ಆ್ಯಪ್ನಗರ

ತ್ಯಾಜ್ಯ ಬಳಸಿ ಕಾಡು ಬೆಳೆಸಿದ ಇಂಧೋರ್‌ನ ಅಧಿಕಾರಿ

ನಗರದಲ್ಲಿ ಆರು ತಿಂಗಳಿನಲ್ಲಿ ಸಂಗ್ರಹವಾದ ಒಟ್ಟು ತ್ಯಾಜ್ಯ 13 ಲಕ್ಷ ಟನ್‌ಗೂ ಅಧಿಕ. ಅದರಲ್ಲಿ ತ್ಯಾಜ್ಯದ ಪುನರ್ಬಳಕೆ ಮತ್ತು ತ್ಯಾಜ್ಯವನ್ನೇ ಗೊಬ್ಬರವನ್ನಾಗಿ ಪರಿವರ್ತಿಸಿದ್ದು, ಅದೇ ಗೊಬ್ಬರ ಬಳಸಿ ಡಂಪಿಂಗ್ ಯಾರ್ಡ್‌ಗೆ ಒದಗಿಸಿದ್ದ 100 ಎಕರೆಯಲ್ಲಿ ಕಾಡು ಬೆಳೆಸಲಾಗುತ್ತಿದೆ.

Vijaya Karnataka Web 31 Jan 2019, 4:17 pm
ಇಂಧೋರ್: ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ ಅತ್ಯಂತ ಸ್ವಚ್ಛ ನಗರಿ, ಮಾಲಿನ್ಯ ಮುಕ್ತ ನಗರಿ ಎಂಬ ಪಟ್ಟ ಪಡೆಯಲು ದೇಶದ ವಿವಿಧ ನಗರಿಗಳು ಸ್ಪರ್ಧಿಸಿದ್ದವು. ಆದರೆ ಮಧ್ಯಪ್ರದೇಶದ ಇಂಧೋರ್‌ ನಗರಿ ಮಾತ್ರ ಎಲ್ಲ ನಗರಗಳನ್ನು ಹಿಂದಿಕ್ಕಿ ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
Vijaya Karnataka Web garden_1548833911_725x725


ಆದರೆ ಸ್ವಚ್ಛ ನಗರಿ ಎಂಬ ಪಟ್ಟ ಪಡೆಯಲು ಇಂಧೋರ್‌ ಜನತೆ, ಇಂಧೋರ್ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಇಂಧೋರ್ ಮುನ್ಸಿಪಲ್ ಕಮಿಷನರ್, ಆಶೀಶ್ ಸಿಂಗ್ ಅವರ ಶ್ರಮವಿದೆ. ಕಸವನ್ನು ವಿಂಗಡಿಸಿ, ಅದರಿಂದ ಗೊಬ್ಬರ ತಯಾರಿಸುವುದು ಮತ್ತು ತ್ಯಾಜ್ಯದ ಪುನರ್ಬಳಕೆ ಬಗ್ಗೆ ಅವರಿಗಿದ್ದ ಯೋಚನೆ, ಮತ್ತು ಕಸ ನಿರ್ವಹಣೆಯ ಕುರಿತು ಕೈಗೊಂಡ ಕ್ರಮಗಳು ಇಂಧೋರ್‌ಗೆ ಸ್ವಚ್ಛ ನಗರಿ ಪಟ್ಟ ತಂದುಕೊಟ್ಟಿವೆ.

ನಗರದಲ್ಲಿ ಆರು ತಿಂಗಳಿನಲ್ಲಿ ಸಂಗ್ರಹವಾದ ಒಟ್ಟು ತ್ಯಾಜ್ಯ 13 ಲಕ್ಷ ಟನ್‌ಗೂ ಅಧಿಕ. ಅದರಲ್ಲಿ ತ್ಯಾಜ್ಯದ ಪುನರ್ಬಳಕೆ ಮತ್ತು ತ್ಯಾಜ್ಯವನ್ನೇ ಗೊಬ್ಬರವನ್ನಾಗಿ ಪರಿವರ್ತಿಸಿದ್ದು, ಅದೇ ಗೊಬ್ಬರ ಬಳಸಿ ಡಂಪಿಂಗ್ ಯಾರ್ಡ್‌ಗೆ ಒದಗಿಸಿದ್ದ 100 ಎಕರೆಯಲ್ಲಿ ಕಾಡು ಬೆಳೆಸಲಾಗುತ್ತಿದೆ.

ನೂರು ಎಕರೆ ಪೈಕಿ 90 ಎಕರೆ ಕಾಡು ಮತ್ತು 10 ಎಕರೆ ಪಾರ್ಕ್‌ ನಿರ್ಮಿಸಿ, ಅದರಿಂದ ನಗರಕ್ಕೆ ಶುದ್ಧ ಗಾಳಿ, ಜನರಿಗೆ ನಗರದಲ್ಲೇ ಉತ್ತಮ ಸೌಕರ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಅತ್ಯಾಧುನಿಕ ತ್ಯಾಜ ಸಂಸ್ಕರಣೆ ಮತ್ತು ತ್ಯಾಜ್ಯ ನಿರ್ವಹಣೆ ಕ್ರಮ ಬಳಸಿದ್ದು, ಪ್ಲಾಸ್ಟಿಕ್, ರಬ್ಬರ್, ಪೇಪರ್ ಹೀಗೆ ಪ್ರತಿಯೊಂದನ್ನೂ ಮರುಬಳಕೆ, ಸೂಕ್ತ ರೀತಿಯಲ್ಲಿ ವಿಸರ್ಜನೆಗೆ ಕ್ರಮ ಕೈಗೊಂಡಿದ್ದರಿಂದ ಡಂಪಿಂಗ್ ಯಾರ್ಡ್‌ ಖಾಲಿ ಮಾಡಿ, ಅದರಲ್ಲೇ ಕಾಡು ನಿರ್ಮಿಸುವ ಯೋಚನೆ ಕೈಗೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ