ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಪ್ರಯಾಣಿಕ ರೈಲು ಸಂಚಾರ ಸದ್ಯಕ್ಕಿಲ್ಲ ಎಂದ ಇಲಾಖೆ!

ಪ್ರಯಾಣಿಕ ರೈಲು ಸೇವೆಯನ್ನು ಸದ್ಯಕ್ಕೆ ಪುನರಾರಂಭಿಸದಿರಲು ಸರಕಾರ ನಿರ್ಧರಿಸಿದೆ. ''ದೇಶದಲ್ಲಿ ಎಲ್ಲಾ ಪ್ರಯಾಣಿಕ ಮತ್ತು ಉಪ ನಗರ ರೈಲುಗಳ ಸೇವೆಯನ್ನುಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗುವುದು,'' ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ.

Vijaya Karnataka Web 12 Aug 2020, 6:58 am
ಹೊಸದಿಲ್ಲಿ: ಕೋವಿಡ್‌ ಕಾರಣ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲು ಸೇವೆಯನ್ನು ಸದ್ಯಕ್ಕೆ ಪುನರಾರಂಭಿಸದಿರಲು ಸರಕಾರ ನಿರ್ಧರಿಸಿದೆ. ''ದೇಶದಲ್ಲಿ ಎಲ್ಲಾ ಪ್ರಯಾಣಿಕ ಮತ್ತು ಉಪ ನಗರ ರೈಲುಗಳ ಸೇವೆಯನ್ನುಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗುವುದು,'' ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ.
Vijaya Karnataka Web download (15)


ಹಿಂದಿನ ಆದೇಶದ ಪ್ರಕಾರ ಆಗಸ್ಟ್‌ 12ರವರೆಗೆ ರೈಲು ಸೇವೆಗೆ ತಡೆ ನೀಡಲಾಗಿತ್ತು. ''ಸದ್ಯ 230 ವಿಶೇಷ ರೈಲುಗಳು ಸಂಚರಿಸುತ್ತಿದ್ದು, ಅವುಗಳ ಸೇವೆ ಯಥಾ ಪ್ರಕಾರ ಮುಂದುವರಿಯಲಿದೆ. ರೈಲು ಸೇವೆ ಸ್ಥಗಿತಗೊಂಡಿರುವುದರಿಂದ ಈ ವರ್ಷ 40,000 ಕೋಟಿ ರೂ. ನಷ್ಟ ಉಂಟಾಗಿದೆ,'' ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಆರಂಭದ ಹಿನ್ನೆಲೆ ದೇಶದಾದ್ಯಂತ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ರೈಲಿನಲ್ಲಿ ಭಾರೀ ಸಂಖ್ಯೆಯ ಜನರು ಸಂಚರಿಸುವುದರಿಂದ ಸುಲಭವಾಗಿ ಕೊರೊನಾ ಹರಡುವ ಆತಂಕ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು. ಆದರೆ ನಂತರ ವಲಸೆ ಕಾರ್ಮಿಕರು ಹಾಗೂ ತುರ್ತು ಸೇವೆ ಹಿನ್ನೆಲೆ ಮತ್ತೆ ಕೆಲವು ರೈಲು ಸೇವೆಗಳನ್ನ ರೈಲ್ವೆ ಇಲಾಖೆ ಆರಂಭಿಸಿತು. ದೇಶದ ಪ್ರಮುಖ ರಾಜ್ಯಗಳಲ್ಲಿ ರೈಲನ್ನೇ ಜನರು ನೆಚ್ಚಿಕೊಂಡಿದ್ದು ಉತ್ತಮ ಲಾಭಗಳಿಸುವ ಸಂಸ್ಥೆಯಾಗಿತ್ತು.

ಬಂಡಾಯ ಶಮನವಾದರೂ ಮುಗಿಯದ ಮುನಿಸು..! ರಾಜಸ್ಥಾನದಲ್ಲಿ ಪೈಲಟ್‌ ಮುಂದೆ ಗೆಹ್ಲೋಟ್‌ 'ಕೈ' ಮೇಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ