ಆ್ಯಪ್ನಗರ

ಕುದುರೆ ಕೈಕಾಲು ಕಟ್ಟಿ ಪೊಲೀಸರ ಎದುರೇ ಬಡಿದು ಕೊಂದರು

ಕುದುರೆಯೊಂದನ್ನು ಹಗ್ಗದಿಂದ ಬಿಗಿದು ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಕಟ್ಟು ಬಡಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Indiatimes 9 Aug 2017, 7:07 pm
ಚಂಡೀಗಡ: ಕುದುರೆಯೊಂದನ್ನು ಹಗ್ಗದಿಂದ ಬಿಗಿದು ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಕಟ್ಟಿ ಬಡಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Vijaya Karnataka Web inhuman mob tortured strangled a horse in full public view in haryana cops kept watching
ಕುದುರೆ ಕೈಕಾಲು ಕಟ್ಟಿ ಪೊಲೀಸರ ಎದುರೇ ಬಡಿದು ಕೊಂದರು


ಮಂಗಳವಾರದಂದು ಹರಿಯಾಣದ ಜಿಂದ್ ಪ್ರದೇಶದ ಗೊಹಾನಾ ರಸ್ತೆಯಲ್ಲಿ ಘಟನೆ ನಡೆದಿದೆ. ಸ್ಥಳದಲ್ಲೇ ಪೊಲೀಸರು ಇದ್ದರೂ ಹೇಯ ಕೃತ್ಯವನ್ನು ತಡೆಯದೇ ಕೈಕಟ್ಟಿ ತಮಾಷೆ ನೋಡಿದ್ದಾರೆ.

ಈ ಕುದುರೆ ಬೀದಿಗಳಲ್ಲಿ ಅಲೆದಾಡಿಕೊಂಡಿದ್ದು, ಹತ್ತಿರದ ಮಾರುಕಟ್ಟೆ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿತ್ತು ಎಂದು ಇಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ರೋಸಿಹೋದ ಕೆಲ ವ್ಯಕ್ತಿಗಳು ಕುದುರೆಯ ಕಾಲುಗಳು ಹಾಗೂ ಬಾಯಿಗೆ ಹಗ್ಗ ಕಟ್ಟಿ ಎಲ್ಲಾ ದಿಕ್ಕಿನಿಂದ ಎಳೆದು ಬಡಿದು ಕೊಲೆ ಮಾಡಿದ್ದಾರೆ.
ಆದರೆ ವೀಡಿಯೋದಲ್ಲಿ ಇಬ್ಬರು ಪೊಲೀಸರು ಕೃತ್ಯಕ್ಕೆ ಸಹಾಯ ಮಾಡುತ್ತಿದ್ದದ್ದು ಸೆರೆಯಾಗಿದೆ. ಒಟ್ಟಾರೆ 10 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಕ್ತಿಮಾನ್‌ಗೂ ಇದೇ ರೀತಿ ಸಾವು
ಕಳೆದ ವರ್ಷ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ಪೊಲೀಸ್‌ ಕುದುರೆ "ಶಕ್ತಿಮಾನ್‌' ಮೇಲೆ ಉತ್ತರಾಖಂಡದ ಬಿಜೆಪಿ ಶಾಸಕ ಗಣೇಶ ಜೋಶಿ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಶಕ್ತಿಮಾನ್‌ ಕಾಲು ಕಳೆದುಕೊಂಡು ಸುಮಾರು ಒಂದು ತಿಂಗಳ ಬಳಿಕ ಮೃತಪಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ