ಆ್ಯಪ್ನಗರ

ಲಡಾಖ್‌ ಗಡಿಯಲ್ಲಿರುವ ಯೋಧರಿಗೆ ಕಡು ಚಳಿಯೇ ಸವಾಲು, ಆಕ್ಸಿಜನ್‌ ಪ್ರಮಾಣ ತೀರಾ ಕಡಿಮೆ!

16000 ಅಡಿ ಎತ್ತರದ ಗಲ್ವಾನ್‌ ಕಣಿವೆಯಲ್ಲಿ ಆಕ್ಸಿಜನ್‌ ಪ್ರಮಾಣ ತೀರಾ ಕಡಿಮೆ. ಜತೆಗೆ ಕಾಡುವ ಕಡು ಚಳಿ ಯೋಧರನ್ನು ಕಂಗೆಡಿಸುತ್ತದೆ. ಸೆಪ್ಟೆಂಬರ್‌ನಿಂದ ಇಡೀ ಗಲ್ವಾನ್‌ ಕಣಿವೆ ಚಳಿಯ ಅಟ್ಟಹಾಸದಿಂದ ಮುದುಡಿ ಹೋಗುತ್ತದೆ.

Vijaya Karnataka Web 29 Jul 2020, 7:30 am
ಹೊಸದಿಲ್ಲಿ: ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಭಾರತ-­ಚೀನಾ ಸೇನಾ ಪಡೆಗಳ ನಡುವೆ ಜೂನ್‌ 15ರಂದು ನಡೆಸಿದ ಮಾರಾಮಾರಿಯಲ್ಲಿ ಬಹುತೇಕ ಯೋಧರ ಸಾವಿಗೆ ಹೈಪಾಕ್ಸಿಯಾ (ಆಮ್ಲ­ಜನಕ ಕೊರೆತೆಯಿಂದ ಉಸಿರು­ಗಟ್ಟುವುದು) ಮತ್ತು ಹೈಪೊಥರ್ಮಿಯಾ (ಅತಿಯಾದ ಚಳಿ) ಕಾರಣ ಎಂದು ವರದಿಗಳು ತಿಳಿಸಿವೆ.
Vijaya Karnataka Web untitled-23


ಇದು ನಿಜವೇ ಆಗಿದ್ದರೆ ಈ ವರ್ಷದ ಚಳಿಗಾಲದ ಋುತುವಿನಲ್ಲಿ ಗಡಿಯಲ್ಲಿ ಕಾವಲು ಕಾಯುವುದು ಯೋಧರಿಗೆ ದೊಡ್ಡ ಸವಾಲಾಗಲಿದೆ. 16000 ಅಡಿ ಎತ್ತರದ ಗಲ್ವಾನ್‌ ಕಣಿವೆಯಲ್ಲಿ ಆಕ್ಸಿಜನ್‌ ಪ್ರಮಾಣ ತೀರಾ ಕಡಿಮೆ. ಜತೆಗೆ ಕಾಡುವ ಕಡು ಚಳಿ ಯೋಧರನ್ನು ಕಂಗೆಡಿಸುತ್ತದೆ. ಸೆಪ್ಟೆಂಬರ್‌ನಿಂದ ಇಡೀ ಗಲ್ವಾನ್‌ ಕಣಿವೆ ಚಳಿಯ ಅಟ್ಟಹಾಸದಿಂದ ಮುದುಡಿ ಹೋಗುತ್ತದೆ.

ಇಂತಹ ಸಂದರ್ಭದಲ್ಲಿ ಕ್ಯಾತೆ ತೆಗೆದಿರುವ ಚೀನಾ, ಉಭಯ ಪಡೆಗಳ ಪಾಲಿಗೆ ಬಹುದೊಡ್ಡ ಸಂಕಷ್ಟವನ್ನು ತಂದಿಟ್ಟಿದೆ. ಶಾಂತಿ ಸಂಧಾನದ ಬಳಿಕವೂ ಚೀನಾ ಪಡೆಗಳು ಗೋಗ್ರಾ ಪಾಯಿಂಟ್‌ ಸೇರಿ­ದಂತೆ ಎಲ್‌ಎಸಿಯ ಹಲವು ಭಾಗಗಳಲ್ಲಿ ಬೀಡು ಬಿಟ್ಟಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಕೂಡ ಆ ದುರ್ಗಮ ಕಣಿವೆಯಲ್ಲಿ ಕಾವಲು ನಿಯೋಜನೆಗೊಂಡಿವೆ.

ಭಾರತದ ವಿಐಪಿಗಳ ಹತ್ಯೆಗೆ ತಾಲಿಬಾನ್‌ನ 20 ಉಗ್ರರಿಗೆ ಪಾಕಿಸ್ತಾನ ಸೇನೆಯಿಂದ ತರಬೇತಿ!

ಸೆಪ್ಟೆಂಬರ್‌ನಿಂದ ಈ ಯೋಧರಿಗೆ ಮಾನವ ಸಂಘರ್ಷಕ್ಕಿಂತ ಪ್ರಕೃತಿ ತಂದೊಡ್ಡುವ ಸವಾಲು ಭೀಕರ­ವಾಗಿರುತ್ತದೆ. ಈಗಾಗಲೇ ಶೂನ್ಯ ಡಿಗ್ರಿಗೆ ಇಳಿದಿರುವ ಇಲ್ಲಿನ ಉಷ್ಣಾಂಶ ಚಳಿಗಾಲ­ದಲ್ಲಿ ಮೈನಸ್‌ ಡಿಗ್ರಿ ಸೆಲ್ಸಿಯಸ್‌ಗೆ ಜಾರು­ತ್ತದೆ. ಆಗ ಉಸಿರಾಡಲೂ ಯೋಧರು ಪರದಾಡಬೇಕಾಗುತ್ತದೆ.

''ಇದುವರೆಗೆ ಇಲ್ಲಿ ಬರೀ ಹವಾ­ಮಾನವೊಂದರಿಂದಲೇ ಯಾರೂ ಸತ್ತಿಲ್ಲ. ಆದರೆ ಮೂಳೆ ಕೊರೆಯುವ ಶೀತಗಾಳಿ ಪರಿಸ್ಥಿತಿಯನ್ನು ಕ್ಲಿಷ್ಟಗೊಳಿಸುತ್ತದೆ. ಅದ­ರಲ್ಲೂಗಲ್ವಾನ್‌, ಗೋಗ್ರಾ- ಹಾಟ್‌ ಸ್ಟ್ರಿಂಗ್ಸ್‌ ಪ್ರದೇಶದಲ್ಲಿಅತಿ ಕೆಟ್ಟ ಥಂಡಿ ಆವರಿಸುತ್ತದೆ,'' ಎಂದು ಹಿರಿಯ ಕಮಾಂಡರ್‌ ಒಬ್ಬರು ತಿಳಿಸಿದ್ದಾರೆ. ಚಳಿಗಾಲಕ್ಕೆ ಈ ಭಾಗದಲ್ಲಿಎಂಟರಿಂದ ಹತ್ತು ಅಡಿಗಳಷ್ಟು ದಪ್ಪ ಹಿಮ ಆವರಿ­ಸುತ್ತದೆ. ಸೇನಾ ಸಂಚಾರ ಕಷ್ಟವಾಗುತ್ತದೆ.

ಒಂದೆಡೆಯಿಂದ ಇನ್ನೊಂದೆಡೆಗೆ ನೆಲೆ ಬದಲಿಸಬೇಕಾದರೂ ದಿನಗಟ್ಟಲೆ ಸರ್ಕರ್‌ ಮಾಡಬೇಕಾಗುತ್ತದೆ. ಯೋಧರ ಸಮರ ಸಾಮಗ್ರಿಗಳು ಕೂಡ ಹಿಮ ಹೊದಿಕೆಯಡಿ ಮುಚ್ಚಿ ಹೋಗುತ್ತವೆ. ಈ ವ್ಯತಿರಿಕ್ತ ಹವಾಮಾನ ಎದುರಿಸಿ ಕಾದಾಡುವ ತರಬೇತಿಯನ್ನು ಚೀನಾ ಮತ್ತು ಭಾರ­ತೀಯ ಯೋಧರು ಪಡೆದಿದ್ದಾರೆ. ಜೂನ್‌ 15ರ ಮಾರಾಮಾರಿಗಿಂತ ಮೊದಲು ವಾಸ್ತವ ನಿಯಂತ್ರಣ ರೇಖೆಗಿಂತ 2.5-3 ಕಿ.ಮೀ ಹಿಂದೆ ಸೇನೆಗಳು ನಿಯೋಜನೆ­ಗೊಂಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ