ಆ್ಯಪ್ನಗರ

ಆ.15ರೊಳಗೆ ಭಾರತದ ಮೊದಲ ಕೊರೊನಾ ಲಸಿಕೆ ಮಾರುಕಟ್ಟೆಗೆ? ಐಸಿಎಂಆರ್‌ ಪತ್ರ ಬಯಲು!

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ತಯಾರಿಸಿರುವ ಕೊರೊನಾ ನಿಯಂತ್ರಣದ ದೇಸಿ ಲಸಿಕೆ ಆಗಸ್ಟ್‌ 15ರ ಒಳಗೆ ಲಭ್ಯವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಔಷಧ ತಯಾರಿಕೆ ಸಂಸ್ಥೆಗೆ ಬರೆದಿರುವ ಪತ್ರದಿಂದ ಈ ವಿಚಾರ ಬಯಲಾಗಿದೆ.

Vijaya Karnataka Web 4 Jul 2020, 8:05 am
ಹೊಸದಿಲ್ಲಿ: ಕೊರೊನಾ ನಿಯಂತ್ರಣಕ್ಕೆ ದೇಸೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆ ಆಗಸ್ಟ್‌ 15ರ ಒಳಗೆ ಲಭ್ಯವಾಗಲಿದೆ ಎಂಬ ವಿಶ್ವಾಸವು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಔಷಧ ತಯಾರಿಕೆ ಸಂಸ್ಥೆಯೊಂದಕ್ಕೆ ಬರೆದಿರುವ ಪತ್ರದಿಂದ ವ್ಯಕ್ತವಾಗಿದೆ. ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿ. (ಬಿಬಿಐಎಲ್‌)ಗೆ ಐಸಿಎಂಆರ್‌ ಬರೆದಿರುವ ಪತ್ರವು ಬಹಿರಂಗಗೊಂಡಿದೆ.
Vijaya Karnataka Web pic (1)


ಕ್ಲಿನಿಕಲ್‌ ಟ್ರಯಲ್ಸ್‌ ಪೂರ್ಣಗೊಳಿಸಿ ಆಗಸ್ಟ್‌ 15ರೊಳಗೆ ಲಸಿಕೆ ಸಿದ್ಧಪಡಿಸಲು ಪ್ರಯತ್ನಿಸುವಂತೆ ಪತ್ರದಲ್ಲಿಸೂಚಿಸಲಾಗಿದೆ. ಇದು ಆಂತರಿಕ ವಿಚಾರ ವಿನಿಮಯಕ್ಕಾಗಿ ಐಸಿಎಂಆರ್‌ ಮುಖ್ಯಸ್ಥ ಬಲರಾಮ್‌ ಭಾರ್ಗವ ಅವರು ಬರೆದ ಪತ್ರವಾಗಿದ್ದು, ಲಸಿಕೆ ಅಭಿವೃದ್ಧಿ ವಿಚಾರಕ್ಕೆ ಮೊದಲ ಆದ್ಯತೆ ನೀಡುವಂತೆಯೂ ಕಂಪನಿಗೆ ಸೂಚಿಸಿದ್ದಾರೆ. ಆದರೆ, ಲಸಿಕೆ ಕಂಡುಹಿಡಿಯುವಲ್ಲಿಅತುರ ತೋರಿಸುವುದು ಬೇಡ ಎಂದು ತಜ್ಞರು ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ಸದ್ಯ ವಿಶ್ವದಾದ್ಯಂತ ಕೊರೊನಾ ಲಸಿಕೆ ಕಂಡು ಹಿಡಿಯಲು ಪೈಪೋಟಿ ನಡೆಸುತ್ತಿದೆ. ಅಮೆರಿಕ ಸೇರಿ ಎಲ್ಲಾ ಪ್ರಬಲ ದೇಶಗಳು ಮದ್ದು ಕಂಡು ಹುಡುಕುವ ಜಿದ್ದಿಗೆ ಬಿದ್ದು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಯಾರು ಕೂಡ ಈ ಬಗ್ಗೆ ಯಶಸ್ವಿಯಾಗಿಲ್ಲ. ಭಾರತದ ಹೈದ್ರಾಬಾದ್‌ ಮೂಲದ ಬಯೋಟೆಕ್‌ ಇಂಟರ್‌ನ್ಯಾಷಲ್‌ ಎಂಬ ಹೆಸರಿನ ಸಂಸ್ಥೆ ಈಗಾಗಲೇ ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಎಲ್ಲದರೂ ಇದು ಮಾನವನ ಮೇಲಿನ ಪ್ರಯೋಗದಲ್ಲಿ ಕೊವ್ಯಾಕ್ಸಿನ್‌ ಯಶಸ್ವಿಯಾದರೆ ಭಾರತವೇ ಕೊರೊನಾಗೆ ಮದ್ದು ಕಂಡು ಹುಡುಕಿದ ಮೊದಲ ದೇಶವಾಗಲಿದೆ. ಎಲ್ಲಾದರೂ ಅಂದುಕೊಂಡಂತೆ ಆದರೆ ಕೊವ್ಯಾಕ್ಸಿನ್‌ ಆಗಸ್ಟ್‌ 15ಕ್ಕೆ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ