ಆ್ಯಪ್ನಗರ

ಇಡಿ ವಿಚಾರಣೆಗೆ ದಿಲ್ಲಿ ಕೋರ್ಟ್‌ ಅಸ್ತು, ಚಿದಂಬರಂಗೆ ಬಿಗಿಯಾದ ಐಎನ್ಎಕ್ಸ್‌ ಉರುಳು

ವಿಶೇಷ ನ್ಯಾಯಾಲಯ ಚಿದಂಬರಂರನ್ನು ಬುಧವಾರ ತಿಹಾರ್‌ ಜೈಲಿನಲ್ಲಿ ವಿಚಾರಣೆ ನಡೆಸಲು ಅನುವು ಮಾಡಿಕೊಟ್ಟಿದೆ. ವಿಚಾರಣೆ ನಂತರ ಅಗತ್ಯ ಬಿದ್ದರೆ ಬಂಧಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

Vijaya Karnataka Web 15 Oct 2019, 6:50 pm
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿಚಾರಣೆಗೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಗೆ ದೆಹಲಿ ನ್ಯಾಯಾಲಯ ಒಪ್ಪಿಗೆ ನೀಡಿದೆ.
Vijaya Karnataka Web Former finance minister P Chidambaram


ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ ಕುಮಾರ್ ಕುಹರ್‌ ಇಡಿ ವಿಚಾರಣೆಗೆ ಒಪ್ಪಿಗೆ ನೀಡಿದ್ದಾರೆ. ಅಕ್ಟೋಬರ್‌ 17ರ ವರೆಗೆ ಚಿದಂಬರಂ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ತನಿಖಾ ಸಂಸ್ಥೆ ತಿಹಾರ್‌ ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಬಹುದು ಮತ್ತು ಅಗತ್ಯ ಬಿದ್ದರೆ ಬಂಧಿಸಬಹುದು ಎಂಬುದಾಗಿ ಅದೇಶಿಸಿದ್ದಾರೆ.

'ತನ್ನ ವಶಕ್ಕೆ ಒಪ್ಪಿಸುವಂತೆ ಇಡಿ ಕೋರಿಕೊಂಡಿರುವುದು ಈ ಹಂತದಲ್ಲಿ ಆತುರದ ನಿರ್ಧಾರವಾಗಿದೆ' ಎಂಬುದಾಗಿ ನ್ಯಾಯಾಲಯ ವಿಚಾರಣೆಯ ಆರಂಭದಲ್ಲಿ ಅಭಿಪ್ರಾಯಪಟ್ಟಿತು. ಈ ಆದೇಶ ನೀಡಿದ ನಂತರ ಚಿದಂಬರಂ ವಿಚಾರಣೆಗೆ ನ್ಯಾಯಾಲಯದಲ್ಲೇ ಅವಕಾಶ ನೀಡುವಂತೆ ಇಡಿ ಮನವಿ ಮಾಡಿಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, “ಈ ವ್ಯಕ್ತಿಯ ಘನತೆಗೆ ತಕ್ಕಂತೆ ನೀವು ಅವರನ್ನು ಸಾರ್ವಜನಿಕವಾಗಿ ವಿಚಾರಣೆ ಮಾಡಿ ಬಂಧಿಸುವುದು ಸರಿಯಲ್ಲ,” ಎಂದು ಅಭಿಪ್ರಾಯಪಟ್ಟಿತು.

ಬಳಿಕ ವಿಶೇಷ ನ್ಯಾಯಾಲಯ ಚಿದಂಬರಂರನ್ನು ಬುಧವಾರ ತಿಹಾರ್‌ ಜೈಲಿನಲ್ಲಿ ವಿಚಾರಣೆ ನಡೆಸಲು ಅನುವು ಮಾಡಿಕೊಟ್ಟಿತು. ವಿಚಾರಣೆ ನಂತರ ಅಗತ್ಯ ಬಿದ್ದರೆ ಬಂಧಿಸುವಂತೆ ಸೂಚಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ