ಹೊಸದಿಲ್ಲಿ: ಭಾರತ-ಪಾಕಿಸ್ತಾನ ಮಧ್ಯೆ ಬಿಗುವಿನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾದ ಪುಲ್ವಾಮಾ ಉಗ್ರ ದಾಳಿ ಬಳಿಕ ಇದೇ ಮೊದಲ ಬಾರಿಗೆ ಭಾರತ ನೌಕಾಪಡೆ ಉತ್ತರ ಅರಬ್ಬಿ ಸಮುದ್ರ ತೀರದಲ್ಲಿ ಯುದ್ಧ ನೌಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುತ್ತಿದೆ. ಯುದ್ಧ ಸನ್ನದ್ಧ ಸ್ಥಿತಿಯ ಭಾಗವಾಗಿ ಕೇರಳದ ಕೊಚ್ಚಿ ತೀರದಲ್ಲಿ ನಡೆಯುತ್ತಿರುವ 'ಟ್ರಪೋಕ್ಸ್-19(ಥೇಟರ್ ಲೆವೆಲ್ ರೆಡಿನೆಸ್ ಅಂಡ್ ಆಪರೇಷನಲ್ ಎಕ್ಸಸೈಸ್) ಸಮರಾಭ್ಯಾಸದ ಭಾಗವಾಗಿ ಯುದ್ಧ ನೌಕೆಗಳು ನಿಯೋಜನೆಗೊಂಡಿವೆ. ಐಎನ್ಎಸ್ ವಿಕ್ರಮಾದಿತ್ಯ, ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿಗಳು ಹಾಗೂ 60ಕ್ಕೂ ಹೆಚ್ಚು ನೌಕೆಗಳು ಟ್ರಪೋಕ್ಸ್ ಭಾಗವಾಗಿವೆ. ಪುಲ್ವಾಮಾ ದಾಳಿ ನಂತರ ಭಾರತವು ಪಾಕಿಸ್ತಾನದ ಬಾಲಾಕೋಟ್ ಜೈಷೆ ಉಗ್ರ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು. ಸಮುದ್ರ ಮಾರ್ಗದ ಮೂಲಕ ಪಾಕ್ ಕೃಪಾಪೋಷಿತ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ನೌಕಾಬಲವನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಉತ್ತರ ಅರಬ್ಬಿ ಸಮುದ್ರ ತೀರದಲ್ಲಿ ಯುದ್ಧ ನೌಕೆಗಳ ನಿಯೋಜನೆ
ಐಎನ್ಎಸ್ ವಿಕ್ರಮಾದಿತ್ಯ, ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿಗಳು ಹಾಗೂ 60ಕ್ಕೂ ಹೆಚ್ಚು ನೌಕೆಗಳು ಟ್ರಪೋಕ್ಸ್ ಭಾಗವಾಗಿವೆ.
Vijaya Karnataka 18 Mar 2019, 5:00 am