ಆ್ಯಪ್ನಗರ

ಪಾಕ್‌ ಪತ್ರಕರ್ತರಿಗೆ ಹಸ್ತಲಾಘವ ನೀಡಿದ ಭಾರತದ ಪ್ರತಿನಿಧಿ

ಭದ್ರತಾ ಮಂಡಳಿಯ ಸಭೆ ಬಳಿಕ ಚೀನಾ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳು ಸುದ್ದಿಗಾರರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಭಾರತದ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ.

Vijaya Karnataka 17 Aug 2019, 9:20 pm
ವಿಶ್ವಸಂಸ್ಥೆ: ಭದ್ರತಾ ಮಂಡಳಿಯ ಸಭೆ ಬಳಿಕ ಚೀನಾ ಹಾಗೂ ಪಾಕಿಸ್ತಾನದ ಪ್ರತಿನಿಧಿಗಳು ಸುದ್ದಿಗಾರರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ, ಭಾರತದ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಪಾಕ್‌ ಪತ್ರಕರ್ತರೆಡೆಗೆ ಸ್ನೇಹದ ಹಸ್ತ ಚಾಚಿ ವಿಶೇಷತೆ ಮೆರೆದಿದ್ದಾರೆ.
Vijaya Karnataka Web ಸೈಯದ್‌ ಅಕ್ಬರುದ್ದೀನ್‌
ಸೈಯದ್‌ ಅಕ್ಬರುದ್ದೀನ್‌


''ನೀವು ಪಾಕ್‌ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಯಾವಾಗ ಆರಂಭಿಸುತ್ತೀರಿ,'' ಎಂದು ಸುದ್ದಿಗೋಷ್ಠಿ ವೇಳೆ ಪಾಕ್‌ನ ಹಿರಿಯ ಪತ್ರಕರ್ತರೊಬ್ಬರು ಅಕ್ಬರುದ್ದೀನ್‌ ಅವರನ್ನು ಕೆಣಕಿದರು. ಕೂಡಲೇ ಅಕ್ಬರುದ್ದೀನ್‌ ಅವರು ಪೋಡಿಯಂ ಬಿಟ್ಟು ಆ ಪತ್ರಕರ್ತರು ಇದ್ದಲ್ಲಿಗೆ ತೆರಳಿ ಹಸ್ತಲಾಘವ ನೀಡಿದರು. '' ಈಗಲೇ ನಿಮ್ಮ ಬಳಿಗೆ ಬಂದು ಹಸ್ತಲಾಘವ ನೀಡಿದ್ದೇನೆ. ನೀವಿಬ್ಬರು ಪಾಕ್‌ ಪತ್ರಕರ್ತರು, ನಾನೊಬ್ಬ ಭಾರತೀಯ ಪ್ರತಿನಿಧಿ ಒಟ್ಟಿನಲ್ಲಿ ಮೂವರು ಸ್ನೇಹಿತರಾಗೋಣ'', ಎಂದು ನುಡಿದರು. ಸುತ್ತಲಿದ್ದ ಮಾಧ್ಯಮ ಪ್ರತಿನಿಧಿಗಳು ಚಪ್ಪಾಳೆ ತಟ್ಟುವ ಮೂಲಕ ಅಕ್ಬರುದ್ದೀನ್‌ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗಾರರನ್ನು ಎದುರಿಸದೆ ಚೀನಾ ಹಾಗೂ ಪಾಕ್‌ ಪ್ರತಿನಿಧಿಗಳು ಕಾಲ್ಕಿತ್ತ ಕೂಡಲೇ ಸುದ್ದಿಗೋಷ್ಠಿ ವೇದಿಕೆ ಆಗಮಿಸಿದ ಸೈಯದ್‌ ಅಕ್ಬರುದ್ದೀನ್‌ ಅವರು, ''ನಾನು ಒಟ್ಟು ಐದು ಪ್ರಶ್ನೆಗಳನ್ನು ನಿಮ್ಮಿಂದ ಸ್ವೀಕರಿಸಲು ಸಿದ್ಧನಿದ್ದೇನೆ. ನನಗೂ ಮುನ್ನ ಈಗ ನಿಮ್ಮನ್ನು ಎದುರಿಸಿದ ಪ್ರತಿನಿಧಿಗಳಿಗಿಂತ ಇದು ಹೆಚ್ಚು ಅನಿಸುತ್ತದೆ ಅಲ್ಲವೇ'' ಎಂದು ಚೀನಾ-ಪಾಕ್‌ ಪ್ರತಿನಿಧಿಗಳಿಗೆ ಟಾಂಗ್‌ ಕೊಟ್ಟರು. ಐದರ ಪೈಕಿ ಮೂರು ಪ್ರಶ್ನೆಗಳನ್ನು ಪಾಕ್‌ ಪತ್ರಕರ್ತರಿಗೆ ಕೇಳಲು ಅವಕಾಶ ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ