ಆ್ಯಪ್ನಗರ

ಕುತಂತ್ರಿ ಪಾಕ್ ವಿರುದ್ಧ ಗುಂಡಿನ ಮಳೆಗರೆದ ಭಾರತ! ಗಡಿಯಲ್ಲಿದ್ದ ಉಗ್ರರ ಕ್ಯಾಂಪ್‌ ಉಡೀಸ್

ಒಂದು ಕಡೆ ಏಕಾಏಕಿ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡೋದು, ಮತ್ತೊಂದು ಕಡೆ ಉಗ್ರರನ್ನು ಭಾರತದೊಳಗೆ ನುಗ್ಗಿಸೋದು.. ಪಾಕಿಸ್ತಾನದ ಈ ಕುತಂತ್ರಕ್ಕೆ ಭಾರತೀಯ ಸೇನೆ ತಕ್ಕಪಾಠ ಕಲಿಸಿದೆ.

TIMESOFINDIA.COM 20 Oct 2019, 5:14 pm

ಹೊಸ ದಿಲ್ಲಿ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿದೆ. ಪಾಕಿಸ್ತಾನದ ನಾಲ್ಕು ಉಗ್ರ ಕ್ಯಾಂಪ್‌ಗಳು ಹಾಗೂ ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದೊಡ್ಡ ಮಟ್ಟದ ಆರ್ಟಿಲರಿ ದಾಳಿ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆಯ ತಂಗಧರ್ ವಲಯದುದ್ದಕ್ಕೂ ಭಾರತೀಯ ಸೇನೆ ದಾಳಿ ಮುಂದುವರೆಸಿದ್ದು, ಸರ್ಕಾರಿ ಮೂಲಗಳ ಪ್ರಕಾರ ಐವರು ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ.
Vijaya Karnataka Web artillary indian army


ಪಾಕಿಸ್ತಾನ ಸೇನೆಯ ಹೇಡಿ ಕೃತ್ಯ! ರಾತ್ರೋರಾತ್ರಿ ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ

ನಾಲ್ಕರಿಂದ ಐದು ಉಗ್ರರು ಭಾರತದ ಶೆಲ್‌ ದಾಳಿಗೆ ಜೀವಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಗಡಿಯೊಳಗೆ ಉಗ್ರರು ನುಸುಳಲು ಅನುವು ಮಾಡಿಕೊಡ್ತಿದ್ದ ಪಾಕಿಸ್ತಾನ ಸೇನೆ, ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ.

ಶನಿವಾರವಷ್ಟೇ ಪಾಕ್ ಸೇನೆಯ ದಾಳಿಗೆ ಇಬ್ಬರು ಭಾರತೀಯ ಸೇನೆ ಯೋಧರು ಹಾಗೂ ಓರ್ವ ನಾಗರಿಕನ ಹತ್ಯೆಯಾಗಿತ್ತು. ಅಪ್ರಚೋದಿತ ಗುಂಡಿನ ದಾಳಿ ನಡಸಿ ಕದನ ವಿರಾಮ ಉಲ್ಲಂಘಿಸುವ ಪಾಕ್ ಸೇನೆ, ಭಾರತೀಯ ಸೇನೆಯ ಗಮನವನ್ನು ಬೇರೆಡೆಗೆ ಸೆಳೆದು ಗಡಿಯೊಳಗೆ ಉಗ್ರರನ್ನು ನುಗ್ಗಿಸುತ್ತಿದೆ. ತಂಗಧರ್ ವಲಯದಲ್ಲಿ ನಡೆಯುತ್ತಿದ್ದ ಪಾಕಿಸ್ತಾನದ ಈ ದುಸ್ಸಾಹಸಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ.

ದೊಡ್ಡ ಮಟ್ಟದ ಸಮರಾಭ್ಯಾಸಕ್ಕೆ ಸಜ್ಜಾಗಿದೆ ನೌಕಾಪಡೆ: ಅರಬ್ಬಿ ಸಮುದ್ರದಲ್ಲಿ ಯುದ್ಧ ನೌಕೆಗಳ ಆರ್ಭಟ

ಭಾರತೀಯ ಸೇನೆಯ ದೊಡ್ಡ ಮಟ್ಟದ ದಾಳಿ ವೇಳೆ ಉಗ್ರರ ಕ್ಯಾಂಪ್‌ಗಳನ್ನು ಧ್ವಂಸ ಮಾಡಲಾಗಿದೆ. ಉಗ್ರರನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಪಾಕ್‌ ಸೇನೆ ರೂಪಿಸಿದ್ದ ನೆಲೆಗಳೂ ಧ್ವಂಸವಾಗಿವೆ. ಗಡಿಯಾಚೆಗಿಂದ ಉಗ್ರರನ್ನು ಭಾರತದೊಳಗೆ ನುಗ್ಗಿಸುವ ಸಂದರ್ಭದಲ್ಲೇ ಈ ದಾಳಿ ನಡೆದಿದ್ದು, ಭಾರತಕ್ಕೆ ಮೇಲುಗೈ ಸಾಧಿಸುವಂತಾಗಿದೆ. ಇತ್ತ ಪಾಕಿಸ್ತಾನ ಸೇನೆ 9 ಭಾರತೀಯ ಯೋಧರನ್ನು ಹತ್ಯೆಗೈದಿರುವುದಾಗಿ ಬಡಾಯಿ ಕೊಚ್ಚಿಕೊಂಡಿದೆ. ಭಾರತೀಯ ಸೇನೆ ಪಾಕಿಸ್ತಾನದ ಈ ಪ್ರಕಟಣೆಯನ್ನು ತಳ್ಳಿಹಾಕಿದೆ. ಪಾಕಿಸ್ತಾನ ತನ್ನ ಓರ್ವ ಸೈನಿಕನನ್ನು ಮಾತ್ರ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದು, ಮೂವರು ಪಾಕ್ ನಾಗರಿಕರು ಹತ್ಯೆಗೀಡಾಗಿದ್ದಾರೆ ಎಂದು ಹೇಳಿದೆ.

‘ಧರ್ಮಾಂದರು ದ್ವೇಷದಿಂದ ಕುರುಡಾಗಿದ್ದಾರೆ': ಕೇಂದ್ರ ಸಚಿವ ಗೋಯಲ್‌ ವಿರುದ್ಧ ರಾಹುಲ್ ವಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ