‌ಗೆ ಭೇಟಿ ನೀಡಿದ್ದಾರೆ.
Vijaya Karnataka Web General MM Naravane
ಚಿನಾರ್ ಕಾರ್ಪ್ಸ್‌ಗೆ ಭೇಟಿ ನೀಡಿದ ಭಾರತೀಯ ಭೂಸೇನೆ ಮುಖ್ಯಸ್ಥ ಜನರಲ್ ಎಂಎಂ ನರವಣೆ


ಚಿನಾರ್‌ ಕಾರ್ಪ್ಸ್‌ನ ಮುಂಚೂಣಿ ಸೇನಾ ನೆಲೆಗೆ ಭೇಟಿ ನೀಡಿದ ಜನರಲ್ ಎಂಎಂ ನರವಣೆ, ಕಾರ್ಯಾಚರಣೆ ಸಿದ್ಧತೆಯನ್ನು ಪರಿಶೀಲಿಸಿದರು. ಈ ವೇಳೆ ಚಿನಾರ್ ಕಾರ್ಪ್ಸ್ ಮುಖ್ಯಸ್ಥ ಲೆ.ಜ. ಬಿಎಸ್ ರಾಜು ಹಾಗೂ ಇತರ ಉನ್ನತ ಸೇನಾಧಿಕಾರಿಗಳು ನರವಣೆ ಅವರಿಗೆ ಸಾಥ್ ನೀಡಿದರು.

ಈ ವೇಳೆ ಚಿನಾರ ಕಾರ್ಪ್ಸ್‌ನ ವೃತ್ತಿಪರತೆ ಹಾಗೂ ಕರ್ತವ್ಯದ ಮೇಲಿನ ಶ್ರದ್ಧೆಯಂತ ಉನ್ನತ ಗುಣಮುಟ್ಟಕ್ಕಾಗಿ, ಜನರಲ್ ಎಂಎಂ ನರವಣೆ ಸೈನಿಕರನ್ನು ಅಭಿನಂದಿಸಿದರು.

ಹೌ ಇಸ್ ದಿ ಜೋಶ್?: ಮುಂಚೂಣಿ ನೆಲೆಗಳ ವೀರರೊಂದಿಗೆ ಸೇನಾ ಮುಖ್ಯಸ್ಥರ ಸಂವಾದ!

ಚಿನಾರ್ ಕಾರ್ಪ್ಸ್ ಭಾರತೀಯ ಸೇನೆಯ ಹೆಮ್ಮೆಯ ಸೈನ್ಯ ತುಕಡಿಯಾಗಿದ್ದು, ಭಾರತದ ಗಡಿ ಸುರಕ್ಷತೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಭೂಸೇನಾ ಮುಖ್ಯಸ್ಥ ಅಭಿಪ್ರಾಯಪಟ್ಟರು.


ಕಣಿವೆಯ ಲೆ.ಗವರ್ನರ್ ಭೇಟಿ ಮಾಡಿದ ಸೇನಾಧ್ಯಕ್ಷ:
ಇನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ ಭೂಸೇನಾ ಮುಖ್ತಸ್ಥ ಜನರಲ್ ಎಂಎಂ ನರವಣೆ, ಕಣಿವೆಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು.

ವಿಶೇಷ ಸ್ಥಾನಮಾನ ರದ್ದತಿ ಬಳಿಕದ ಕಣಿವೆಯ ಸ್ಥಿತಿಗತಿ ಹಾಗೂ ಶಾಂತಿ ಕಾಪಾಡುವಲ್ಲಿ ಸೈನ್ಯದ ಪಾತ್ರದ ಕುರಿತು ನರವಣೆ ಹಾಗೂ ಮನೋಜ್ ಸಿನ್ಹಾ ಚರ್ಚೆ ನಡೆಸಿದರು ಎಂದು ಸೇನಾ ಮೂಲಗಳು ಖಚಿತಪಡಿಸಿವೆ.

ಭಾರತ-ಚೀನಾ ಸಂಘರ್ಷ, ಗಡಿಯಲ್ಲಿ ಉದ್ವಿಗ್ನ ವಾತಾವರಣ, ಪರಿಸ್ಥಿತಿ ಎದುರಿಸಲು ಸನ್ನದ್ಧ: ಸೇನಾ ಮುಖ್ಯಸ್ಥ ‌ ವಾರ್ನಿಂಗ್‌

ಲಡಾಖ್ ಗಡಿ ಉದ್ವಿಗ್ನತೆ ಬಳಿಕ ಎರಡು ಬಾರಿ ಗಡಿಯ ಮುಂಚೂಣಿ ಸೇನಾ ನೆಲೆಗಳಿಗೆ ಭೇಟಿ ನೀಡಿರುವ ಭೂಸೇನಾಧ್ಯಕ್ಷ ಜನರಲ್ ನರವಣೆ, ಇದೀಗ ಜಮ್ಮು ಮತ್ತು ಕಾಶ್ಮೀರದ ಚಿನಾರ್ ಕಾರ್ಪ್ಸ್ ಸೇನಾ ನೆಲೆಗೂ ಭೇಟಿ ನೀಡಿರುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ