ಅತ್ಯಾಚಾರ ಎಸಗಿ, ಗೋಣಿ ಚೀಲದಲ್ಲಿ ಕಟ್ಟಿ ರೈಲ್ವೇ ಹಳಿಗೆ ಎಸೆದ ಪಾಪಿಗಳು: ಮಧ್ಯ ಪ್ರದೇಶದಲ್ಲಿ ಘಟನೆ
ಕೋಚಿಂಗ್ ಕ್ಲಾಸ್ಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಮಾಜಿ ಪ್ರಿಯಕರ ಫ್ಲ್ಯಾಟ್ಗೆ ಕರೆದುಕೊಂಡು ಹೋಗಿ ಸ್ನೇಹಿತರೊಂದಿಗೆ ಸಾಮೂಹಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ರೈಲ್ವೇ ಹಳಿಗೆ ಎಸೆದಿದ್ದಾರೆ.
Vijaya Karnataka Web 21 Jan 2021, 10:06 am
ಹೈಲೈಟ್ಸ್:
- ಕಳೆದ ಒಂದು ವಾರದಿಂದ ಮಧ್ಯ ಪ್ರದೇಶದಲ್ಲಿ ಸಾಲು ಸಾಲು ಅತ್ಯಾಚಾರ ಪ್ರಕರಣ ದಾಖಲು
- ಮಹಿಳಾ ದೌರ್ಜನ್ಯ ವಿರೋಧಿಸಿ ಸರ್ಕಾರ ನಡೆಸುತ್ತಿರುವ ಅಭಿಯಾನದ ವೇಳೆಯೇ ದುಷ್ಕೃತ್ಯ
- ಯುವತಿಯ ಖಾಸಗಿ ಅಂಗಾಗಳಿಗೆ ಗಾಯ, ದವಡೆ ಮುರಿದಿದ್ದು, ದೇಹದಲ್ಲಿ ಇರಿದ ಗಾಯ
ಭೋಪಾಲ್: ಕಳೆದ ಹಲವು ದಿನಗಳಿಂದ ಸಾಲು ಸಾಲು ಭೀಕರ ಅತ್ಯಚಾರ ಪ್ರಕರಣಗಳಿದೆ ಸಾಕ್ಷಿಯಾಗುತ್ತಿರುವ ಮಧ್ಯ ಪ್ರದೇಶದಲ್ಲಿ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ದುರುಳರ ಗುಂಪೊಂದು ಸಾಮೂಹಿಕವಾಗಿ ಎರಗಿ, ಆಕೆಯನ್ನು ರೈಲ್ವೇ ಪಟ್ಟಿಯಲ್ಲಿ ಎಸೆದು ರಾಕ್ಷಸರಂತೆ ವರ್ತಿಸಿದ್ದಾರೆ. ಮಾಜಿ ಪ್ರಿಯಕರ ತನ್ನ ಸ್ನೇಹಿತರೊಡಗೂಡಿ ಈ ಮೃಗೀಯ ಕೃತ್ಯ ಎಸಗಿದ್ದಾನೆ. ನಂದಿಗ್ರಾಮದಲ್ಲಿರುವ ಫ್ಲ್ಯಾಟ್ ಒಂದಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆತ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಕೃತ್ಯ ನಡೆದಿರುವುದರ ಬಗ್ಗೆ ದೂರು ನೀಡುವುದಾಗಿ ಸಂತ್ರಸ್ತೆ ಅವರನ್ನು ಹೆದರಿಸಿದ್ದಾಳೆ. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಗೋಣಿ ಚೀಲವೊಂದರಲ್ಲಿ ತುಂಬಿಸಿ, ಅದರಲ್ಲಿ ಕಲ್ಲು ಮಣ್ಣುಗಳನ್ನು ತುಂಬಿಸಿ ಭಗೀರಥಪುರ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಎಸೆದಿದ್ದಾರೆ. ಗೋಣಿ ಚೀಲವನ್ನು ಮುರಿದು ಹೊರಬರುವಲ್ಲಿ ಆಕೆ ಯಶಸ್ವಿಯಾಗಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿಗೆ ಆಸ್ಪತ್ರೆಯಿಂದ ಮಾಹಿತಿ ಹೋಗಿದ್ದು, ಪೊಲೀಸರು ಆಸ್ಪತ್ರೆಗೆ ಧಾವಿಸಿ ಯುವತಿಯ ಮನೆಯವರಿಗೆ ಮಾಹಿತಿ ತಲುಪಿಸಿದ್ದಾರೆ. ಆಕೆಯ ಖಾಸಗಿ ಅಂಗಾಂಗಗಳಿಗೆ ಗಾಯಗಳಾಗಿದ್ದು, ದವಡೆ ಮುರಿದಿದೆ. ದೆಹದಲ್ಲಿ ಇರಿದ ಗಾಯಗಳೂ ಪತ್ತೆಯಾಗಿದೆ. ಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ನಾಗ್ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಪಟ್ನಿಪುರದಲ್ಲಿರುವ ಕೋಚಿಂಗ್ ಕ್ಲಾಸ್ಗೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಮುಖ್ಯ ಆರೋಪಿ ಹಾಗೂ ಆತನ ಸ್ನೇಹಿತ, ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
35 ವರ್ಷದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ದೂರು ದಾಖಲಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದಷ್ಟೇ 13 ವರ್ಷದ ಬಾಲಕಿಯ ಮೇಲೆ 9 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಮಧ್ಯ ಪ್ರದೇಶದಲ್ಲಿ ನಡೆದಿತ್ತು. ಇದಾದ ಬಳಿಕ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವಂತ ಸುಡಲು ಯತ್ನಿಸಿದ ಘಟನೆ ನಡೆದಿತ್ತು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ಹಮ್ಮಿಕೊಂಡಿರುವ ಸಮ್ಮಾನ್ ಅಭಿಯಾನದ ವೇಳೆಯಲ್ಲೇ ಈ ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ.
ಕೃತ್ಯ ನಡೆದಿರುವುದರ ಬಗ್ಗೆ ದೂರು ನೀಡುವುದಾಗಿ ಸಂತ್ರಸ್ತೆ ಅವರನ್ನು ಹೆದರಿಸಿದ್ದಾಳೆ. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಗೋಣಿ ಚೀಲವೊಂದರಲ್ಲಿ ತುಂಬಿಸಿ, ಅದರಲ್ಲಿ ಕಲ್ಲು ಮಣ್ಣುಗಳನ್ನು ತುಂಬಿಸಿ ಭಗೀರಥಪುರ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಎಸೆದಿದ್ದಾರೆ. ಗೋಣಿ ಚೀಲವನ್ನು ಮುರಿದು ಹೊರಬರುವಲ್ಲಿ ಆಕೆ ಯಶಸ್ವಿಯಾಗಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿಗೆ ಆಸ್ಪತ್ರೆಯಿಂದ ಮಾಹಿತಿ ಹೋಗಿದ್ದು, ಪೊಲೀಸರು ಆಸ್ಪತ್ರೆಗೆ ಧಾವಿಸಿ ಯುವತಿಯ ಮನೆಯವರಿಗೆ ಮಾಹಿತಿ ತಲುಪಿಸಿದ್ದಾರೆ. ಆಕೆಯ ಖಾಸಗಿ ಅಂಗಾಂಗಗಳಿಗೆ ಗಾಯಗಳಾಗಿದ್ದು, ದವಡೆ ಮುರಿದಿದೆ. ದೆಹದಲ್ಲಿ ಇರಿದ ಗಾಯಗಳೂ ಪತ್ತೆಯಾಗಿದೆ. ಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ನಾಗ್ಪುರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಪಟ್ನಿಪುರದಲ್ಲಿರುವ ಕೋಚಿಂಗ್ ಕ್ಲಾಸ್ಗೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಮುಖ್ಯ ಆರೋಪಿ ಹಾಗೂ ಆತನ ಸ್ನೇಹಿತ, ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
35 ವರ್ಷದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ದೂರು ದಾಖಲಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದಷ್ಟೇ 13 ವರ್ಷದ ಬಾಲಕಿಯ ಮೇಲೆ 9 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಮಧ್ಯ ಪ್ರದೇಶದಲ್ಲಿ ನಡೆದಿತ್ತು. ಇದಾದ ಬಳಿಕ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೀವಂತ ಸುಡಲು ಯತ್ನಿಸಿದ ಘಟನೆ ನಡೆದಿತ್ತು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ಹಮ್ಮಿಕೊಂಡಿರುವ ಸಮ್ಮಾನ್ ಅಭಿಯಾನದ ವೇಳೆಯಲ್ಲೇ ಈ ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ.