ಆ್ಯಪ್ನಗರ

2030ರೊಳಗೆ ಶೇ.100 ಪರಿಸರ ಸ್ನೇಹಿಯಾಗಲಿದೆ ಭಾರತೀಯ ರೈಲ್ವೆ!

ಭಾರತೀಯ ರೈಲ್ವೆಯು ಮುಂದಿನ 10 ವರ್ಷದೊಳಗೆ ಸಂಪೂರ್ಣವಾಗಿ ಗ್ರೀನ್‌ ಸಾರಿಗೆಯಾಗಿ ಪರಿವರ್ತನೆಯಾಗುವ ಗುರಿ ಹೊಂದಿದೆ. ರೈಲ್ವೆ ಇಲಾಖೆಯು 2030ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ 'ಪರಿಸರ ಸ್ನೇಹಿ' ಆಗುವತ್ತ ಹೆಜ್ಜೆ ಇಟ್ಟಿದೆ.

Vijaya Karnataka Web 14 Jul 2020, 5:43 pm
ಹೊಸದಿಲ್ಲಿ: ಭಾರತೀಯ ರೈಲ್ವೆಯು ಮುಂದಿನ 10 ವರ್ಷದೊಳಗೆ ಸಂಪೂರ್ಣವಾಗಿ ಗ್ರೀನ್‌ ಸಾರಿಗೆಯಾಗಿ ಪರಿವರ್ತನೆಯಾಗುವ ಗುರಿ ಹೊಂದಿದೆ. ರೈಲ್ವೆ ಇಲಾಖೆಯು 2030ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ 'ಪರಿಸರ ಸ್ನೇಹಿ' ಆಗಿ ಪರಿವರ್ತನೆಯಾಗುವ ನೂತನ ಗುರಿ ಹೊಂದಿದೆ. ಇದಕ್ಕಾಗಿ ಬ್ರಾಡ್‍ಗೇಜ್‍ಗಳ ವಿದ್ಯುದ್ದೀಕರಣ ಯೋಜನೆ, ಇಂಗಾಲದ ಹೊರಸೂಸುವಿಕೆ ಪ್ರಮಾಣ ಕುಗ್ಗಿಸುವ ಕ್ರಮಗಳಿಗೆ ಆದ್ಯತೆ ನೀಡಲಿದೆ.
Vijaya Karnataka Web indian railway


ಈ ಕುರಿತಂತೆ ರೈಲ್ವೆ ಇಲಾಖೆ ಸೋಮವಾರ ಪ್ರಕಟಣೆ ಹೊರಡಿಸಿದ್ದು, ರೈಲ್ವೆ ಇಲಾಖೆ, '2023ರ ಅಂತ್ಯದ ವೇಳೆಗೆ ದೇಶದಾದ್ಯಂತ ಎಲ್ಲ ಬ್ರಾಡ್‍ಗೇಜ್‍ಗಳ ವಿದ್ಯುದ್ದೀಕರಣ ಕಾರ್ಯವನ್ನು ಅಂತಿಮಗೊಳಿಸುವ ಗುರಿ ಹೊಂದಲಾಗಿದೆ' ಎಂದು ತಿಳಿಸಿದೆ.

ರೈಲ್ವೆ ಸೌರವಿದ್ಯುತ್‌ ಯೋಜನೆಗಳಿಗೂ ಆದ್ಯತೆ ನೀಡುತ್ತಿದೆ. ಇದಕ್ಕಾಗಿ 500 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಯೋಜನೆಗೆ ಚಾಲನೆ ನೀಡಿದೆ. ಇದುವರೆಗೆ 100ಮೆಗಾವಾಟ್‌ ಸಾಮರ್ಥ್ಯದಷ್ಟು ರೂಫ್‌ ಟಾಪ್‌ ಸೋಲಾರ್‌ ಪ್ಯಾನಲ್‌ಗಳನ್ನು (ಮನೆಯ ಛಾವಣೆ ಮೇಲೆ ಸ್ಥಾಪಿಸಬಹುದಾದ ಸೌರ ವಿದ್ಯುತ್‌ ಘಟಕ) ವಿವಿಧ ಕಟ್ಟಡಗಳು ಹಾಗೂ ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಿದೆ.

ಕಂಪನಿಯಲ್ಲಿ ಉದ್ಯೋಗಿ, ಗದ್ದೆಯಲ್ಲಿ ಕೃಷಿಕ! ಯುವಜನತೆಗೆ ಮಾದರಿಯಾದ ಮಂಗಳೂರಿನ ಯುವಕ!

ಇಂಧನ ದಕ್ಷತೆ ಹಾಗೂ ಮಿತವ್ಯಯ ಕ್ರಮಗಳು, ಎಲ್ಲ ನಿಲ್ದಾಣಗಳಿಗೆ ಹಸಿರು ಪ್ರಮಾಣೀಕರಣ ಪಡೆಯುವುದು, ಎಲ್ಲ ಪ್ರಯಾಣಿಕ ರೈಲು ಬೋಗಿಗಳಲ್ಲಿ ಬಯೋ ಶೌಚಾಲಯಗಳ ಅಳವಡಿಕೆ, ಮರುಬಳಕೆ ಮಾಡಬಹುದಾದ ಇಂಧನ ಮೂಲಗಳ ಬಳಕೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ದೇಶದ ರೈಲ್ವೆ ಜಾಲದ 40,000ಕ್ಕೂ ಅಧಿಕ ಕಿ.ಮೀ ಮಾರ್ಗಗಳಲ್ಲಿ ವಿದ್ಯುದ್ದೀಕರಣ ಯೋಜನೆ ಜಾರಿಯಾಗಿದೆ. ಇದು, ಒಟ್ಟು ಬ್ರಾಡ್‍ಗೇಜ್‍ ಮಾರ್ಗದ ಶೇ 63ರಷ್ಟಿದೆ. 2014-20ರ ಅವಧಿಯಲ್ಲಿ ಒಟ್ಟು 18,605 ಕಿ.ಮೀ ಮಾರ್ಗ ವಿದ್ಯುದ್ದೀಕರಣವಾಗಿದೆ. 2009-14ರ ಅವಧಿಯಲ್ಲಿ 3,835 ಕಿ.ಮೀ ವಿದ್ಯುದ್ದೀಕರಣ ಆಗಿತ್ತು.

ವಿಶ್ವದ ಟಾಪ್‌ 10 ಶ್ರೀಮಂತರ ಪಟ್ಟಿಯಲ್ಲಿ ಬಡ್ತಿ ಪಡೆಯುತ್ತಲೇ ಇದ್ದಾರೆ ಮುಕೇಶ್‌ ಅಂಬಾನಿ

ಕೊರೊನಾ ವೈರಸ್‌ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಒಟ್ಟು 365 ಪ್ರಮುಖ ಸಂಪರ್ಕ ಮಾರ್ಗಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸೌರವಿದ್ಯುತ್‍ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಚಾವಣಿಯಲ್ಲಿ ಅಳವಡಿಸುವ ಸೋಲಾರ್ ಪ್ಯಾನೆಲ್‍ಗಳ (ಡೆವಲಪರ್ ಮಾದರಿ) ಮೂಲಕ 500 ಮೆಗಾವಾಟ್‍ ವಿದ್ಯುತ್‍ ಉತ್ಪಾದನೆಗೆ ಅವಕಾಶವಿದ್ದು, ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ