ಹೊಸದಿಲ್ಲಿ: ಭಾರತೀಯ ಸೈನಿಕರು ತಮ್ಮ ದೇಶ ರಕ್ಷಣೆಗಾಗಿ ಪ್ರಾಣವನ್ನೇ ಅರ್ಪಿಸುತ್ತಾರೆ. ಇಂತಹದೊಂದು ಘಟನೆಯಲ್ಲಿ ಹಿಮಪಾತದಲ್ಲಿ ಸಿಲುಕಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಉತ್ತರ ಸಿಕ್ಕಿಂನ ಲುಗ್ನಾಕ್ ಲಾ ಪರ್ವತ ಪ್ರದೇಶದಲ್ಲಿ ಭಾರಿ ಹಿಮಪಾತಕ್ಕೆ ಲೆಫ್ಟಿನಂಟ್ ಕರ್ನಲ್ ಹಾಗೂ ಸೈನಿಕ ಹುತಾತ್ಮರಾದರು.
ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಹಾಗೂ ಸೈನಿಕ ಸಪಾಲಾ ಷಣ್ಮುಖ ರಾವ್ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ.
ದೇಶಭಕ್ತ ಯುವಕರಿಗೆ ಆರ್ಮಿಯಲ್ಲಿ 3 ವರ್ಷ ಸೈನಿಕರಾಗುವ ಅವಕಾಶ!
ಈ ಯೋಧರು 18 ಸದಸ್ಯರ ಪಡೆಯ ಭಾಗವಾಗಿದ್ದರು. ಆದರೆ ಭಾರಿ ಹಿಮಪಾತ ಸಂಭವಿಸಿದ ಕಾರಣ ವಿಪತ್ತು ಎದುರಾಗಿತ್ತು ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದೆ.
ಮೇ 14 ಗುರುವಾರದಂದು ಘಟನೆ ನಡೆದಿದ್ದು, ಪೆಟ್ರೋಲಿಂಗ್ ಹಾಗೂ ಮಂಜುಗಡ್ಡೆ ನಿವಾರಣಾ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತ್ತು.
ರಕ್ಷಣಾ ತಂಡ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದರೂ ಮಂಜುಗಡ್ಡೆಯ ಕೆಳಗಡೆ ಸಿಕ್ಕಿ ಬಿದ್ದ ಸೈನಿಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಆರ್ಮಿ ಮೂಲಗಳು ತಿಳಿಸಿದೆ.
ಗಡಿಯಲ್ಲಿ ಭಾರತ-ಚೀನಾ ಸಂಘರ್ಷ ಹೊಸತೇನಲ್ಲ: ಭೂ ಸೇನಾ ಮುಖ್ಯಸ್ಥ
ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಹಾಗೂ ಸೈನಿಕ ಸಪಾಲಾ ಷಣ್ಮುಖ ರಾವ್ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ.
ದೇಶಭಕ್ತ ಯುವಕರಿಗೆ ಆರ್ಮಿಯಲ್ಲಿ 3 ವರ್ಷ ಸೈನಿಕರಾಗುವ ಅವಕಾಶ!
ಈ ಯೋಧರು 18 ಸದಸ್ಯರ ಪಡೆಯ ಭಾಗವಾಗಿದ್ದರು. ಆದರೆ ಭಾರಿ ಹಿಮಪಾತ ಸಂಭವಿಸಿದ ಕಾರಣ ವಿಪತ್ತು ಎದುರಾಗಿತ್ತು ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದೆ.
ಮೇ 14 ಗುರುವಾರದಂದು ಘಟನೆ ನಡೆದಿದ್ದು, ಪೆಟ್ರೋಲಿಂಗ್ ಹಾಗೂ ಮಂಜುಗಡ್ಡೆ ನಿವಾರಣಾ ತಂಡ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತ್ತು.
ರಕ್ಷಣಾ ತಂಡ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದರೂ ಮಂಜುಗಡ್ಡೆಯ ಕೆಳಗಡೆ ಸಿಕ್ಕಿ ಬಿದ್ದ ಸೈನಿಕರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಆರ್ಮಿ ಮೂಲಗಳು ತಿಳಿಸಿದೆ.
ಗಡಿಯಲ್ಲಿ ಭಾರತ-ಚೀನಾ ಸಂಘರ್ಷ ಹೊಸತೇನಲ್ಲ: ಭೂ ಸೇನಾ ಮುಖ್ಯಸ್ಥ