ಆ್ಯಪ್ನಗರ

ಟ್ರೈನ್ 18 ಇನ್ನು 'ವಂದೇ ಭಾರತ್‌ ಎಕ್ಸ್‌ಪ್ರೆಸ್‌': ಪೀಯೂಷ್ ಗೋಯಲ್

16 ಕೋಚ್‌ಗಳ ಈ ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 18 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ. ಒಟ್ಟು 97 ಕೋಟಿ ರೂ ವೆಚ್ಚ ತಗುಲಿದೆ. 30 ವರ್ಷಗಳಷ್ಟು ಹಳೆಯದಾದ ಶತಾಬ್ದಿ ಎಕ್ಸ್‌ಪ್ರೆಸ್‌ಗಳಿಗೆ ಬದಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ (ಟ್ರೈನ್ 18) ಓಡಾಟ ನಡೆಸಲಿದೆ. ದೇಶದ ಪ್ರಥಮ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಇದರದ್ದಾಗಿದೆ.

Vijaya Karnataka Web 27 Jan 2019, 8:21 pm

ಹೈಲೈಟ್ಸ್‌:

  • ನೂತನ ರೈಲು ದಿಲ್ಲಿ-ವಾರಾಣಸಿ ಮಾರ್ಗದಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದೆ.
  • ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಶೀಘ್ರವೇ ಹಸಿರು ನಿಶಾನೆ ತೋರಲಿದ್ದಾರೆ.
  • ರೈಲಿಗೆ ಮರುನಾಮಕರಣ ಮಾಡಿರುವುದನ್ನು ಪ್ರಕಟಿಸಿದ ರೈಲ್ವೇ ಸಚಿವ ಪೀಯೂಷ್ ಗೋಯಲ್‌, ವಿಶ್ವದರ್ಜೆಯ ರೈಲನ್ನು ಮೇಕ್‌ ಇನ್ ಇಂಡಿಯಾ ಅಡಿ ನಿರ್ಮಿಸಲಾಗಿದೆ ಎಂದರು.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಹೊಸದಿಲ್ಲಿ: ಸಂಪೂರ್ಣ ಸ್ವದೇಶೀ ನಿರ್ಮಿತ ಹೈಸ್ಪೀಡ್ ರೈಲು ಟ್ರೈನ್ 18ಗೆ 'ವಂದೇ ಭಾರತ್ ಎಕ್ಸ್‌ಪ್ರೆಸ್‌' ಎಂದು ನಾಮಕರಣ ಮಾಡಲಾಗಿದೆ ಎಂದು ರೈಲ್ವೇ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಈ ರೈಲು ದಿಲ್ಲಿ ಮತ್ತು ವಾರಾಣಸಿ ನಡುವೆ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಹಸಿರು ನಿಶಾನೆ ತೋರಲಿದ್ದಾರೆ.

16 ಕೋಚ್‌ಗಳ ಈ ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 18 ತಿಂಗಳುಗಳಲ್ಲಿ ನಿರ್ಮಿಸಲಾಗಿದೆ. ಒಟ್ಟು 97 ಕೋಟಿ ರೂ ವೆಚ್ಚ ತಗುಲಿದೆ. 30 ವರ್ಷಗಳಷ್ಟು ಹಳೆಯದಾದ ಶತಾಬ್ದಿ ಎಕ್ಸ್‌ಪ್ರೆಸ್‌ಗಳಿಗೆ ಬದಲಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ (ಟ್ರೈನ್ 18) ಓಡಾಟ ನಡೆಸಲಿದೆ. ದೇಶದ ಪ್ರಥಮ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಇದರದ್ದಾಗಿದೆ.

ಟ್ರೈನ್ 18ಗೆ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್‌ ಎಂದು ಮರು ನಾಮಕರಣ ಮಾಡಲಾಗಿದೆ. ಸಂಪೂರ್ಣವಾಗಿ ಭಾರತೀಯ ಎಂಜಿನಿಯರ್‌ಗಳೇ 18 ತಿಂಗಳ ಅವಧಿಯಲ್ಲಿ ಈ ರೈಲನ್ನು ನಿರ್ಮಿಸಿದ್ದಾರೆ. ಇದು ದಿಲ್ಲಿ- ವಾರಾಣಸಿ ನಡುವೆ ಓಡಾಡಲಿದೆ. ವಿಶ್ವದರ್ಜೆಯ ರೈಲುಗಳನ್ನು ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಭಾರತದಲ್ಲೇ ನಿರ್ಮಿಸಬಹುದು ಎಂಬುದಕ್ಕೆ ಇದು ನಿದರ್ಶನ' ಎಂದು ಗೋಯಲ್ ಹೇಳಿದರು.

ಇದು ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು, ಕಾನ್ಪುರ ಮತ್ತು ಅಲಹಾಬಾದ್‌ಗಳಲ್ಲಿ ನಿಲುಗಡೆ ಹೊಂದಲಿದೆ. ಅಲ್ಲದೆ ಎರಡು ಎಕ್ಸಿಕ್ಯೂಟಿವ್ ಚೇರ್‌ ಕಾರ್‌ಗಳನ್ನು (ಐಷಾರಾಮಿ) ಹೊಂದಿರುತ್ತದೆ.

'ಇದು ಸಂಪೂರ್ಣ ಸ್ವದೇಶೀ ರೈಲಾಗಿದ್ದು ಸಾರ್ವಜನಿಕರು ನಾನಾ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಆದರೆ ಅಂತಿಮವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಎಂಬ ಹೆಸರಿಡಲು ನಾವು ನಿರ್ಧರಿಸಿದೆವು. ಈ ರೈಲಿಗೆ ಶೀಘ್ರ ಹಸಿರು ನಿಶಾನೆ ತೋರಲು ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ' ಎಂದು ಗೋಯಲ್ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ