ಆ್ಯಪ್ನಗರ

ಪಾರ್ಕಿಂಗ್ ಲಾಟ್‌ ಆದ ದೇಶದ ಏಕೈಕ 14 ಲೇನ್‌ ಎಕ್ಸ್‌ಪ್ರೆಸ್‌ವೇ

ದೇಶದ ಏಕೈಕ 14 ಲೇನ್ ಎಕ್ಸ್‌ಪ್ರೆಸ್‌ವೇ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ಎಕ್ಸ್‌ಪ್ರೆಸ್‌ವೇಗೆ ಬರುವ ವಾಹನಗಳ ಸಂಚಾರ ವಿಳಂಬವಾಗುತ್ತಿದೆ.

TIMESOFINDIA.COM 7 Jun 2019, 9:56 am
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಮೀರತ್ ನಡುವಣ 14 ಲೇನ್ ಎಕ್ಸ್‌ಪ್ರೆಸ್‌ವೇ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿತ್ತು. ಇದಕ್ಕೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಹ ಅನುಮೋದನೆ ನೀಡಿದೆ. ಆದರೆ, ಈ ನೂತನ 14 ಲೇನ್ ಎಕ್ಸ್‌ಪ್ರೆಸ್‌ವೇ ಪಾರ್ಕಿಂಗ್‌ ಲಾಟ್‌ ಆಗಿದೆ ಎಂಬ ಟೀಕೆ ಕೇಳಿಬರುತ್ತಿದೆ.
Vijaya Karnataka Web 14 lane expressway


ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಪ್ರಯಾಣಿಕರಿಗಾಗಿ ಹೆದ್ದಾರಿ ನೆಸ್ಟ್‌ ಯೋಜನೆಯಡಿ ನಾಲ್ಕು ಶಿಕಾಂಜಿ ( ಭಾರತದ ಲೆಮೋನೇಡ್‌) ಔಟ್‌ಲೆಟ್‌ಗಳಿಗೆ ಅನುಮೋದನೆ ನೀಡಿದೆ. ಅಲ್ಲದೆ, ಪ್ರಯಾಣಿಕರು ತಮ್ಮನ್ನು ತಾವು ರಿಫ್ರೆಶ್‌ ಆಗಲು ಪಿಟ್‌ ಸ್ಟಾಪ್‌ಗಳನ್ನು ತಯಾರಿಸುವ ಉದ್ದೇಶ ಹೊಂದಿತ್ತು. ಆದರೆ, ಅವರು ಆಯ್ಕೆ ಮಾಡಿರುವ ಜಾಗಗಳು ನಿಜಾಮುದ್ದೀನ್ ಸೇತುವೆಯ ರಿಂಗ್‌ರೋಡ್‌ನಿಂದ ಎಕ್ಸ್‌ಪ್ರೆಸ್‌ ವೇಗೆ ಸಂಚಾರ ಪ್ರವೇಶಿಸುವ ಜಾಗ ಪ್ರಮುಖ ಸ್ಪೀಡ್‌ ಬ್ರೇಕರ್ ಆಗಿ ಮಾರ್ಪಟ್ಟಿದೆ.

ನಿಲುಗಡೆಯ ಸ್ಥಳ ಮಾಡುವ ಉದ್ದೇಶವನ್ನು ಎನ್‌ಎಚ್‌ಎಐ ಹೊಂದಿತ್ತು. ಆದರೆ, ಅದು ಸಂಪೂರ್ಣ ಅಸಮರ್ಪಕವಾಗಿದ್ದು ಕಾರುಗಳು ಪಾರ್ಕಿಂಗ್ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಇದಿಂದ ಪ್ರಯಾಣಿಕರಿಗೆ ಹೆಚ್ಚು ತೊಂದರೆಯಾಗಿದ್ದು, ಹಲವು ಪ್ರಯಾಣಿಕರು ಹಾಗೂ ಅಟೆಂಡೆಂಟ್‌ಗಳು ಪ್ರಮುಖ ಉಪದ್ರವಿಗಳಾಗಿದ್ದಾರೆ.

ಎಕ್ಸ್‌ಪ್ರೆಸ್‌ ವೇಯಲ್ಲಿ ಪಾರ್ಕಿಂಗ್


ಇದರಿಂದ ಎಕ್ಸ್‌ಪ್ರೆಸ್‌ವೇಗೆ ಬರುವ ವಾಹನಗಳ ಸಂಚಾರ ವಿಳಂಬವಾಗುತ್ತಿದ್ದು, ಹಲವು ವಾಹನ ಸವಾರರಿಗೆ ಗಾಬರಿ ಹುಟ್ಟಿಸುತ್ತಿದೆ ಎಂದು ತಿಳಿದುಬಂದಿದೆ. ನಗರದ ಜನದಟ್ಟಣೆಯ ಸಂಚಾರಿ ಪ್ರದೇಶವಾಗಿರುವ ಈ ಜಾಗದಲ್ಲಿ ಪಿಟ್‌ಸ್ಟಾಪ್‌ ಮಾಡಿರುವುದಕ್ಕೆ ಸಾಕಷ್ಟು ಟೀಕೆ ಕೇಳಿಬರುತ್ತಿದೆ. ಇದಕ್ಕೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉತ್ತರ ಕೊಡಬೇಕಿದ್ದು, ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ