ಆ್ಯಪ್ನಗರ

ಭಾರತೀಯ ಮೂಲದ ದಾದಿಗೆ ಪ್ರತಿಷ್ಠಿತ 'ಪ್ರೆಸಿಡೆಂಟ್ಸ್‌ ಅವಾರ್ಡ್‌' ನೀಡಿ ಗೌರವಿಸಿದ ಸಿಂಗಾಪುರ

​​ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತೀಯ ಮೂಲದ ಕಲಾ ನಾರಾಯಣಸ್ವಾಮಿ ಸೇರಿ ಐವರು ನರ್ಸ್‌ಗಳಿಗೆ ಅಧ್ಯಕ್ಷರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಹೇಳಿದೆ.

Agencies 22 Jul 2020, 9:06 pm
ಸಿಂಗಾಪುರ: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮೂಲದ ದಾದಿಯೊಬ್ಬರಿಗೆ ಸಿಂಗಾಪುರ ಸರಕಾರ ಪ್ರತಿಷ್ಠಿತ 'ಪ್ರೆಸಿಡೆಂಟ್ಸ್‌ ಅವಾರ್ಡ್‌' ನೀಡಿ ಗೌರವಿಸಿದೆ.
Vijaya Karnataka Web Kala Narayanaswamy


ಸಿಂಗಾಪುರ ಕೊರೊನಾ ವಿರುದ್ಧ ದೊಡ್ಡ ಸಮರವನ್ನೇ ಸಾರಿದೆ. ಇಂತಹ ಹೊತ್ತಲ್ಲಿ ಕೌಟುಂಬಿಕ ಕಷ್ಟ-ಸುಖಗಳನ್ನು ಬದಿಗೊತ್ತಿ ಸೋಂಕಿತರ ಆರೈಕೆಗೆ ಹಗಲಿರುಳು ಶ್ರಮಿಸುವ ನರ್ಸ್‌ಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಸೇವಾ ಸ್ಫೂರ್ತಿಯನ್ನು ಇನ್ನಷ್ಟು ಹೆಚ್ಚಿಸಲು ಸಿಂಗಾಪುರ ಸರಕಾರ ಕ್ರಮ ಕೈಗೊಂಡಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಭಾರತೀಯ ಮೂಲದ ಕಲಾ ನಾರಾಯಣಸ್ವಾಮಿ ಸೇರಿ ಐವರು ನರ್ಸ್‌ಗಳಿಗೆ ಅಧ್ಯಕ್ಷರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಹೇಳಿದೆ.

ಯಿಶುನ್‌ ಕಮ್ಯೂನಿಟಿ ಆಸ್ಪತ್ರೆಯ ವುಡ್‌ಲ್ಯಾಂಡ್ಸ್‌ ಹೆಲ್ತ್‌ ಸೆಂಟರ್‌ನಲ್ಲಿ ನರ್ಸಿಂಗ್‌ ವಿಭಾಗದ ಉಪ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಲಾ ಅವರು 2003ರಿಂದಲೂ ಸಾಂಕ್ರಾಮಿಕ ರೋಗಗಳ ನಿರ್ವಹಣೆಯಲ್ಲಿ ವಿಶೇಷ ಪರಿಣತಿ ಪಡೆದವರಾಗಿದ್ದು, ಕೋವಿಡ್‌ ಸೋಂಕಿತರ ಆರೈಕೆ ಹಾಗೂ ಅವರಿಗೆ ಕಾಳಜಿ ತೋರುತ್ತಿರುವ ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಸಚಿವಾಲಯ ಶ್ಲಾಘಿಸಿದೆ. ಪ್ರಶಸ್ತಿಯು ಟ್ರೋಫಿ ಹಾಗೂ 5.40 ಲಕ್ಷ ರೂ. ನಗದನ್ನು ಒಳಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ