ಆ್ಯಪ್ನಗರ

1962ರ ಕಾಲದ ಭಾರತ ಈಗಿಲ್ಲ, ಚೀನಾಗೆ ಜೇಟ್ಲಿ ತಿರುಗೇಟು

ಇತಿಹಾಸ ನೆನಪಿಸಿಕೊಂಡು ಮುಂದಡಿ ಇಡಿ ಎಂದು ಗುರುವಾರ ಚೀನಾ ಕೊಟ್ಟಿರುವ ಹೇಳಿಕೆಗೆ ಕೇಂದ್ರ ರಕ್ಷಣಾ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ. ಇತಿಹಾಸದಲ್ಲಿನ ಭಾರತಕ್ಕೂ, ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಚೀನಾಗೆ ನೆನಪಿಸಿದ್ದಾರೆ.

ET Online 30 Jun 2017, 6:18 pm
ಹೊಸದಿಲ್ಲಿ: ಇತಿಹಾಸ ನೆನಪಿಸಿಕೊಂಡು ಮುಂದಡಿ ಇಡಿ ಎಂದು ಗುರುವಾರ ಚೀನಾ ಕೊಟ್ಟಿರುವ ಹೇಳಿಕೆಗೆ ಕೇಂದ್ರ ರಕ್ಷಣಾ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ. ಇತಿಹಾಸದಲ್ಲಿನ ಭಾರತಕ್ಕೂ, ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಚೀನಾಗೆ ನೆನಪಿಸಿದ್ದಾರೆ.
Vijaya Karnataka Web indo china border row india of 2017 different from india of 1962 arun jaitley
1962ರ ಕಾಲದ ಭಾರತ ಈಗಿಲ್ಲ, ಚೀನಾಗೆ ಜೇಟ್ಲಿ ತಿರುಗೇಟು


ಸಿಕ್ಕಿಂ ಗಡಿಭಾಗದಲ್ಲಿ ನುಗ್ಗಿ ಬಂದದ್ದಷ್ಟೇ ಅಲ್ಲದೆ, ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದ ಕಾರಣ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಆದರೆ ಇದನ್ನು ಅಕ್ರಮ ಎಂದಿದ್ದ ಚೀನಾ ಇತಿಹಾಸವನ್ನು ನೆನಪಿಸಿಕೊಳ್ಳಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಸಿಕ್ಕಿಂ, ಭೂತಾನ್, ಟಿಬೆಟ್ ಗಡಿ ಪ್ರದೇಶಗಳಲ್ಲಿ ಭಾರತ ಸೇನೆ ದಾಳಿಗೆ ಮುಂದಾಗುತ್ತಿದೆ ಎಂದು ಚೀನಾ ಆರೋಪಿಸಿತ್ತು.

ಅಷ್ಟೇ ಅಲ್ಲದೆ 1962ರಲ್ಲಿ ಏನು ನಡೆಯಿತೋ ಒಮ್ಮೆ ಭಾರತ ಸೇನೆ ನೆನಪಿಸಿಕೊಳ್ಳಬೇಕೆಂದು ಎಚ್ಚರಿಕೆ ನೀಡಿತ್ತು. ಗಡಿಪ್ರದೇಶದಲ್ಲಿ ನಿಯೋಜಿಸಿರುವ ಭಾರತೀಯ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಚೀನಾದ ಸೇನೆ ಹಾಗೂ ಆ ದೇಶದ ವಿದೇಶಾಂಗ ಸಚಿವಾಲಯ ಎಚ್ಚರಿಸಿತ್ತು.

ಚೀನಾ ಹೇಳಿಕೆಗೆ ಅರುಣ್ ಜೇಟ್ಲಿ ಪ್ರತಿಕ್ರಿಯಿಸುತ್ತಾ, '1962ರ ಸಂಗತಿಯನ್ನು ನೆನಪು ಮಾಡಿದ್ದೀರ... ಆಗಿನ ಭಾರತವೇ ಬೇರೆ, ಈಗಿರುವ ಭಾರತವೇ ಬೇರೆ ಎಂಬುದನ್ನು ನೀವೂ ನೆನಪಿಸಿಕೊಳ್ಳಬೇಕು' ಎಂದಿದ್ದಾರೆ. ತಮ್ಮ ಗಡಿಭಾಗವನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದೆ ಎಂದು ಭೂತಾನ್ ಸರಕಾರ ಮಾಡಿರುವ ಆರೋಪವನ್ನು ಜೇಟ್ಲಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ನೆರೆ ರಾಷ್ಟ್ರಗಳ ಗಡಿಭಾಗವನ್ನು ಆಕ್ರಮಿಸಿಕೊಳ್ಳುವುದು ಸೂಕ್ತ ನಡೆಯಲ್ಲ ಎಂದು ಜೇಟ್ಲಿ ಚೀನಾಗೆ ಬುದ್ಧಿಮಾತು' ಹೇಳಿದ್ದಾರೆ. [ಇತಿಹಾಸದಿಂದ ಭಾರತೀಯ ಸೇನೆ ಪಾಠ ಕಲಿಯಬೇಕಿದೆ: ಚೀನಾ]

ಭಾರತವನ್ನು ಈಶಾನ್ಯ ರಾಷ್ಟ್ರಗಳ ಜತೆಗೆ ಸೇರಿಸುವ ದೊಕ್ಲಾಮ್ ಪ್ರದೇಶದ ಸಿಲಿಗುರಿ ಕಾರಿಡಾರ್ ಮೂಲಕ ತಮ್ಮ ಸೇನೆಯನ್ನು ಸಿಕ್ಕಿಂ-ಭೂತಾನ್-ಟಿಬೆಟ್‌ಳೊಂದಿಗೆ ಚೀನಾ ರಸ್ತೆ ಮಾರ್ಗವನ್ನು ನಿರ್ಮಿಸಬೇಕೆಂದಿದೆ. ಈ ವಿವಾದಾಸ್ಪದ ಪ್ರದೇಶದಲ್ಲಿ ರಸ್ತೆ ಮಾರ್ಗ ನಿರ್ಮಾಣಕ್ಕೆ ಸೇನೆ ತಡೆಯೊಡ್ಡಿತ್ತು. ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೂ ಚೀನಾದ 3,488 ಕಿ.ಮೀಗಳಷ್ಟಿರುವ ಗಡಿಭಾಗದಲ್ಲಿ 220 ಕಿ.ಮೀಗಳಷ್ಟು ಸಿಕ್ಕಿಂನಲ್ಲೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ