ಆ್ಯಪ್ನಗರ

Australia Woman Murder: ನಾಯಿ ಬೊಗಳಿದ್ದಕ್ಕೆ ಆಸ್ಟ್ರೇಲಿಯಾ ಮಹಿಳೆಯನ್ನು ಕೊಂದ ಪಾತಕಿ ಭಾರತಕ್ಕೆ ಪರಾರಿ

Australian Woman Murder Case: ಆಸ್ಟ್ರೇಲಿಯಾದಲ್ಲಿ ಮಹಿಳೆಯನ್ನು ಕೊಂದು ಭಾರತಕ್ಕೆ ಪರಾರಿಯಾಗಿದ್ದ ರಾಜ್ವಿಂದರ್ ಸಿಂಗ್, ಆಕೆಯ ನಾಯಿ ತನ್ನತ್ತ ಬೊಗಳಿದ್ದರಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿದ್ದಾಗಿ ದಿಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.

Authored byಅಮಿತ್ ಎಂ.ಎಸ್ | Vijaya Karnataka Web 26 Nov 2022, 7:22 pm

ಹೈಲೈಟ್ಸ್‌:

  • ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಬೀಚ್‌ನಲ್ಲಿ ಮಹಿಳೆಯ ಹತ್ಯೆ ಪ್ರಕರಣ
  • ಮಹಿಳೆಯ ನಾಯಿ ತನ್ನತ್ತ ಬೊಗಳಿದ್ದಕ್ಕಾಗಿ ಕೊಂದಿದ್ದಾಗಿ ರಾಜ್ವಿಂದರ್ ಹೇಳಿಕೆ
  • ಹಣ್ಣು ಕತ್ತರಿಸುವ ಚಾಕುನಿಂದ ಕೊಂದು, ಬೀಚ್‌ನಲ್ಲಿ ಹೂತುಹಾಕಿದ್ದ ಪಾತಕಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Rajwinder singh
ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ 2018ರಲ್ಲಿ ಮಹಿಳೆಯನ್ನು ಕೊಂದು ಭಾರತಕ್ಕೆ ಪಲಾಯನ ಮಾಡಿದ್ದ ಪಂಜಾಬ್ ಮೂಲದ ವ್ಯಕ್ತಿ, ಆಕೆಯ ನಾಯಿ ತನ್ನನ್ನು ನೋಡಿ ಬೊಗಳಿದ್ದರಿಂದ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಕ್ವೀನ್ಸ್‌ಲ್ಯಾಂಡ್‌ನ ಬೀಚ್ ಒಂದರಲ್ಲಿ 2018ರ ಅಕ್ಟೋಬರ್‌ನಲ್ಲಿ 24 ವರ್ಷದ ಟೊಯಾಹ್ ಕಾರ್ಡಿಂಗ್ಲೆ ಎಂಬ ಮಹಿಳೆಯನ್ನು ಕೊಂದಿದ್ದ ರಾಜ್ವಿಂದರ್ ಸಿಂಗ್, ಎರಡು ದಿನಗಳ ಬಳಿಕ ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ. ಆತನ ಸುಳಿವು ನೀಡಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (5.31 ಕೋಟಿ ರೂ) ಬಹುಮಾನ ನೀಡುವುದಾಗಿ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಘೋಷಿಸಿದ್ದರು. ಸಿಂಗ್‌ನನ್ನು ಗಡಿಪಾರು ಮಾಡುವಂತೆ ಭಾರತಕ್ಕೆ ಮನವಿ ಮಾಡಿದ್ದರು.
Rajwinder Singh: ಆಸ್ಟ್ರೇಲಿಯಾದಲ್ಲಿ 4 ವರ್ಷದ ಹಿಂದೆ ಮಹಿಳೆ ಹತ್ಯೆ: ದಿಲ್ಲಿಯಲ್ಲಿ ಆರೋಪಿ ಬಂಧನ

ತನ್ನ ಮೂಲ ವಿಳಾಸದಲ್ಲಿ ಎಲ್ಲಿಯೂ ಸಿಗದ ರಾಜ್ವಿಂದರ್ ಸಿಂಗ್ ಪತ್ತೆಗಾಗಿ ದಿಲ್ಲಿ ಮತ್ತು ಪಂಜಾಬ್ ಪೊಲೀಸರು ಹಾಗೂ ಇತರೆ ತನಿಖಾ ಸಂಸ್ಥೆಗಳು ಸಾಕಷ್ಟು ಹುಡುಕಾಟ ನಡೆಸಿದ್ದವು. ಆತ ಕೊನೆಗೂ ಶುಕ್ರವಾರ ದಿಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಕಾರ್ಡಿಂಗ್ಲೆ ಅವರ ನಾಯಿ ತನ್ನತ್ತ ಬೊಗಳಿದ್ದರಿಂದ ಕೋಪಗೊಂಡು ಆಕೆಯನ್ನು ಸಿಂಗ್ ಕೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಂಡತಿ ಜತೆ ಜಗಳವಾದ ಬಳಿಕ ರಾಜ್ವಿಂದರ್ ಸಿಂಗ್ (38) ಕ್ವೀನ್ಸ್‌ಲ್ಯಾಂಡ್‌ನ ವಾಂಗೆಟ್ಟಿ ಬೀಚ್‌ಗೆ ತೆರಳಿದ್ದ. ಸ್ವಲ್ಪ ಹಣ್ಣು ಮತ್ತು ಅಡುಗೆಕೋಣೆ ಚಾಕು ತೆಗೆದುಕೊಂಡು ತೆರಳಿದ್ದಾಗಿ ಆತ ದಿಲ್ಲಿ ಪೊಲೀಸರಿಗೆ ಹೇಳಿದ್ದಾನೆ.
Shraddha Walker Murder: ಶ್ರದ್ಧಾಳನ್ನು ಕೊಂದ ಬಳಿಕ ಮನೋವೈದ್ಯೆ ಜತೆ ಹಂತಕ ಅಫ್ತಾಬ್ ಡೇಟಿಂಗ್

ಔಷಧ ಮಾರಾಟ ಕೆಲಸಗಾರ್ತಿಯಾಗಿದ್ದ ಕಾರ್ಡಿಂಗ್ಲೆ, ಬೀಚ್‌ನಲ್ಲಿ ತಮ್ಮ ನಾಯಿ ಜತೆ ನಡೆದುಕೊಂಡು ಹೋಗುತ್ತಿದ್ದರು. ರಾಜ್ವಿಂದರ್‌ನನ್ನು ಕಂಡ ಕಾರ್ಡಿಂಗ್ಲೆ ಅವರ ನಾಯಿ ಬೊಗಳತೊಡಗಿತು. ಈ ವಿಚಾರವಾಗಿ ರಾಜ್ವಿಂದರ್ ಮತ್ತು ಕಾರ್ಡಿಂಗ್ಲೆ ನಡುವೆ ವಾಗ್ವಾದ ನಡೆದಿತ್ತು. ಕೋಪಗೊಂಡ ರಾಜ್ವಿಂದರ್, ಆಕೆ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಮರಳಿನಲ್ಲಿ ಹೂತುಹಾಕಿ, ನಾಯಿಯನ್ನು ಮರವೊಂದಕ್ಕೆ ಕಟ್ಟಿಹಾಕಿದ್ದ.

ತನ್ನ ಕೆಲಸ, ಹೆಂಡತಿ ಮತ್ತು ಮೂವರು ಮಕ್ಕಳನ್ನು ಬಿಟ್ಟು ಎರಡು ದಿನಗಳ ಬಳಿಕ ಆಸ್ಟ್ರೇಲಿಯಾದಿಂದ ಪಲಾಯನ ಮಾಡಿದ್ದ. ರಾಜ್ವಿಂದರ್‌ನ ಫೋನ್ ಲೊಕೇಷನ್ ಈ ಸ್ಥಳದಲ್ಲಿ ಪತ್ತೆಯಾಗಿದ್ದರಿಂದ ಆತನೇ ಪ್ರಾಥಮಿಕ ಶಂಕಿತನಾಗಿದ್ದ. ಆದರೆ ಅಷ್ಟರಲ್ಲಾಗಲೇ ಭಾರತಕ್ಕೆ ಬಂದಿಳಿದಿದ್ದ ಆತ, ಪೊಲೀಸರ ಕೈಗೆ ಕೂಡ ಸಿಗದೆ ತಲೆಮರೆಸಿಕೊಂಡಿದ್ದ. ನ. 21ರಂದು ಪಟಿಯಾಲ ಹೌಸ್ ಕೋರ್ಟ್‌ನಿಂದ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದ ನಂತರ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಸಿಬಿಐ ಹಂಚಿಕೊಂಡ ಮಾಹಿತಿ ಆಧಾರದಲ್ಲಿ ಆತನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕವು ಕೆಟಿ ಕರ್ನಲ್ ರಸ್ತೆ ಸಮೀಪ ಬಂಧಿಸಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ