ಆ್ಯಪ್ನಗರ

ಟಿವಿ ಆ್ಯಂಕರ್‌ ಸವಾಲು ಸರ್ಜಕಿಲ್‌ ದಾಳಿಗೆ ಕಾರಣ: ಪರಿಕರ್‌

ಸೇನೆಯ ಧೈರ್ಯಕ್ಕೆ ಸವಾಲು ಹಾಕುವಂಥ ಟಿವಿ ಆ್ಯಂಕರ್‌ ಪ್ರಶ್ನೆಯೇ ಪಿಓಕೆಯಲ್ಲಿ ಕಳೆದ ವರ್ಷ ಸರ್ಜಿಕಲ್‌ ದಾಳಿ ನಡೆಸಲು ಕಾರಣ ಎಂದು ಮಾಜಿ ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 1 Jul 2017, 2:24 pm
ಪಣಜಿ: ಸೇನೆಯ ಧೈರ್ಯಕ್ಕೆ ಸವಾಲು ಹಾಕುವಂಥ ಟಿವಿ ಆ್ಯಂಕರ್‌ ಪ್ರಶ್ನೆಯೇ ಪಿಓಕೆಯಲ್ಲಿ ಕಳೆದ ವರ್ಷ ಸರ್ಜಿಕಲ್‌ ದಾಳಿ ನಡೆಸಲು ಕಾರಣ ಎಂದು ಮಾಜಿ ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಹೇಳಿದ್ದಾರೆ.
Vijaya Karnataka Web insulting question led to planning of pok surgical strikes manohar parrikar
ಟಿವಿ ಆ್ಯಂಕರ್‌ ಸವಾಲು ಸರ್ಜಕಿಲ್‌ ದಾಳಿಗೆ ಕಾರಣ: ಪರಿಕರ್‌


2015ರಲ್ಲಿ ಮ್ಯಾನ್ಮರ್‌ ಗಡಿ ಭಾಗದಲ್ಲಿ ನಡೆದ ಉಗ್ರ ದಮನ ಕಾರ್ಯಾಚರಣೆ ನಂತರ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್ ರಾಥೋಡ್‌ ಅವರಿಗೆ ಟಿವಿ ಆ್ಯಂಕರ್‌ ಸವಾಲು ಹಾಕುವಂಥ ಪ್ರಶ್ನೆ ಕೇಳಿದ್ದರು. ಆಗಲೇ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು ಎಂದು ಪರಿಕರ್‌ ವಿವರಿಸಿದ್ದಾರೆ.

ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕರ್‌, 'ಪಿಓಕೆಯಲ್ಲಿ ಉಗ್ರರ ವಿರುದ್ಧದ ಸರ್ಜಿಕಲ್‌ ದಾಳಿಗೆ 15 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು,'ಎಂದು ಹೇಳಿದರು.

ಆ್ಯಂಕರ್‌ ಸವಾಲೇನು :
'ಮಾಜಿ ಯೋಧ, ಕೇಂದ್ರ ಸಚಿವ ರಾಜ್ಯವರ್ಧನ್‌ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮ್ಯಾನ್ಮಾರ್‌ ದಾಳಿ ಬಗ್ಗೆ ಚರ್ಚಿಸುತ್ತಾ, ದೇಶದ ಪಶ್ಚಿಮ ಭಾಗದಲ್ಲಿ ಇದೇ ರೀತಿ ದಾಳಿ ನಡೆಸುವ ಧೈರ್ಯ ನಿಮಗಿದೆಯೇ ಎಂದು ಆ್ಯಂಕರ್‌ ಪ್ರಶ್ನಿಸಿದ್ದರು. ಅದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿ, ಸೂಕ್ತ ಸಂದರ್ಭದಲ್ಲಿ ಉತ್ತರಿಸಬೇಕು ಎಂದು ನಿರ್ಧರಿಸಿದೆ,'ಎಂದು ಹೇಳಿದ್ದಾರೆ.

'ದೇಶದ ಪಶ್ಚಿಮ ಗಡಿಯಲ್ಲಿ 2016ರ ಸೆಪ್ಟೆಂಬರ್ 29ರಂದು ನಡೆದ ಸರ್ಜಿಕಲ್‌ ದಾಳಿಯ ಯೋಜನೆಯನ್ನು 2015 ಜೂನ್‌ 9ರಂದೇ ರೂಪಿಸಲಾಗಿತ್ತು,' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ