ಆ್ಯಪ್ನಗರ

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಷ್ಟೇ ದೊಡ್ಡ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್‌ ಮಂಡಳಿ ನಿರ್ಧಾರ

​​ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈಗಾಗಲೇ ಭೂಮಿ ಹಸ್ತಾಂತರ ನಡೆದಿದ್ದು, ಮಸೀದಿ ನಿರ್ಮಾಣದ ಉಸ್ತುವಾರಿಗಾಗಿ ಸುನ್ನಿ ವಕ್ಫ್‌ ಮಂಡಳಿಯು ‘ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ (ಐಐಸಿಎಫ್‌)’ ಎಂಬ ಟ್ರಸ್ಟ್‌ನ್ನು ರಚಿಸಿದೆ.

Agencies 5 Sep 2020, 8:46 pm
ಲಖನೌ: ಅಯೋಧ್ಯೆಯ ಧನ್ನಿಪುರದಲ್ಲಿ ಉತ್ತರ ಪ್ರದೇಶ ಸರಕಾರ ನೀಡಿರುವ ಐದು ಎಕರೆ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ಇದ್ದ ಬಾಬ್ರಿ ಮಸೀದಿಯಷ್ಟೇ ದೊಡ್ಡ ಮಸೀದಿಯನ್ನು ನಿರ್ಮಿಸಲು ಸುನ್ನಿ ವಕ್ಫ್‌ ಮಂಡಳಿ ನಿರ್ಧರಿಸಿದೆ.
Vijaya Karnataka Web ayodhya


ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರಕಾರವು ಈಗಾಗಲೇ ಭೂಮಿಯನ್ನು ಹಸ್ತಾಂತರಿಸಿದೆ. ಮಸೀದಿ ನಿರ್ಮಾಣದ ಉಸ್ತುವಾರಿಗಾಗಿ ಸುನ್ನಿ ವಕ್ಫ್‌ ಮಂಡಳಿಯು ‘ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ (ಐಐಸಿಎಫ್‌)’ ಎಂಬ ಟ್ರಸ್ಟ್‌ ರಚಿಸಿದೆ.

ಅಂದಾಜು 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಸೀದಿ ನಿರ್ಮಾಣಗೊಳ್ಳಲಿದೆ. ಉಳಿದ ಜಾಗ ಮಸೀದಿಯ ಸಂಕೀರ್ಣ ಪ್ರದೇಶವಾಗಿರಲಿದ್ದು, ವಸ್ತು ಸಂಗ್ರಹಾಲಯ, ಆಸ್ಪತ್ರೆ ಹಾಗೂ ಗ್ರಂಥಾಲಯಗಳು ಇರಲಿವೆ. ಮ್ಯೂಸಿಯಂ ವಿಚಾರವಾಗಿ ದಿಲ್ಲಿಯ ಜೆಎನ್‌ಯುನ ಪ್ರಾಧ್ಯಾಪಕ ಪುಷ್ಪೇಶ್‌ ಪಂಥ್‌ ಮಾರ್ಗದರ್ಶನ ನೀಡಲಿದ್ದಾರೆ. ನೂತನ ಮಸೀದಿ ಮತ್ತು ಅದರ ಸಂಕೀರ್ಣದ ವಿನ್ಯಾಸದ ಹೊಣೆಯನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ವಾಸ್ತುಶಿಲ್ಪ ಪ್ರಾಧ್ಯಾಪಕ ಎಸ್‌.ಎಂ. ಅಖ್ತರ್‌ ಅವರಿಗೆ ವಹಿಸಲಾಗಿದೆ.

"ಮಸೀದಿ ಸಂಕೀರ್ಣವು ಭಾರತದ ಸಂಸ್ಕೃತಿ ಮತ್ತು ಇಸ್ಲಾಂನ ಸ್ಪೂರ್ತಿಯ ಮೇಳೈಸುವಿಕೆಗೆ ಸಾಕ್ಷಿ ಎಂಬಂತೆ ನಿರ್ಮಾಣವಾಗಲಿದೆ,’’ ಎಂದು ಅಖ್ತರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ