ಆ್ಯಪ್ನಗರ

ಇಥಿಯೋಪಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಶಿಖಾ ಗರ್ಗ್‌ ಮನೆಯವರ ಸಂಪರ್ಕಿಸಲು ನೆರವಾಗಿ: ಸುಷ್ಮಾ ಸ್ವರಾಜ್

ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮೃತಪಟ್ಟ ಶಿಖಾ ಗರ್ಗ್ ಅವರ ಪತಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದೆ. ಅವರ ಕುಟುಂಬವನ್ನು ಸಂಪರ್ಕಿಸಲು ಯಾರಾದರೂ ದಯವಿಟ್ಟು ನೆರವಾಗಿ' ಎಂದು ಸುಷ್ಮಾ ಸ್ವರಾಜ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

Vijaya Karnataka Web 11 Mar 2019, 5:18 pm
ಹೊಸದಿಲ್ಲಿ: ಇಥಿಯೋಪಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 157 ಪ್ರಯಾಣಿಕರ ಪೈಕಿ ನಾಲ್ವರು ಭಾರತೀಯರೂ ಸೇರಿದ್ದು, ಅವರಲ್ಲಿ ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕುರಿತ ಸಚಿವಾಲಯದ ವಿಶ್ವಸಂಸ್ಥೆ ಸಲಹೆಗಾರ್ತಿ ಶಿಖಾ ಗರ್ಗ್‌ ಕೂಡ ಸೇರಿದ್ದಾರೆ.
Vijaya Karnataka Web Shikha-Garg


ಆದರೆ ಅವರ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈ ನಿಟ್ಟಿನಲ್ಲಿ ಯಾರಾದರೂ ನೆರವಾಗಿ ಎಂದು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

ವಿಶ್ವಸಂಸ್ಥೆ ಸಲಹೆಗಾರರ ನಿವಾಸದಲ್ಲಿ ಅವರ ಕುಟುಂಬವನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.

ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮೃತಪಟ್ಟ ಶಿಖಾ ಗರ್ಗ್ ಅವರ ಪತಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದೆ. ಅವರ ಕುಟುಂಬವನ್ನು ಸಂಪರ್ಕಿಸಲು ಯಾರಾದರೂ ದಯವಿಟ್ಟು ನೆರವಾಗಿ' ಎಂದು ಸುಷ್ಮಾ ಸ್ವರಾಜ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಸಲಹೆಗಾರರಾಗಿರುವ ಶಿಖಾ ಗರ್ಗ್, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಸಭೆಯಲ್ಲಿ ಪಾಲ್ಗೊಳ್ಳಲು ನೈರೋಬಿಗೆ ತೆರಳುತ್ತಿದ್ದರು.

ದುರಂತದಲ್ಲಿ ಮೃತಪಟ್ಟ ಇತರ ಮೂವರು ಭಾರತೀಯರನ್ನು ವೈದ್ಯ ಪನ್ನಗೇಶ್ ಭಾಸ್ಕರ್, ವೈದ್ಯ ಹನ್ಸಿನ್ ಅನ್ನಗೇಶ್ ಮತ್ತು ನುಕವರಪು ಮನೀಶಾ ಎಂದು ಗುರುತಿಸಲಾಗಿದೆ.

ಭಾನುವಾರ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ಇಟಿ 302 ವಿಮಾನ ಅಡಿಸ್ ಅಬಾಬಾದಿಂದ ಟೇಕ್‌ ಆಫ್ ಆದ 6 ನಿಮಿಷಗಳಲ್ಲಿ ಸಂಪರ್ಕ ಕಡಿದು ಹೋಗಿ ದುರಂತಕ್ಕೀಡಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ