ಆ್ಯಪ್ನಗರ

ಅಯ್ಯಪ್ಪ ಭಕ್ತರ ಮೇಲೆ ಉಗ್ರ ದಾಳಿ: ತ್ರಿಶೂರ್‌ ರೈಲ್ವೆ ನಿಲ್ದಾಣಕ್ಕೆ ಪೊಲೀಸರ ಎಚ್ಚರಿಕೆ

ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರ ಮೇಲೆ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಗುಪ್ತಚರ ಮಾಹಿತಿಯನ್ನಾಧರಿಸಿ ರೈಲ್ವೆ ಪೊಲೀಸರಿಗೆ ಜಾಗೃತರಾಗಿರುವಂತೆ ರಾಜ್ಯ ಪೊಲೀಸರು ಸೂಚಿಸಿದ್ದಾರೆ.

Vijaya Karnataka Web 27 Nov 2017, 3:17 pm
ತ್ರಿಶೂರ್: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರ ಮೇಲೆ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಗುಪ್ತಚರ ಮಾಹಿತಿಯನ್ನಾಧರಿಸಿ ರೈಲ್ವೆ ಪೊಲೀಸರಿಗೆ ಜಾಗೃತರಾಗಿರುವಂತೆ ರಾಜ್ಯ ಪೊಲೀಸರು ಸೂಚಿಸಿದ್ದಾರೆ.
Vijaya Karnataka Web intel warns of is threat at thrissur railway station
ಅಯ್ಯಪ್ಪ ಭಕ್ತರ ಮೇಲೆ ಉಗ್ರ ದಾಳಿ: ತ್ರಿಶೂರ್‌ ರೈಲ್ವೆ ನಿಲ್ದಾಣಕ್ಕೆ ಪೊಲೀಸರ ಎಚ್ಚರಿಕೆ


ಇರಾಕ್ ಹಾಗೂ ಸಿರಿಯಾ ಮೂಲದ ಐಸಿಸ್ ಉಗ್ರರು ನೀರಿಗೆ ವಿಷ ಬೆರೆಸಿ, ಅಯ್ಯಪ್ಪ ಭಕ್ತರನ್ನು ಬೆದರಿಸುವ ಸಾಧ್ಯತೆ ಇರುವುದಾಗಿ ತ್ರಿಶೂರ್ ರೈಲ್ವೆ ನಿಲ್ದಾಣದ ಮ್ಯಾನೇಜರ್‌ಗೆ ಬರೆದ ಪತ್ರದಲ್ಲಿ ರಾಜ್ಯ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ಪ್ರಯಾಣಿಕರಿಗೆ ಆಹಾರ ಹಾಗೂ ನೀರನ್ನು ಪೂರೈಸುವಾಗ ರೈಲ್ವೆ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು, ಕೋರಿಕೊಳ್ಳಲಾಗಿದೆ.

ಉಗ್ರರ ಬೆದರಿಕೆ ಬಗ್ಗೆ ಸಾಕಷ್ಟು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು. ಇಂಥ ಸಂದೇಶಗಳಿಗೆ ಸುಖಾಸುಮ್ಮನೆ ಭಯಗೊಳ್ಳುವ ಅಗತ್ಯವೂ ಇಲ್ಲವೆಂದು ಪೊಲೀಸರು ಭಕ್ತರಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ